ಬಾಗಲಕೋಟೆ:ದೇವಸ್ಥಾನಕ್ಕೆ ಬಂದಿರುವ ಮಹಿಳೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ಬಿದ್ದು ಗರ್ಭಿಣಿಯೋರ್ವಳು ಮೃತಪಟ್ಟಿರುವ ಘಟನೆ ಕೂಡಲಸಂಗಮದಲ್ಲಿ ನಡೆದಿದೆ. ಜ್ಯೋತಿ ಶರಣಪ್ಪ ಬುಡಕಹಳ್ಳಿ(23 ) ಮೃತ ಮಹಿಳೆ.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು - ಬಾಗಲಕೋಟೆಯಲ್ಲಿ ತ್ರೀವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು
ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದಿದೆ.
![ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು](https://etvbharatimages.akamaized.net/etvbharat/prod-images/768-512-14096402-thumbnail-3x2-top.jpg)
ಕಾಲು ಜಾರಿ ಬಿದ್ದು ಗರ್ಭಿಣಿ ನೀರುಪಾಲು
ಕುಟುಂಬ ಸಮೇತರಾಗಿ ಗದಗ ನಗರದ ದಾಸರ ಓಣಿಯ ನಿವಾಸಿಗಳು ಸಂಗಮನಾಥನ ದೇವಸ್ಥಾನಕ್ಕೆ ಬಂದಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ನದಿಗೆ ಬಿದ್ದು ಜ್ಯೋತಿ ಮೃತಪಟ್ಟಿದ್ದಾಳೆ. ಮೃತಳು 4 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಮಹಿಳೆಯ ಸಾವು ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ, ಈಜುಗಾರರೊಂದಿಗೆ, ಮಹಿಳೆಯ ಶವ ಹೊರ ತೆಗೆಯಲಾಗಿದ್ದು, ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಮುಂದುವರೆದಿದೆ.