ಕರ್ನಾಟಕ

karnataka

By

Published : Mar 9, 2022, 8:49 PM IST

ETV Bharat / sports

ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ 'ಕೇರಳ ಎಕ್ಸ್​ಪ್ರೆಸ್'​ ಎಸ್. ಶ್ರೀಶಾಂತ್​

ಕೇರಳದ ವೇಗದ ಬೌಲರ್​ ಎಸ್​. ಶ್ರೀಶಾಂತ್​ ತಮ್ಮ 25 ವರ್ಷಗಳ ಕ್ರಿಕೆಟ್​ ಜೀವನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ. ತಾವು ಕ್ರಿಕೆಟ್​ನಿಂದ ದೂರ ಉಳಿದು, ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸಿರುವುದಾಗಿ ಶ್ರೀಶಾಂತ್​ ಟ್ವೀಟ್​ ಮೂಲಕ ಘೋಷಿಸಿದ್ದಾರೆ.

Sreesanth
ಶ್ರೀಶಾಂತ್

ನವದೆಹಲಿ:ಕೇರಳ ಎಕ್ಸ್​ಪ್ರೆಸ್​ ಎಂದೇ ಖ್ಯಾತಿಯಾಗಿದ್ದ ಎಸ್​. ಶ್ರೀಶಾಂತ್​ ತಮ್ಮ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2011 ರ ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಶ್ರೀಶಾಂತ್, ದೇಶೀಯ ಕ್ರಿಕೆಟ್​ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿರುವುದಾಗಿ ಟ್ವೀಟ್​ ಮಾಡಿದ್ದಾರೆ.

'ಇಂದು ನನಗೆ ಕಷ್ಟದ ದಿನವಾಗಿದೆ. ಆದರೆ, ಇಂತಹದೊಂದು ದಿನ ಬಂದೇ ಬರಲಿದೆ ಎಂದು ತಿಳಿದಿದ್ದೆ. ಭಾರತ ತಂಡ ಸೇರಿದಂತೆ ವಿವಿಧ ತಂಡಗಳ ಜೊತೆ ಆಡಿದ ದಿನಗಳು ಸ್ಮರಣೀಯ. ಇದೀಗ ನನ್ನ 25 ವರ್ಷಗಳ ಕ್ರಿಕೆಟ್​ ಜೀವನದಿಂದ ದೂರ ಸರಿದು, ಕುಟುಂಬದೊಂದಿಗೆ ಕಾಲ ಕಳೆಯಲು ಇಚ್ಚಿಸಿದ್ದೇನೆ. ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಐಸಿಸಿ, ಬಿಸಿಸಿಐಗೆ ಧನ್ಯವಾದಗಳು ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಕೇರಳದ ವೇಗದ ಬೌಲರ್​ ಎಸ್​. ಶ್ರೀಶಾಂತ್ 27 ಟೆಸ್ಟ್, 53 ಏಕದಿನ ಮತ್ತು 10 ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2007ರಲ್ಲಿ ಟಿ-20 ವಿಶ್ವಕಪ್​ ಮತ್ತು 2011 ರ ಏಕದಿನ ವಿಶ್ವಕಪ್​ ಗೆದ್ದ ಭಾರತದ ತಂಡದಲ್ಲಿದ್ದರು. ಇದಲ್ಲದೇ, ಇಸಿಸಿ, ಎರ್ನಾಕುಲಂ ಜಿಲ್ಲಾ ತಂಡ, ಲೀಗ್ ಮತ್ತು ಟೂರ್ನಮೆಂಟ್ ತಂಡಗಳು, ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆ, ವಾರ್ವಿಕ್‌ಷೈರ್ ಕೌಂಟಿ ಕ್ರಿಕೆಟ್ ತಂಡ, ಇಂಡಿಯನ್ ಏರ್‌ಲೈನ್ಸ್ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ.

ಓದಿ:ಕ್ರಿಕೆಟ್ ದಂತಕತೆ ಶೇನ್ ವಾರ್ನ್​ಗೆ ಮಾ.30ರಂದು ಎಂಸಿಜಿಯಲ್ಲಿ ಸ್ಮರಣಾ ಕಾರ್ಯಕ್ರಮ

ABOUT THE AUTHOR

...view details