ನವದೆಹಲಿ: ಐಎಸ್ಎಸ್ಎಫ್ ವಿಶ್ವಕಪ್ನ ಮಹಿಳೆಯರ ಟ್ರ್ಯಾಪ್ ತಂಡದ ವಿಭಾಗದಲ್ಲಿ ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಶ್ರೇಯಸಿ ಸಿಂಗ್ ಒಳಗೊಂಡಿದ್ದ ತಂಡ ಚಿನ್ನದ ಪದಕಕ್ಕೆ ಗುರಿಯಿಟ್ಟಿದೆ.
ಭಾನುವಾರ ನಡೆದ ಫೈನಲ್ನಲ್ಲಿ ಭಾರತದ ವನಿತೆಯರು ಕಜಕಸ್ತಾನ ತಂಡದ ವಿರುದ್ಧ 6-0ಯಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ವಿಶ್ವಕಪ್ನಲ್ಲಿ ಚಿನ್ನದ ಬೇಟೆ 14ಕ್ಕೇರಿದೆ.
ಇದಕ್ಕೂ ಮುನ್ನ ನಡೆದ ಪುರುಷರ ಟ್ರ್ಯಾಪ್ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಿನನ್ ಚೆನಾಯ್, ಪೃಥ್ವಿರಾಜ್ ತೊಂಡೈಮನ್ ಮತ್ತು ಲಕ್ಷ್ಯ ಇದ್ದ ತಂಡ ಸ್ಲೊವಾಕಿಯಾ ವಿರುದ್ಧ 6-4ರಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ 15ನೇ ಚಿನ್ನದ ಪದಕದ ತಂದುಕೊಟ್ಟರು.