ಬಾಗಲಕೋಟೆ: ತಮಗೆ ಜೀವ ಭಯವಿದೆ, ರಕ್ಷಣೆ ಕೊಡಿ ಎಂದು ಅಂತರ್ಧರ್ಮೀಯ ಮದುವೆಯಾದ ಪ್ರೇಮಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಮಖಂಡಿ ಪಟ್ಟಣದ ನಿವಾಸಿಯಾಗಿರುವ ಈ ಯುವ ಜೋಡಿ ಕಳೆದ ಹಲವು ವರ್ಷಗಳಿಂದ ಪ್ರೀತಿಸಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಬೆನ್ನಲ್ಲೇ ಯುವಕ-ಯುವತಿ ಹಿಂದೂ ಧರ್ಮದ ಪದ್ಧತಿಯಂತೆ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಗಜಾನನ ಮಲ್ಲಪ್ಪ ಕಾಂಬ್ಳೆ ಎಂಬ ಯುವಕನೊಂದಿಗೆ ಸುಮಾ ಎಂದು ಹೆಸರು ಬದಲಾವಣೆ ಮಾಡಿಕೊಂಡು ಯುವತಿ ಮದುವೆಯಾಗಿದ್ದಾರೆ.