ಕರ್ನಾಟಕ

karnataka

By

Published : Jul 19, 2021, 8:31 PM IST

ETV Bharat / sports

ರಾಯಲ್ ಲಂಡನ್ ಒಂಡೇ ಕಪ್​ನಿಂದ ಹೊರ ಬಂದ ಶ್ರೇಯಸ್ ಅಯ್ಯರ್ : ಬೇಸರ ವ್ಯಕ್ತಪಡಿಸಿದ ಲಂಕಾಶೈರ್ ಕ್ಲಬ್​

ನಾವು ಲಂಕಾಷೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಹೀಗೆ ಹೇಳಿದರು. ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ಗೆ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದರಿಂದ, ನಾವೀಗ ತುಂಬಾ ನಿರಾಶೆಗೊಂಡಿದ್ದೇವೆ..

Shreyas Iyer ruled out of Lancashire
ಶ್ರೇಯಸ್ ಅಯ್ಯರ್

ಮ್ಯಾಂಚೆಸ್ಟರ್​ :ಭಾರತ ತಂಡದ ವೈಟ್ ಬಾಲ್ ಸ್ಪೆಷಲಿಸ್ಟ್​ ಶ್ರೇಯಸ್ ಅಯ್ಯರ್ ಭುಜದ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರು ಲಂಕಾಶೈರ್ ತಂಡದ ಪರ ರಾಯಲ್​ ಲಂಡನ್ ಕಪ್​ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ಶ್ರೇಯಸ್ ಅಯ್ಯರ್ ಇಂಗ್ಲೆಂಡ್​ ವಿರುದ್ಧ ಪುಣೆಯಲ್ಲಿ ನಡೆದಿದ್ದ ಏಕದಿನ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಐಪಿಎಲ್​ನಿಂದಲೂ ಹೊರ ಬಿದ್ದಿದ್ದರು.

ಈಗಾಗಲೇ ಅಯ್ಯರ್ ನೆಟ್ಸ್​ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಆದರೆ, ಜುಲೈ 22ರಿಂದ ಆರಂಭವಾಗಲಿರುವ ಟೂರ್ನಿಗೆ ಸಂಪೂರ್ಣ ಸಿದ್ಧರಾಗಿಲ್ಲ. ಹಾಗಾಗಿ, ಟೂರ್ನಿಯಿಂದ ಹೊರ ಬಂದಿದ್ದಾರೆ. ಲಂಕಾಶೈರ್ ಕ್ಲಬ್​ ಈ ವಿಚಾರವನ್ನು ಪ್ರಕಟಣೆ ಮೂಲಕ ತಿಳಿಸಿದೆ.

ಕ್ಲಬ್ ಮತ್ತು ಬಿಸಿಸಿಐ ನಡುವಿನ ಚರ್ಚೆಯ ನಂತರ ಆಟಗಾರರ ಪ್ರತಿನಿಧಿಗಳಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಯ್ಯರ್ ಕ್ರಿಕೆಟ್​ಗೆ ಮರಳುವ ಮುನ್ನ ಪುನಶ್ಚೇತನ ಕಾರ್ಯಕ್ಕಾಗಿ ಭಾರತದಲ್ಲೇ ಉಳಿಯಲಿದ್ದಾರೆ" ಎಂದು ಕ್ಲಬ್​ ಹೇಳಿಕೆ ಬಿಡುಗಡೆ ಮಾಡಿದೆ.

ನಾವು ಲಂಕಾಷೈರ್‌ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಹೀಗೆ ಹೇಳಿದರು: "ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ಗೆ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದರಿಂದ, ನಾವೀಗ ತುಂಬಾ ನಿರಾಶೆಗೊಂಡಿದ್ದೇವೆ."

"ನಾವು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್​ನಲ್ಲಿ ಶ್ರೇಯಾಸ್ ಅವರನ್ನು ಸ್ವಾಗತಿಸಲು ಸಂಪೂರ್ಣವಾಗಿ ಎದುರು ನೋಡುತ್ತಿದ್ದೆವು. ಆದರೆ, ಅವರ ಟೂರ್ನಿಗೆ ಅಲಭ್ಯರಾಗುತ್ತಿರುವುದು ನಮಗೆ ತುಂಬಾ ನಿರಾಶೆ ತಂದಿದೆ" ಎಂದು ಲಂಕಾಶೈರ್​ನ ಕ್ರಿಕೆಟ್ ನಿರ್ದೇಶಕ ಪಾಲ್ ಅಲೋಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಅಂತಿಮವಾಗಿ ಶ್ರೇಯಸ್ ಅವರ ದೀರ್ಘಾವಧಿಯ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ ಮತ್ತು ಲಂಕಾಷೈರ್ ಕ್ರಿಕೆಟ್ ಈ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ ಎಂದಿದ್ದಾರೆ.

ಈ ಬೇಸಿಗೆಯಲ್ಲಿ ನಾನು ಲಂಕಾಶೈರ್ ಅಂತಹ ಇತಿಹಾಸ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕ್ಲಬ್ ಪರ ಆಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ಕೆಲವು ಹಂತದಲ್ಲಿ ಲ್ಯಾಂಕಾಶೈರ್​ಗಾಗಿ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್​ನಲ್ಲಿ ಆಡಲು ನಾನು ಆಶಿಸುತ್ತೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನು ಓದಿ:ಭಾರತ ತಂಡದ ಮುಖ್ಯ ಕೋಚ್ ಆಗಲು ದ್ರಾವಿಡ್ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ : ಅಗರ್ಕರ್​

ABOUT THE AUTHOR

...view details