ಕರ್ನಾಟಕ

karnataka

By

Published : Jan 17, 2020, 11:35 PM IST

ETV Bharat / state

ಬಾಗಲಕೋಟೆ ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆ

ಬಾಗಲಕೋಟೆ ಜಿಲ್ಲಾ ಪಂಚಾಯತ್​ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆ ನಡೆಯಿತು.

ಸಾಮಾನ್ಯ ಸಭೆ
ಸಾಮಾನ್ಯ ಸಭೆ

ಬಾಗಲಕೋಟೆ:ಜಿಲ್ಲಾ ಪಂಚಾಯತ್​ ಸಭಾಭವನದಲ್ಲಿ 11ನೇ ಸಾಮಾನ್ಯ ಸಭೆಯು ಅಧ್ಯಕ್ಷೆ ಬಾಯಕ್ಕ ಮೇಟಿ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಗುಡೂರ ಜಿ.ಪಂ ಸದಸ್ಯ ಶಶಿಕಾಂತ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅವ್ಯವಹಾರ ಬಗ್ಗೆ ಕಿಡಿಕಾರಿದರು. ಈ ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಸಿಇಓ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಇಓ ಗಂಗೂಬಾಯಿ ಮಾನಕರ್, ಸದಸ್ಯರ ಫೋನು ಸ್ವೀಕರಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ 11ನೇ ಸಾಮಾನ್ಯ ಸಭೆಯಲ್ಲಿ ಗದ್ದಲ

ಬಳಿಕ ವೇದಿಕೆಯ ಮುಂದೆ ಬಂದ ಶಶಿಕಾಂತ ಪಾಟೀಲ, ಈ ಯೋಜನೆ ಬಗ್ಗೆ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯ ಮಾಹಿತಿಯನ್ನು ಲಿಖಿತ ರೂಪದಲ್ಲಿ ದಾಖಲೆ ನೀಡಿ, ಇಲ್ಲವೇ ರಾಜಿನಾಮೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು .

ABOUT THE AUTHOR

...view details