ಭೂಪಾಲ್: ಮಧ್ಯಪ್ರದೇಶದ 19 ವರ್ಷದ ಯುವಕನೊಬ್ಬ 100 ಮೀಟರ್ ಓಟವನ್ನು 11 ಸೆಕೆಂಡ್ನಲ್ಲಿ ಪೂರ್ಣಗೊಳಿಸಿದ್ದು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಈತನಿಗೆ ನೆರೆವನಿ ಹಸ್ತ ಚಾಚಿದ್ದಾರೆ.
ಮಧ್ಯ ಪ್ರದೇಶದ ಶಿವಪುರಿ ಗ್ರಾಮದ 19 ವರ್ಷದ ರಾಮೇಶ್ವರ್ ಗುರ್ಜಾರ್ ಎಂಬ ಯುವಕ 100 ಮೀಟರ್ ಓಟವನ್ನು ರಸ್ತೆಯಲ್ಲಿ ಬರಿಗಾಲಲ್ಲಿ ಪೂರ್ರಣಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಜೊತೆಗೆ ಈ ವಿಡಿಯೋವನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾ ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿ ಇಂತಹ ಸಾಮರ್ಥ್ಯವಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಹಾಗೂ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟರೆ ಅವರು ಇತಿಹಾಸ ನಿರ್ಮಿಸಿಲಿದ್ದಾರೆ ಎಂದು ಬರೆದು ಕೊಂಡಿದ್ದರು.
ಈ ಟ್ವೀಟ್ಗೆ ತಕ್ಷಣ ಸ್ಪಂಧಿಸಿರುವ ಕ್ರೀಡಾ ಸಚಿವಾ ಕಿರಣ್ ರಿಜಿಜು ಆ ಯುವಕನನ್ನು ನನ್ನ ಬಳಿ ಕಳುಹಿಸಿಕೊಡಿ. ನಾನು ಆತನಿಗೆ ಅಥ್ಲೆಟಿಕ್ ಆಕಾಡೆಮಿಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಶಿವರಾಜ್ ಸಿಂಗ್ ಚೌಹಾಣ್ಗೆ ಮರು ಟ್ವೀಟ್ ಮಾಡಿದ್ದಾರೆ.
ಇನ್ನು ಈ ವಿಡೀಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಸರ್ಕಾರದ ಕ್ರೀಡಾ ಮಂತ್ರಿ ಜಿತು ಪತ್ವಾರಿ ಕೂಡ ಆತನನ್ನು ರಾಜಧಾನಿ ಭೂಪಾಲ್ಗೆ ಆಹ್ವಾನಿಸಿ, ಸೂಕ್ತ ತರಬೇತಿ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಆತ ಸೂಕ್ತ ತರಬೇತಿ ಪಡೆದರೆ ಕಂಡಿತ ಕೇವಲ 9 ಸೆಕೆಂಡ್ಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸಲಿದ್ದಾರೆ ಎಂದು ಗುರ್ಜಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.