ಕರ್ನಾಟಕ

karnataka

By

Published : Apr 19, 2022, 10:12 PM IST

ETV Bharat / sports

ಆರ್​ಸಿಬಿ ಮ್ಯಾಚ್ ನೋಡೋಕೆ ಬಂದ ಅಧೀರ, ಪ್ರಧಾನಿ ರವೀನಾ!

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಬೆಂಗಳೂರು ತಂಡಕ್ಕೆ ಸಪೋರ್ಟ್​​ ಮಾಡಲು ಕೆಜಿಎಫ್​ ಚಾಪ್ಟರ್​2 ಚಿತ್ರ ತಂಡ ಇಂದು ಮೈದಾನಕ್ಕೆ ಲಗ್ಗೆ ಹಾಕಿದೆ.

Actors Sanjay dutt and Raveena IPL
Actors Sanjay dutt and Raveena IPL

ಮುಂಬೈ:ಭಾರತೀಯ ಚಿತ್ರರಂಗದಲ್ಲಿ ನಟ ಯಶ್ ನಟನೆಯ ಕೆಜಿಎಫ್​ ಚಾಪ್ಟರ್​-2 ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಈಗಾಗಲೇ ತೆರೆ ಕಂಡಿರುವ ಚಿತ್ರ ನೂರಾರು ಕೋಟಿ ಹಣ ಜೇಬಿಗೆ ಇಳಿಸಿಕೊಂಡಿದೆ. ಇದರ ಮಧ್ಯೆ ಐಪಿಎಲ್ ಹವಾ ಕೂಡ ಜೋರಾಗಿದೆ. ಟೂರ್ನಿಯಲ್ಲಿ ಆರ್​ಸಿಬಿ ಉತ್ತಮ ಪ್ರದರ್ಶನ ನೀಡ್ತಿದ್ದು, ತಂಡಕ್ಕೆ ಬೆಂಬಲ ನೀಡಲು ನಟ ಸಂಜಯ್​ ದತ್ ಮತ್ತು ರವೀನಾ ಟಂಡನ್ ಇಂದಿನ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.

ಆರ್​ಸಿಬಿ ಮ್ಯಾಚ್ ನೋಡಿದ ಅಧೀರ್​

ರವೀನಾ ಟಂಡನ್​ ಮತ್ತು ಸಂಜು ಬಾಬಾ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಜರ್ಸಿ ಹಾಕಿಕೊಂಡು ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ತಂಡಕ್ಕೆ ಸಪೋರ್ಟ್ ಮಾಡಿದ್ದು, ಇದನ್ನು ಖುದ್ದಾಗಿ ಆರ್​ಸಿಬಿ ಹಾಗೂ ಹೊಂಬಾಳೆ ಚಿತ್ರತಂಡ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಹಾಕಿಕೊಂಡಿವೆ. ಕೆಜಿಎಫ್​​ನಲ್ಲಿ ಅಧೀರ್​ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸಂಜಯ್​ ದತ್​, ಹಾಗೂ ಪ್ರಧಾನಿ ಹುದ್ದೆಯಲ್ಲಿ ಮಿಂಚಿರುವ ರವೀನಾ ಟಂಡನ್​​ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಸಾಥ್ ನೀಡಿದ್ದಾರೆ.

ಆರ್​ಸಿಬಿ ತಂಡಕ್ಕೆ ಸಪೋರ್ಟ್ ನೀಡಿದ ಕೆಜಿಎಫ್​ ಚಿತ್ರತಂಡ

ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ಕಾರಣ ಆರ್​ಸಿಬಿ ತಂಡದ ಪ್ಲೇಯರ್ಸ್​ ಬಯೋಬಬಲ್​ನಲ್ಲೇ ಕೆಜಿಎಫ್​ ಚಾಪ್ಟರ್​-2 ಚಿತ್ರ ವೀಕ್ಷಣೆ ಮಾಡಿದ್ದಾರೆ. ಏಪ್ರಿಲ್ 17ರಂದು ಪ್ಲೇಯರ್ಸ್​ಗೆ ವಿಶೇಷ ಅವಕಾಶ ಮಾಡಿಕೊಡಲಾಗಿತ್ತು.

ಇದನ್ನೂ ಓದಿ:ಎರಡು ದೊಡ್ಡ ಕನಸುಗಳ ಸಮ್ಮಿಲನ.. ಕರುನಾಡ ಹೆಮ್ಮೆ ಆರ್‌ಸಿಬಿ-ಹೊಂಬಾಳೆ ಜುಗಲ್‌ಬಂದಿ ಜಬರ್ದಸ್ತ್‌!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೊಂಬಾಳೆ ಈಗಾಗಲೇ ಒಟ್ಟಿಗೆ ಸೇರಿಕೊಂಡು, ಜನರಿಗೆ ಮನರಂಜನೆ ನೀಡಲು ಸಜ್ಜಾಗಿವೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ 'ಎರಡು ದೊಡ್ಡ ಕನಸುಗಳ ಸಮ್ಮಿಲನ. ನಮ್ಮ ಹೊಂಬಾಳೆಯು RCB ತಂಡದೊಂದಿಗೆ ಒಟ್ಟಿಗೆ ಕೆಲಸ ಮಾಡಲು ಹೆಮ್ಮೆ ಮತ್ತು ಉತ್ಸುಕವಾಗಿದೆ. ನಾವಿಬ್ಬರು ಒಟ್ಟಿಗೆ ಸೇರಿ ಮನರಂಜನೆಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ' ಎಂದು ತಿಳಿಸಿತ್ತು.

ABOUT THE AUTHOR

...view details