ಕರ್ನಾಟಕ

karnataka

By

Published : Aug 16, 2023, 7:51 PM IST

ETV Bharat / sports

Prithvi Shaw: ಇಂಗ್ಲೆಂಡ್​ನಲ್ಲಿ ಕೌಂಟಿ ಪಂದ್ಯ; ಪೃಥ್ವಿ ಶಾ ಮೊಣಕಾಲಿಗೆ ಗಂಭೀರ ಗಾಯ

Prithvi Shaw injured: ಇಂಗ್ಲೆಂಡ್​ನ ಏಕದಿನ ಕೌಂಟಿ ಕ್ರಿಕೆಟ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಮೊಣಕಾಲು ಗಾಯಕ್ಕೆ ತುತ್ತಾದ ಶಾ ತಂಡದಿಂದ ಹೊರಗುಳಿದಿದ್ದಾರೆ.

Prithvi Shaw
Prithvi Shaw

ಲಂಡನ್​:ಇಂಗ್ಲೆಂಡ್​ನಲ್ಲಿ ನಡೆಯುತ್ತಿದ್ದ ಏಕದಿನ ಮಾದರಿಯ ಕೌಂಟಿ ಕ್ರಿಕೆಟ್​ನಲ್ಲಿ ಆಡುತ್ತಿರುವ ಪೃಥ್ವಿ ಶಾ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಭಾವಿ ಇನ್ನಿಂಗ್ಸ್​ ಆಡಿದ್ದ ಶಾ, ಮೊಣಕಾಲಿನ ಗಾಯದಿಂದ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ. ಈ ಬಗ್ಗೆ ನಾರ್ಥಾಂಪ್ಟನ್‌ಶೈರ್​ ತನ್ನ ಎಕ್ಸ್​ ಆ್ಯಪ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಫಾರ್ಮ್​ ಕಳೆದುಕೊಂಡು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದ ಶಾ ಅವರು ಲಂಡನ್​ ಕೌಂಟಿಯಲ್ಲಿ ಲಯಕ್ಕೆ ಮರಳಿದ್ದರು. ಆದರೆ ಗಾಯಕ್ಕೆ ತುತ್ತಾಗಿದ್ದು, ಮತ್ತೆ ಸಂಕಷ್ಟ ಎದುರಾಗಿದೆ. ನಾರ್ಥಾಂಪ್ಟನ್‌ಶೈರ್ ಪರ ನಾಲ್ಕು ಇನ್ನಿಂಗ್ಸ್​ ಆಡಿರುವ ಪೃಥ್ವಿ ಶಾ ಒಂದು ದ್ವಿಶತಕ ಮತ್ತು ಶತಕ ಗಳಿಸಿದ್ದಾರೆ. ಮುಂಬೈ ಬ್ಯಾಟರ್​ ಆರಂಭಿಕರಾಗಿ ಫಾರ್ಮ್​ನಲ್ಲಿ ಕಂಡುಬಂದಿದ್ದರು. ಅದ್ಭುತ ಪ್ರದರ್ಶನದಿಂದ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ನಿರೀಕ್ಷೆಯೂ ಇತ್ತು.

ಆಗಸ್ಟ್​ 13ರಂದು ನಾರ್ಥಾಂಪ್ಟನ್‌ಶೈರ್ ತಂಡ ಡರ್ಹಾಮ್ ವಿರುದ್ಧ ಪಂದ್ಯವನ್ನಾಡಿತ್ತು. ಇದರಲ್ಲಿ ಮೊದಲು ಬ್ಯಾಟ್​ ಮಾಡಿದ ಡರ್ಹಾಮ್ 198 ರನ್ ಗಳಿಸಿ ಆಲ್​ಔಟ್​ ಆಗಿತ್ತು. ಈ ಗುರಿ ಬೆನ್ನತ್ತಿದ್ದ ನಾರ್ಥಾಂಪ್ಟನ್‌ಶೈರ್ 25.4 ಓವರ್​ನಲ್ಲೇ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಶಾ 76 ಬಾಲ್​ನಲ್ಲಿ 15 ಬೌಂಡರಿ ಮತ್ತು 7 ಸಿಕ್ಸ್​ನಿಂದ 125 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು. ಇದೇ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್​ ಮಾಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಆದರೆ ಗಾಯವನ್ನೂ ಲೆಕ್ಕಿಸದೆ ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿದ್ದಾರೆ.

ಪಂದ್ಯದ ನಂತರ ಸ್ಕ್ಯಾನ್‌ ಮಾಡಿಸಲಾಗಿದೆ. ಇಂದು ಬೆಳಿಗ್ಗೆ ಬಂದ ವರದಿಯಂತೆ ಗಾಯ ತೀವ್ರವಾಗಿದ್ದು ಒಂದೂವರೆ ತಿಂಗಳಿಗೂ ಹೆಚ್ಚುಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗಿದೆ. ಸದ್ಯ ಅವರು ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದಾರೆ. ಒಂದೆರಡು ವಾರದ ಚಿಕಿತ್ಸೆಯ ನಂತರ ಭಾರತಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ.

ನಾರ್ಥಾಂಪ್ಟನ್‌ಶೈರ್​ನ ಎಕ್ಸ್​ ಆ್ಯಪ್​ ಖಾತೆಯಲ್ಲಿ, "ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಮೊಣಕಾಲಿನ ಗಾಯವಾಗಿದೆ. ಇಂದು ಬೆಳಿಗ್ಗೆ ಸ್ವೀಕರಿಸಿದ ಸ್ಕ್ಯಾನ್ ಫಲಿತಾಂಶದ ವರದಿಯಲ್ಲಿ ಗಾಯ ಗಂಭೀರವಾಗಿರುವುದು ಕಂಡುಬಂದಿದೆ. ಉಳಿದ ಪಂದ್ಯಗಳಿಗೆ ಅವರು ತಂಡದಲ್ಲಿ ಇರುವುದಿಲ್ಲ" ಎಂದು ತಿಳಿಸಿದೆ.

ನಾರ್ಥಾಂಪ್ಟನ್‌ಶೈರ್​ನ ಕೋಚ್​ ಜಾನ್ ಸ್ಯಾಡ್ಲರ್, "ಕೆಲವೇ ಸಮಯ ನಮ್ಮ ತಂಡಕ್ಕಾಗಿ ಆಡಿ ದೊಡ್ಡ ಮಟ್ಟದ ಪ್ರಭಾವ ಬೀರಿದ್ದಾರೆ. ಟೂರ್ನಿಯ ಮುಂದಿನ ಭಾಗದಲ್ಲಿ ಅವರು ನಮ್ಮೊಂದಿಗೆ ಇರದೇ ಇರುವುದು ಬೇಸರದ ಸಂಗತಿಯಾಗಿದೆ. ಗಾಯದ ನಂತರವೂ ಅವರು ಬ್ಯಾಟ್​ ಮಾಡಿ ಶತಕ ಗಳಿಸಿದ್ದರು. ನಾರ್ಥಾಂಪ್ಟನ್‌ಶೈರ್ ಪರ ಆಡಿದ್ದಕ್ಕಾಗಿ ಕೃತಜ್ಞತೆಗಳು" ಎಂದಿದ್ದಾರೆ.

ಇದನ್ನೂ ಓದಿ:Rishabh Pant: ಬ್ಯಾಟ್​​ ಹಿಡಿದು ಮೈದಾನಕ್ಕಿಳಿದ ರಿಷಬ್​ ಪಂತ್; ಶೀಘ್ರವೇ ತಂಡಕ್ಕೆ?

ABOUT THE AUTHOR

...view details