ಕರ್ನಾಟಕ

karnataka

By

Published : Feb 22, 2021, 7:33 PM IST

ETV Bharat / state

ಟ್ರ್ಯಾಕ್ಟರ್​ ಪಲ್ಟಿ: ಇಬ್ಬರು ಸ್ಥಳದಲ್ಲೇ ಸಾವು

ಸಿಂಧನೂರಿನಿಂದ ಬೀಳಗಿ ತಾಲೂಕಿನ ಬಾಡಗಂಡಿ ಶುಗರ್ಸ್ ಫ್ಯಾಕ್ಟರಿಗೆ ಸಿಮೆಂಟ್ ಕಂಬಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್​ ತುಂಬ ಕ್ರಾಸ್ ಬಳಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

Bagalkot tractor accident
ಟ್ರ್ಯಾಕ್ಟರ್​ ಪಲ್ಟಿ ಇಬ್ಬರು ಸಾವು

ಬಾಗಲಕೋಟೆ: ಟ್ರ್ಯಾಕ್ಟರ್​ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತ ಪಟ್ಟಿರುವ ಘಟನೆ ಜಿಲ್ಲೆಯ ಇಲಕಲ್ಲ ತಾಲೂಕಿನ ತುಂಬ ಗ್ರಾಮದ ಬಳಿ ಜರುಗಿದೆ.

ಮೃತ ಪಟ್ಟವರನ್ನು ಶಿವಕುಮಾರ್ ಲಿಂಗಪ್ಪ ಕಿಡದೂರು (30) ಹಾಗೂ ಪ್ರಭುಸ್ವಾಮಿ ಶಿವಲಿಂಗಯ್ಯ ಹೊಸಮಠ (40) ಎಂದು ಗುರುತಿಸಲಾಗಿದೆ.

ಸಿಂಧನೂರಿನಿಂದ ಬೀಳಗಿ ತಾಲೂಕಿನ ಬಾಡಗಂಡಿ ಶುಗರ್ಸ್ ಫ್ಯಾಕ್ಟರಿಗೆ ಸಿಮೆಂಟ್ ಕಂಬಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ ತುಂಬ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಇಳಕಲ್ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಳಕಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details