ಕರ್ನಾಟಕ

karnataka

ETV Bharat / state

ಸಂಗಮನಾಥನಿಗೆ ಜಲ ದಿಗ್ಬಂಧನ : ಕೂಡಲಸಂಗಮದಲ್ಲಿ ದರುಶನಕ್ಕಿಲ್ಲ ಭಾಗ್ಯ! - ಶ್ರೀಮತಿ ರಾಜಶ್ರೀ ಅಗಸರ

ಕೃಷ್ಣ, ಮಲ್ಲಪ್ರಭಾ ನದಿಯ ಪ್ರವಾಹ ಹೆಚ್ಚಿರುವುದರಿಂದ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವ ಕೂಡಲಸಂಗಮಕ್ಕೆ ಪ್ರವಾಹ ಇಳಿಯುವವರೆಗೂ ಭಕ್ತರು ಬರಬಾರದೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ರಾಜಶ್ರೀ ಅಗಸರ ಮನವಿ ಮಾಡಿಕೊಂಡಿದ್ದಾರೆ.

ಸಂಗಮನಾಥನಿಗೆ ಜಲ ದಿಗ್ಬಂಧನ

By

Published : Aug 12, 2019, 4:47 AM IST

ಬಾಗಲಕೋಟೆ: ಕೃಷ್ಣ, ಮಲ್ಲಪ್ರಭಾ ನದಿಯ ಪ್ರವಾಹ ಹೆಚ್ಚಿರುವುದರಿಂದ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವ ಕೂಡಲಸಂಗಮಕ್ಕೆ ಪ್ರವಾಹ ಇಳಿಯುವವರೆಗೂ ಭಕ್ತರು ಬರಬಾರದೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ರಾಜಶ್ರೀ ಅಗಸರ ಮನವಿ ಮಾಡಿಕೊಂಡಿದ್ದಾರೆ.

ಸಂಗಮನಾಥನಿಗೆ ಜಲ ದಿಗ್ಬಂಧನ

ಕೂಡಲಸಂಗಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಪುರಸ್ಕಾರ ಮಾಡುತ್ತಿದ್ದರು. ಆದರೆ ಈಬಾರಿ ಶ್ರಾವಣ ಮಾಸ ಮುಗಿಯುವವರೆಗೂ ಸಂಗಮನಾಥ ದರುಶನದ ಭಾಗ್ಯ ಇಲ್ಲದೆ ಭಕ್ತರು ಪರದಾಡುವಂತಾಗಿದೆ.

ಇತಿಹಾಸದಲ್ಲಿಯೇ ಇದೇ ಮೊದಲು ಭಾರಿಗೆ ಕೂಡಲಸಂಗಮದಲ್ಲಿ ಇಷ್ಟೊಂದು ನೀರು ಬರುತ್ತಿರುವುದು. ಸಂಗಮನಾಥ ದೇವಸ್ಥಾನದ ಆವರಣ ಸೇರಿದಂತೆ ಕೆಳ ಭಾಗದಲ್ಲಿ ಇರುವ ಮುಖ್ಯ ರಸ್ತೆಯು ಜಲಾವೃತಗೊಂಡಿದೆ. ಇದರಿಂದ ಅಂಗಡಿ ಮುಗ್ಗಟ್ಟು ಸಂಪೂರ್ಣ ಜಲಾವೃತ್ತಗೊಂಡು ಲಕ್ಷಾಂತರ ರೂಪಾಯಿಗಳ ಹಾನಿ ಆಗಿದೆ ಎಂದು ಸಂತ್ರಸ್ಥರು ತಮ್ಮ ಗೋಳು ತೋರ್ಪಡಿಸಿಕೊಂಡಿದ್ದಾರೆ.

ಸಂಗಮನಾಥ ದೇವಾಲಯ ಅಲ್ಲದೇ ಇಡೀ ಊರಿಗೆ ಊರೇ ಜಲಾವೃತಗೊಂಡಿದೆ. ಗ್ರಾಮದ ಜನರಿಗೆ ಮಾತೆ ಮಹಾದೇವಿ ಅವರ ಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನು ಕಾಪಾಡುವ ಸಂಗಮನಾಥನಿಗೆ ಜಲ ದಿಗ್ಬಂಧನ ಆಗಿರುವುದರಿಂದ ಇನ್ನು ಕಾಪಾಡುವವರು ಯಾರೂ ಎಂದು ಭಕ್ತರು ಕೇಳಿಕೊಳ್ಳುವಂತಾಗಿದೆ. ದೇವಾಲಯದ ಮುಂದೆ ಯಾರನ್ನೂ ಬಿಡದೇ ಒಂದು ಕೀಲೋ ಮೀಟರ್​​ ದೂರದಲ್ಲಿಯೇ ಭಕ್ತರನ್ನು ತಡೆಯಲಾಗಿದೆ.

ABOUT THE AUTHOR

...view details