ಕರ್ನಾಟಕ

karnataka

ಬಾಗಲಕೋಟೆಯ ದಾನಿಗಳಿಂದ ಪರಿಹಾರ ನಿಧಿಗೆ 1.13 ಕೋಟಿ ರೂ. ದೇಣಿಗೆ

By

Published : Apr 22, 2020, 11:44 PM IST

ಬಾಗಲಕೋಟೆಯ ದಾನಿಗಳಿಂದ ಪರಿಹಾರ ನಿಧಿಗೆ 1.13 ಕೋಟಿ ರೂ. ದೇಣಿಗೆ ಬಂದಿದೆ.

1.13 crores for relief fund from Bagalkot
ಬಾಗಲಕೋಟೆಯ ದಾನಿಗಳಿಂದ ಪರಿಹಾರ ನಿಧಿಗೆ 1.13 ಕೋಟಿ ರೂ. ದೇಣಿಗೆ

ಬಾಗಲಕೋಟೆ: ಜಿಲ್ಲೆಯ ವಿವಿಧ ದಾನಿಗಳಿಂದ ಕೋವಿಡ್ -19 ನಿಯಂತ್ರಣಕ್ಕೆ‌ ಪೂರಕವಾಗಿ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಟ್ಟು 1,13,58,866 ರೂ.ಗಳ ದೇಣಿಗೆ ಬಂದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಪರಿಹಾರ ನಿಧಿಗೆ ದೇಣಿಗೆ

ಪ್ರಧಾನಮಂತ್ರಿ ಪರಿಹಾರ ನಿಧಿಗೆ 36,23,866 ರೂ. ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 77,35,000 ರೂ. ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿದವರೆಲ್ಲರನ್ನೂ ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದರು.

‌ಇಂತಹ ಸಂಕಷ್ಟದ ಸಂದರ್ಭದಲ್ಲಿ ಸ್ವಯಂ ಪ್ರೇರಣೆಯಿಂದ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅವರು ಇತರರಿಗೆ ಮಾದರಿ. ಬೇರೆಯವರು ಸಹ ಸ್ವಯಂ ಪ್ರೇರಣೆಯಿಂದ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು ಎಂದು‌ ಮನವಿ ಮಾಡಿದರು.

ABOUT THE AUTHOR

...view details