ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್ ಶಿವಂ ದುಬೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಆರಂಭದ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಶಿವಂ ದುಬೆ ಜೊತೆಗೆ ತಂಡದ ವಿಡಿಯೋ ಅನಾಲಿಸ್ಟ್ ಗಣೇಶ್ ತ್ಯಾಗಿಗೆ ಸೋಂಕು ದೃಢಪಟ್ಟಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೂಲ ತಿಳಿಸಿದೆ. ಶಿವಂ ದುಬೆ ಜಾಗಕ್ಕೆ ಸಾಯಿರಾಜ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಈ ಸಾಲಿನ ರಣಜಿ ಟ್ರೋಫಿಗೆ ಕೋವಿಡ್ ಕಾಟ ಹೆಚ್ಚಾಗಿದೆ. ಈಗಾಗಲೇ ಬಂಗಾಳ ತಂಡದ ಏಳು ಸದಸ್ಯರಿಗೆ ಕೊರೊನಾ ಖಚಿತಗೊಂಡಿದೆ. ಇವರೆಲ್ಲರಿಗೂ ಕ್ವಾಂರಂಟೈನ್ನಲ್ಲಿಡಲಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.