ಕರ್ನಾಟಕ

karnataka

ETV Bharat / state

ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆ ನಿಷೇಧ - ಬನಶಂಕರಿದೇವಿ ಜಾತ್ರೆ ನಿಷೇಧ

ಕೋವಿಡ್ ಎರಡನೇ ಅಲೆಯ ಭೀತಿ ನಿಮಿತ್ತ ಜನರ ಹಿತದೃಷ್ಟಿಯಿಂದ ಈ ಬಾರಿಯ ಬನಶಂಕರಿದೇವಿ ಜಾತ್ರೆಯನ್ನು ನಿಷೇಧಿಸಲಾಗಿದೆ.

badami-banashankari
ಬಾದಾಮಿ-ಬನಶಂಕರಿದೇವಿ

By

Published : Dec 13, 2020, 8:16 PM IST

ಬಾಗಲಕೋಟೆ: ಬರುವ ಜನವರಿ 15 ರಿಂದ 30ರ ವರೆಗೆ ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ದರ್ಶನವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಬನಶಂಕರಿದೇವಿ ದರ್ಶನವನ್ನು ನಿಷೇಧದ ಬಗ್ಗೆ ತಿಳಿಸಿದ ಜಿಲ್ಲಾಧಿಕಾರಿ

ಬಾದಾಮಿ ತಾ.ಪಂ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯ ಭೀತಿ ನಿಮಿತ್ತ ಜನರ ಹಿತದೃಷ್ಟಿಯಿಂದ ಜನವರಿ 15 ರಿಂದ 30ರ ವರೆಗೆ ಸಾರ್ವಜನಿಕರು ಬನಶಂಕರಿದೇವಿ ದರ್ಶನ ಪಡೆಯುವುದನ್ನು ನಿಷೇಧಿಸಲಾಗಿದೆ. ಅರ್ಚಕರು ಗುಡಿಯೊಳಗೆ ಪೂಜೆ ಮಾಡಬಹುದು. ಇದಕ್ಕೆ ಟ್ರಸ್ಟ್ ಕಮಿಟಿಯವರು ಒಪ್ಪಿಕೊಂಡಿದ್ದಾರೆ ಎಂದರು.

ಓದಿ:ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಪ್ರಧಾನಿ ಆಗಬೇಕೆಂಬ ಆಸೆಯೂ ಇಲ್ಲ: ಸಿದ್ದರಾಮಯ್ಯ

ಬಾದಾಮಿ ಜನರ ಅನುಕೂಲಕ್ಕಾಗಿ ಈ ಬಾರಿಯ ಜಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದರು. ಈ ಸಂದರ್ಭದಲ್ಲಿ ಎಸ್.ಪಿ.ಲೋಕೇಶ ಜಗಲಾಸರ, ಚುನಾವಣಾಧಿಕಾರಿ ಸುಹಾಸ ಇಂಗಳೆ ಹಾಜರಿದ್ದರು.

ABOUT THE AUTHOR

...view details