ಕರ್ನಾಟಕ

karnataka

ETV Bharat / state

ಪ್ರೀತಿಸಿ ಅಂತರ್​ಧರ್ಮೀಯ ಮದುವೆ... ರಕ್ಷಣೆ ನೀಡುವಂತೆ ಬಾಗಲಕೋಟೆ ಎಸ್​ಪಿ ಮೊರೆ ಹೋದ ಪ್ರೇಮಿಗಳು - bagalkote news

ಅಂತರ್​ಧರ್ಮೀಯ ಮದುವೆಯಾದ ಪ್ರೇಮಿಗಳು, ರಕ್ಷಣೆ ಒದಗಿಸುವಂತೆ ಬಾಗಲಕೋಟೆ ಎಸ್​ಪಿ ಕಚೇರಿಯ ಮೆಟ್ಟಿಲೇರಿದ್ದಾರೆ.

bagalkote
ಪೊಲೀಸರ ಮೊರೆ ಹೋದ ಯುವ ಜೋಡಿ

By

Published : Jan 5, 2021, 12:49 PM IST

ಬಾಗಲಕೋಟೆ: ತಮಗೆ ಜೀವ ಭಯವಿದೆ, ರಕ್ಷಣೆ ಕೊಡಿ ಎಂದು ಅಂತರ್​ಧರ್ಮೀಯ ಮದುವೆಯಾದ ಪ್ರೇಮಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಮಖಂಡಿ ಪಟ್ಟಣದ ನಿವಾಸಿಯಾಗಿರುವ ಈ ಯುವ ಜೋಡಿ ಕಳೆದ ಹಲವು ವರ್ಷಗಳಿಂದ‌ ಪ್ರೀತಿಸಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಬೆನ್ನಲ್ಲೇ ಯುವಕ-ಯುವತಿ ಹಿಂದೂ ಧರ್ಮದ ಪದ್ಧತಿಯಂತೆ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಗಜಾನನ ಮಲ್ಲಪ್ಪ ಕಾಂಬ್ಳೆ ಎಂಬ ಯುವಕನೊಂದಿಗೆ ಸುಮಾ ಎಂದು ಹೆಸರು ಬದಲಾವಣೆ ಮಾಡಿಕೊಂಡು ಯುವತಿ ಮದುವೆಯಾಗಿದ್ದಾರೆ.

ಜೀವ ರಕ್ಷಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಯುವತಿಯ ಮನೆಯಲ್ಲಿ ಹಾಗೂ ಅವರ ಸಮಾಜದ ವತಿಯಿಂದ ಜೀವ ಭಯ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಅವರನ್ನು ಜೋಡಿ ಭೇಟಿಯಾಗಿ, ಜೀವ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೇ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿಯ ಮನೆಯವರು ಜಮಖಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details