ಕರ್ನಾಟಕ

karnataka

ETV Bharat / sports

ಭಾರತ ತಂಡಕ್ಕೆ ಹೇಳಿ ಮಾಡಿಸಿದ ಪ್ಲೇಯರ್.. ಹಾರ್ದಿಕ್ ಪಾಂಡ್ಯಗೆ ಭೀತಿ ತಂದ 'ಆಲ್​ರೌಂಡರ್'ನ ಆಟ

2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ವೆಂಕಟೇಶ್​ ಅಯ್ಯರ್​ 4 ಪಂದ್ಯಗಳಿಂದ 136ರ ಸ್ಟ್ರೈಕ್ ​ರೇಟ್​ನಲ್ಲಿ 348 ರನ್​ ಸಿಡಿಸಿ ಅಬ್ಬರಿಸಿದ್ದಾರೆ. ಬೌಲಿಂಗ್​ನಲ್ಲೂ ಮಿಂಚಿರುವ ಅವರು 8 ವಿಕೆಟ್ ಪಡೆದಿದ್ದಾರೆ.

By

Published : Dec 13, 2021, 8:24 PM IST

Venkatesh Iyer ready to take Hardik Pandya place in Team India
ಹಾರ್ದಿಕ್ ಪಾಂಡ್ಯ

ಮುಂಬೈ: 2021ರ ಎರಡನೇ ಹಂತದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಮಧ್ಯಪ್ರದೇಶದ ಯುವ ಆಲ್​ರೌಂಡರ್​ ವೆಂಕಟೇಶ್​ ಅಯ್ಯರ್​ ಭಾರತದ ತಂಡದ ಬಹುದೊಡ್ಡ ಕೊರತೆಯಾಗಿರುವ ಬ್ಯಾಟಿಂಗ್ ಆಲರೌಂಡರ್ ಸ್ಥಾನಕ್ಕೆ ಅದ್ಭುತ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.

ಐಪಿಎಲ್​ನ ದುಬೈ ಲೆಗ್​​ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಫೈನಲ್ ಪ್ರವೇಶಿಸಲು ನೆರವಾಗಿದ್ದ ವೆಂಕಟೇಶ್ ಅಯ್ಯರ್​, ನಂತರ ಸೈಯದ್​ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್​ನಲ್ಲೂ ಉತ್ತಮ ಆಲ್​ರೌಂಡರ್​ ಪ್ರದರ್ಶನ ತೋರಿ ಕಿವೀಸ್​ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಹಜಾರೆ ಟ್ರೋಫಿಯಲ್ಲಿ 4 ಪಂದ್ಯಗಳಿಂದ 348 ರನ್​ ಮತ್ತು 8 ವಿಕೆಟ್​ ಪಡೆದ ವೆಂಕಟೇಶ್ ಅಯ್ಯರ್

ವಿಜಯ ಹಜಾರೆಯಲ್ಲಿ ಫಿನಿಶಿಂಗ್ ಜವಾಬ್ದಾರಿ

2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ವೆಂಕಟೇಶ್​ ಅಯ್ಯರ್​ 4 ಪಂದ್ಯಗಳಿಂದ 136ರ ಸ್ಟ್ರೈಕ್​ರೇಟ್​ನಲ್ಲಿ 348 ರನ್​ಸಿಡಿಸಿ ಅಬ್ಬರಿಸಿದ್ದಾರೆ. ಭಾನುವಾರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮಧ್ಯಪ್ರದೇಶ 56ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅಯ್ಯರ್​ 113 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 8 ಬೌಂಡರಿಗಳಿಂದ 151 ರನ್​ ಚಚ್ಚಿದ್ದರು. ಬೌಲಿಂಗ್​ನಲ್ಲಿ 2 ವಿಕೆಟ್​ ಪಡೆದಿದ್ದರು.

ಇದಲ್ಲದೇ ಉತ್ತರಖಂಡದ ವಿರುದ್ಧ 49 ಎಸೆತಗಳಲ್ಲಿ 71 ಮತ್ತು 2 ವಿಕೆಟ್​, ಕೇರಳ ವಿರುದ್ಧ 84 ಎಸೆತಗಳಲ್ಲಿ 112 ರನ್​ ಮತ್ತು 3 ವಿಕೆಟ್​, ಮಹಾರಾಷ್ಟ್ರ ವಿರುದ್ಧ 14 ರನ್​ ಮತ್ತು 1 ವಿಕೆಟ್​ ಪಡೆದು ಮಿಂಚಿದ್ದಾರೆ.

ಪಾಂಡ್ಯಗೆ ಎಚ್ಚರಿಕೆಯ ಕರೆಗಂಟೆ

ವೆಂಕಟೇಶ್​ ಅಯ್ಯರ್ ಈಗಾಗಲೇ ಭಾರತದ ಪರ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕನಸಿನ ಫಾರ್ಮ್​ನಲ್ಲಿರುವ ಅವರೂ ಖಂಡಿತ ಭಾರತದ ಏಕದಿನ ಸರಣಿಗೂ ಆಯ್ಕೆಯಾದರೆ ಅಚ್ಚರಿಯಿಲ್ಲ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವ ಕಾರಣ ಅವರಿಗೆ ಈಗಾಗಲೇ ಭಾರತ ತಂಡದಿಂದ ಹೊರಗಿಡಲಾಗಿದೆ.

ಒಂದು ವೇಳೆ ಶೀಘ್ರದಲ್ಲಿ ಬೌಲಿಂಗ್ ಮಾಡಲು ಆರಂಭಿಸದಿದ್ದರೆ ಅಥವಾ ಬೌಲಿಂಗ್ ಪ್ರದರ್ಶನದಲ್ಲಿ ವೈಫಲ್ಯ ಅನುಭವಿಸಿದರೆ ವೆಂಕಟೇಶ್​ ಅಯ್ಯರ ಅವರ ಸ್ಥಾನವನ್ನು ತುಂಬಲಿದ್ದಾರೆ.

ಪಾಂಡ್ಯ ಪ್ರಸ್ತುತ ಮುಂಬೈನಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಬೌಲಿಂಗ್ ಮಾಡುವಷ್ಟು ಫಿಟ್​ನೆಸ್​ ಕಂಡು ಕೊಂಡರೆ ಬೆಂಗಳೂರಿನಲ್ಲಿರುವ ಎನ್​ಸಿಎನಲ್ಲಿ ಅಲ್ಲಿನ ಕೋಚ್​ಗಳ ಮುಂದೆ ಸಾಬೀತು ಪಡಿಸಿದ ನಂತರ ಒಂದೆರೆಡು ದೇಶಿ ಪಂದ್ಯಗಳಲ್ಲಿ ಆಡಿ ನಂತರ ಭಾರತ ತಂಡದಲ್ಲಿ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ:South Africa tour: ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯಿಂದ ರೋಹಿತ್ ಶರ್ಮಾ ಔಟ್​ !

ABOUT THE AUTHOR

...view details