ಕರ್ನಾಟಕ

karnataka

ETV Bharat / state

ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ - ACB Raid

ತಂದೆಯ ಹೆಸರಲ್ಲಿದ್ದ ನಿವೇಶನ ಪತ್ರದಲ್ಲಿ ಮಗನ ಹೆಸರು ಸೇರಿಸುವ ಸಲುವಾಗಿ ಕಚೇರಿಗೆ ತೆರಳಿದ್ದ ಹನಮಂತ ಹಳ್ಳಿ ಎಂಬುವವರಿಗೆ 3 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಹನಮಂತ ಪೊಲೀಸರಿಗೆ ದೂರು ನೀಡಿದ್ದರು.

acb-raided-man-who-taking-bribe-in-bagalkote
ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಅಧಿಕಾರಿ ಎಸಿಬಿ ಬಲೆಗೆ

By

Published : Mar 18, 2021, 6:55 PM IST

ಬಾಗಲಕೋಟೆ:ವ್ಯಕ್ತಿಯೋರ್ವರಿಂದ ಲಂಚ ಸ್ವೀಕಾರಿಸುವಾಗ ಎಸಿಬಿ ಪೊಲೀಸರು ದಾಳಿ ಮಾಡಿ ಕಂದಾಯ ನಿರೀಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಬೀಳಗಿಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುಸೇನ್ ಲಿಂಗನ್ನವರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಂದೆಯ ಹೆಸರಲ್ಲಿದ್ದ ನಿವೇಶನ ಪತ್ರದಲ್ಲಿ ಮಗನ ಹೆಸರು ಸೇರಿಸುವ ಸಲುವಾಗಿ ಕಚೇರಿಗೆ ತೆರಳಿದ್ದ ಹನಮಂತ ಹಳ್ಳಿ ಎಂಬುವವರಿಗೆ 3 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಹನಮಂತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆ ಎಸಿಬಿ ಡಿವೈಎಸ್​ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿರುವಾಗಲೇ ಅಧಿಕಾರಿ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ದಾಳಿ: ಅಂತಾರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ

ABOUT THE AUTHOR

...view details