ಕರ್ನಾಟಕ

karnataka

By

Published : Jan 17, 2022, 1:45 PM IST

ETV Bharat / sports

ಶ್ರೇಯಸ್ ಅಯ್ಯರ್​ಗೆ ನಾಯಕನ ಪಟ್ಟ ಕಟ್ಟಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧತೆ!?

ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್​​ ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆ ನಡೆದಿದೆ. ಮುಂಬರುವ ಐಪಿಎಲ್ ಟೂರ್ನಿಯು ಈಗಿರುವ ಹಳೆಯ 8 ತಂಡಗಳ ಜತೆಗೆ ಲಖನೌ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆಯಾಗುವುದರಿಂದ ಮಹತ್ವ ಪಡೆದಿದೆ. ಇನ್ನು ಆರ್​ಸಿಬಿ ತಂಡದಿಂದ ನಾಯಕತ್ವ ಸ್ಥಾನ ತ್ಯಜಿಸಿರುವ ವಿರಾಟ್​ ಕೊಹ್ಲಿ ಜಾಗಕ್ಕೆ ಯಾರನ್ನು ಕರೆತರಲಾಗುತ್ತದೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ..

Will Shreyas Iyer captain Virat Kohli at Royal Challengers Bangalore this season?
Will Shreyas Iyer captain Virat Kohli at Royal Challengers Bangalore this season?

ಮುಂಬೈ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್​ ಕೊಹ್ಲಿ ಅವರ ಜಾಗಕ್ಕೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾದ ಮಿಡ್‌ಫೀಲ್ಡರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಉತ್ತಮ ಸ್ಟ್ರೈಕ್​ ರೇಟ್​ ಹೊಂದಿದ್ದು, ಅವರನ್ನು ತನ್ನ ತಂಡದ ನಾಯಕ ಸ್ಥಾನದಲ್ಲಿ ಕಾಣಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿಗಳು ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ವರದಿ ಆಗಿಲ್ಲ.

ವಿರಾಟ್ ಕೊಹ್ಲಿ ಅವರು ನಾಯಕತ್ವ ಸ್ಥಾನದಿಂದ ನಿರ್ಗಮಿಸಿದ ನಂತರ ಆರ್​ಸಿಬಿಯು ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಲು ಉತ್ಸುಕತೆ ತೋರಿಸುತ್ತದೆ. ಹಾಗಾಗಿ, ಶ್ರೇಯಸ್ ಅಯ್ಯರ್​ಗೆ ಗೋಲ್ಡನ್ ಚಾನ್ಸ್ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಅಯ್ಯರ್ ಕೂಡ ತಾವು ಆಡುವ ಯಾವುದೇ ತಂಡದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮನಸ್ಸು ಹೊಂದಿದಂತಿದೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ರಿಷಬ್ ಪಂತ್ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ ನಂತರ ಶ್ರೇಯಸ್ ಅಯ್ಯರ್ ನಾಯಕನ ಆಸೆಯನ್ನು ಕೈಬಿಟ್ಟಿದ್ದರು. ತಂಡದ ಫ್ರಾಂಚೈಸಿಯು ಈ ಬಾರಿ ಅವರನ್ನು ರೀಟೈನ್‌ ಮಾಡಿಕೊಂಡಿಲ್ಲ. ಹಾಗಾಗಿ, ಅಯ್ಯರ್ ಯಾವುದಾದರೂ ತಂಡದಲ್ಲಿ ನಾಯಕನಾಗಿ ಮಿಂಚುವ ಲಕ್​ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿರಾಟ್‌ ನಾಯಕತ್ವಕ್ಕೆ ಬೆದರಿಕೆ ಇತ್ತಾ..? ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಹೇಳಿದ್ದಿಷ್ಟು..

ABOUT THE AUTHOR

...view details