ಕರ್ನಾಟಕ

karnataka

By

Published : May 6, 2021, 6:03 PM IST

Updated : May 6, 2021, 7:08 PM IST

ETV Bharat / sports

ಆಕ್ಸಿಜನ್​ಗಾಗಿ ಸಿಎಂ ಯೋಗಿ ನೆರವು ಕೋರಿದ ರೈನಾ, ನೆರವಿಗೆ ಬಂದ ನಟ ಸೋನು ಸೂದ್​

ಆಕ್ಸಿಜನ್​ ಕೋರಿ ರೈನಾ ಮಾಡಿದ್ದ ಮನವಿ ಟ್ವೀಟ್​ಗೆ ಸ್ಪಂದಿಸಿದ, ಕೊರೊನಾ ಸಂಕಷ್ಟದಲ್ಲಿ ಸಾಮಾನ್ಯ ಜನತೆಯ ಪಾಲಿಗೆ ಹೀರೋ ಆಗಿರುವ ಬಹುಭಾಷಾ ನಟ ಸೋನು ಸೂದ್​ ಆಕ್ಸಿಜನ್ ಸಿಲಿಂಡರ್​ ತಲುಪಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಸೂಕ್ತ ಸಮಯಕ್ಕೆ ಮೀರತ್ ಪೊಲೀಸರು ಸಿಲಿಂಡರ್​ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕ್ಸಿಜನ್​ ಸಿಲಿಂಡರ್​ಗೆ ರೈನಾ ಮನವಿ
ಆಕ್ಸಿಜನ್​ ಸಿಲಿಂಡರ್​ಗೆ ರೈನಾ ಮನವಿ

ಮೀರತ್​: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ತಮ್ಮ ಸಂಬಂಧಿಯೊಬ್ಬರಿಗೆ ತುರ್ತಾಗಿ ಆಕ್ಸಿಜನ್ ಸಿಲಿಂಡರ್​ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಟ್ಯಾಗ್ ಮಾಡಿದ್ದಾರೆ.

ಆದರೆ ತಕ್ಷಣ ರೈನಾ ಟ್ವೀಟ್​ಗೆ ಮನವಿಗೆ ಸ್ಪಂದಿಸಿದ, ಕೊರೊನಾ ಸಂಕಷ್ಟದಲ್ಲಿ ಸಾಮಾನ್ಯ ಜನತೆಯ ಪಾಲಿಗೆ ಹೀರೋ ಆಗಿರುವ ಬಹುಭಾಷಾ ನಟ ಸೋನು ಸೂದ್​ ಆಕ್ಸಿಜನ್ ಸಿಲಿಂಡರ್​ ತಲುಪಿಸಲು ಮುಂದೆ ಬಂದಿದ್ದಾರೆ. ಆದರೆ ಮೀರತ್​ ಪೊಲೀಸರು ರೈನಾ ಮನವಿ ಮಾಡಿದ 10 ನಿಮಿಷಕ್ಕೆ ಸಿಲಿಂಡರ್​​ ತಲುಪಿಸಿ ಕಾರ್ಯಕ್ಷಮತೆ ತೋರಿದ್ದಾರೆ.

ಸುರೇಶ್ ರೈನಾ ಟ್ವೀಟ್​ಗೆ ಪ್ರತಿಕ್ರಿಯಿಸಿದ ಸೋನು ಸೂದ್​

34 ವರ್ಷದ ಕ್ರಿಕೆಟಿಗ ಸುರೇಶ್ ರೈನಾ ಇಂದು 3:47ರ ಸಮಯದಲ್ಲಿ , ತಮ್ಮ 65 ವರ್ಷ ಸಂಬಂಧಿ ಶ್ವಾಸಕೋಶ ಮತ್ತು ಕೋವಿಡ್​ 19 ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್ ಸಿಲಿಂಡರ್​ ಅವಶ್ಯಕತೆಯಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಅವರರಿಗೆ ಟ್ಯಾಗ್ ಮಾಡಿದ್ದರು.

ಇದಕ್ಕೆ ನಿಮಿಷಗಳಲ್ಲೇ ಪ್ರತಿಕ್ರಿಯಿಸಿರುವ ಸೋನು, ವಿವರಗಳನ್ನು ನನಗೆ ಕಳುಹಿಸಿ ನಾನು ತಲುಪಿಸುತ್ತೇನೆ ಎಂದು ತಿಳಿಸಿದ್ದಾರೆ. ರೈನಾ ಕೂಡ ವಿಳಾಸವನ್ನು ಕಳುಹಿಸಿ ಸೋನುಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತೆ ಎರಡು ಗಂಟೆಗಳ ನಂತರ ಮತ್ತೊಂದು ಟ್ವೀಟ್ ಮಾಡಿರುವ ಅವರು ಆಕ್ಸಿಜನ್​ ದೊರಕಿದೆ. ಸೂಕ್ತ ಸಮಯಕ್ಕೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಎಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ರೈನಾ ಅವರ ಮನವಿಯ ಮೇರೆಗೆ 20 ನಿಮಿಷಗಳಲ್ಲಿ ಆಕ್ಸಿಜನ್ ಸಿಲಿಂಡರ್​ ಅನ್ನು ಅವರು ತಿಳಿಸಿದ ವಿಳಾಸಕ್ಕೆ ತಲುಪಿಸಿದ್ದೇವೆ ಎಂದು ಮೀರತ್ ಪೊಲೀಸ್ ತಮ್ಮ ಟ್ವೀಟ್​ನಲ್ಲಿ ತಿಳಿಸಿದೆ.

ಇದನ್ನು ಓದಿ:ಅಸಡ್ಡೆ ಬೇಡ, ಆದಷ್ಟು ಬೇಗ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಿ: ಶಿಖರ್ ಧವನ್ ಮನವಿ

Last Updated : May 6, 2021, 7:08 PM IST

ABOUT THE AUTHOR

...view details