ಕರ್ನಾಟಕ

karnataka

By

Published : Nov 22, 2022, 6:04 PM IST

ETV Bharat / sports

ಫಿಫಾ ವಿಶ್ವಕಪ್​: ಕೇರಳದಲ್ಲಿ ಬ್ರೆಜಿಲ್​ ಅರ್ಜೆಂಟೀನಾ ಅಭಿಮಾನಿಗಳ ಮಧ್ಯೆ ಘೋರ ಹೊಡೆದಾಟ

ಕೊಲ್ಲಂ ಜಿಲ್ಲೆಯಲ್ಲಿ ಬ್ರೆಜಿಲ್​, ಅರ್ಜೆಂಟೀನಾ ತಂಡದ ಅಭಿಮಾನಿಗಳ ಮಧ್ಯೆ ಹೊಡೆದಾಟ ನಡೆದಿದೆ. ವಿಶ್ವಕಪ್​ ಗೆಲ್ಲುವ ತಂಡದ ಘೋಷಣೆಯೇ ಇದಕ್ಕೆ ಕಾರಣವಾಗಿದೆ.

fifa-fervour-turns-violent-in-kerala
ಅಭಿಮಾನಿಗಳ ಮಧ್ಯೆ ಘೋರ ಹೊಡೆದಾಟ

ಕೊಲ್ಲಂ(ಕೇರಳ):ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್ಬಾಲ್​ ವಿಶ್ವಕ್ಕೇ ಜ್ವರವೇರಿಸಿದೆ. ಅತಿ ಶ್ರೀಮಂತ ಕ್ರೀಡೆ ಎಂದು ಗುರುತಿಸಿಕೊಂಡಿರುವ ಫುಟ್ಬಾಲ್​ ಭಾರತದಲ್ಲಿ ಅಷ್ಟೇನೂ ಪ್ರಚಲಿತದಲ್ಲಿಲ್ಲ. ಆದರೆ, ಕೆಲ ರಾಜ್ಯಗಳಲ್ಲಿ ಕಾಲ್ಚೆಂಡಿನ ಆಟಕ್ಕೆ ಅಭಿಮಾನಿಗಳ ದಂಡೇ ಇದೆ. ಅದರಲ್ಲೂ ಕೇರಳದಲ್ಲಿ ಫುಟ್ಬಾಲ್​ ಹುಚ್ಚು ತುಸು ಹೆಚ್ಚು.

ವಿಶ್ವದ ಅಗ್ರಮಾನ್ಯ ತಂಡಗಳಾದ ಅರ್ಜೆಂಟೀನಾ ಮತ್ತು ಬ್ರೆಜಿಲ್​ಗೆ ಇಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ವಿಶ್ವದ ಶ್ರೇಷ್ಠ ಫುಟ್ಬಾಲಿಗರಾದ ಅರ್ಜೆಂಟೀನಾ ತಂಡದ ಲಿಯೋನೆಲ್​ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೈಮರ್​ ಅವರ ಕಟೌಟ್​ಗಳನ್ನು ಇಲ್ಲಿನ ನದಿ ಪಾತ್ರದಲ್ಲಿ ನಿಲ್ಲಿಸಲಾಗಿದೆ.

ಇಂದು ಕೊಲ್ಲಂ ಜಿಲ್ಲೆಯ ಸಕ್ತಿಕುಲಂಗರ್​​ ಎಂಬಲ್ಲಿ ಲಿಯೋನೆಲ್​ ಮೆಸ್ಸಿ ಕಟೌಟ್​ ಮೆರವಣಿಗೆ ನಡೆಸಿ ಅಲ್ಲಿನ ನದಿಯಲ್ಲಿ ನಿಲ್ಲಿಸಲಾಗಿದೆ. ಮೆರವಣಿಗೆಯ ವೇಳೆ ಅರ್ಜೆಂಟೀನಾ ತಂಡ ಈ ಬಾರಿಯ ವಿಶ್ವಕಪ್​ ಎತ್ತಿ ಹಿಡಿಯಲಿದೆ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಇದು ಅದೇ ಗ್ರಾಮದ ಬ್ರೆಜಿಲ್​ ಅಭಿಮಾನಿಗಳನ್ನು ಕೆರಳಿಸಿದೆ. ಬ್ರೆಜಿಲ್ ಗೆಲ್ಲಲಿದೆ ಎಂದು ತಂಡದ ಅಭಿಮಾನಿಗಳು ಮರುಘೋಷಣೆ ಕೂಗಿದ್ದಾರೆ. ಇದು ಎರಡು ತಂಡದ ಅಭಿಮಾನಿಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.

ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ:ವಿಶ್ವಕಪ್​ ಗೆಲುವಿನ ಘೋಷಣೆಯಿಂದಾಗಿ ಹೊತ್ತಿಕೊಂಡ ಕಿಡಿ, ಭಾರೀ ಹೊಡೆದಾಟಕ್ಕೆ ನಾಂದಿ ಹಾಡಿದೆ. ಕಲ್ಲು, ಕಬ್ಬಿಣದ ರಾಡುಗಳು, ದೊಣ್ಣೆಗಳು, ಪೈಪ್​ಗಳಿಂದ ಇತ್ತಂಡಗಳ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೊಡೆದಾಟ ತಡೆದಿದ್ದಾರೆ. ಬಳಿಕ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದಿ:64 ವರ್ಷಗಳ ಬಳಿಕ ಕಣಕ್ಕಿಳಿದು ಜಿದ್ದಾಜಿದ್ದಿನ ಹೋರಾಟ ನಡೆಸಿದ ವೇಲ್ಸ್‌; ಪಂದ್ಯ ಡ್ರಾ

ABOUT THE AUTHOR

...view details