ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್ ಟ್ರೇಲರ್​, ದ್ವಿಚಕ್ರ ವಾಹನ​ ಕಳ್ಳತನ: ನಾಲ್ವರು ಖದೀಮರ ಬಂಧನ

ಟ್ರ್ಯಾಕ್ಟರ್, ಟ್ರೇಲರ್​ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಇಳಕಲ್ಲ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 29.60 ಲಕ್ಷ ಮೌಲ್ಯದ 13 ಟ್ರೇಲರ್​​ಗಳು, 4 ನೀರಿನ ಟ್ಯಾಂಕ್, 1 ಟ್ರ್ಯಾಕ್ಟರ್ ಇಂಜಿನ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

By

Published : Mar 11, 2021, 2:14 PM IST

4 tractor robbers arrested in bagalakot
ನಾಲ್ವರು ಖದೀಮರ ಬಂಧನ

ಬಾಗಲಕೋಟೆ:ಟ್ರ್ಯಾಕ್ಟರ್, ಟ್ರೇಲರ್​ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಇಳಕಲ್ಲ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಲ್ವರು ಖದೀಮರ ಬಂಧನ

ತಿಮ್ಮಣ್ಣ ವಡ್ಡರ್​, ಅಂಬರೇಶ ಮೂಲಿಮನಿ, ಅಶೋಕ ಭಂಜತ್ರಿ ಹಾಗೂ ಯಲ್ಲಪ್ಪ ವಡ್ಡರ್ ಬಂಧಿತ ಆರೋಪಿಗಳು. ಬಂಧಿತರು ಕೊಪ್ಪಳ, ಗಂಗಾವತಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್, ಟ್ರೇಲರ್​ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 29.60 ಲಕ್ಷ ಮೌಲ್ಯದ 13 ಟ್ರೇಲರ್​​ಗಳು, 4 ನೀರಿನ ಟ್ಯಾಂಕ್, 1 ಟ್ರ್ಯಾಕ್ಟರ್ ಇಂಜಿನ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

2020 ಡಿಸೆಂಬರ್ 12ರಂದು ಕರಡಿ ಗ್ರಾಮದ ಇಟಗಿ ಭೀಮವ್ವನ ಗುಡಿ ಹತ್ತಿರ ನಿಲ್ಲಿಸಿದ್ದ ಕೆಂಪು ಬಣ್ಣದ ಟ್ರ್ಯಾಕ್ಟರ್ ಟ್ರೇಲರ್ ಕಳ್ಳತನವಾಗಿತ್ತು. ಈ ಬಗ್ಗೆ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಓದಿ:ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂರು ಗೆಳೆಯರು ಪೊಲೀಸ್ ವಶಕ್ಕೆ

ಕಳೆದ ಎರಡು ದಿನಗಳ‌ ಹಿಂದೆ ಟ್ರ್ಯಾಕ್ಟರ್ ಟ್ರೇಲರ್ ಸಾಗಿಸುವಾಗ ಖದೀಮರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಂಬಿ ಎಣಿಸುವಂತೆ ಮಾಡಿದ್ದಾರೆ. ಇಳಕಲ್ಲ ಗ್ರಾಮೀಣ ಪಿಎಸ್​ಐ ಬಸವರಾಜ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details