ಮುಂಬೈ :ವೆಸ್ಟ್ ಇಂಡೀಸ್ನಲ್ಲಿ ನಡೆಯುವ 2022ರ ಅಂಡರ್ 19 ವಿಶ್ವಕಪ್ಗಾಗಿ ಭಾನುವಾರ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಡೆಲ್ಲಿಯ ಯಶ್ ಧುಲ್ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.
ಜನವರಿ 14ರಿಂದ ಫೆಬ್ರವರಿ 5ರವರೆಗೆ ಕಿರಿಯರ ವಿಶ್ವಕಪ್ ನಡೆಯಲಿದೆ. ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.
ಜೂನಿಯರ್ ವಿಶ್ವಕಪ್ನಲ್ಲಿ ಭಾರತ ಒಟ್ಟು 4 ಬಾರಿ ವಿಶ್ವ ಚಾಂಪಿಯನ್ ಮತ್ತು 3 ಬಾರಿ ರನ್ನರ್ ಅಪ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡ ಎನಿಸಿದೆ. 2000, 2008, 2012,2018ರಲ್ಲಿ ಚಾಂಪಿಯನ್ ಆಗಿದ್ದರೆ, 2006, 2016 ಮತ್ತು 2020ರಲ್ಲಿ ಫೈನಲ್ನಲ್ಲಿ ಸೋಲುಂಡಿತ್ತು.
2022ರ ವಿಶ್ವಕಪ್ಗೆ ಘೋಷಿಸಿರುವ ತಂಡಕ್ಕೆ ಡೆಲ್ಲಿಯ ಯಶ್ ಧುಲ್ ನಾಯಕನಾಗಿ ನೇಮಕಗೊಂಡಿದ್ದಾರೆ. ಆಂಧ್ರದ ಎಸ್ಕೆ ರಶೀದ್ ಉಪನಾಯಕನಾಗಿದ್ದಾರೆ. ಉತ್ತರಪ್ರದೇಶದಿಂದ 3, ಮಹಾರಾಷ್ಟ್ರದಿಂದ 3, ಹರಿಯಾಣದಿಂದ 3,ಚಂಡೀಗಢದಿಂದ ಇಬ್ಬರು, ಡೆಲ್ಲಿ, ಕರ್ನಾಟಕ, ಆಂಧ್ರಪ್ರದೇಶ, ಮುಂಬೈ, ಬೆಂಗಾಲ್ ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ನಿಂದ ತಲಾ ಒಬ್ಬ ಆಟಗಾರ ಈ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ಅಂಡರ್ 19 ತಂಡದ ಸದಸ್ಯರು ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್