ಕರ್ನಾಟಕ

karnataka

ಕ್ರಿಕೆಟ್ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದವರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ..

By

Published : Jul 3, 2021, 9:17 PM IST

ಇದು ಕೇವಲ ಅದೃಷ್ಟದ ವಿಷಯವಷ್ಟೇ.. ಬೇರೊಬ್ಬರತ್ತ ಬೊಟ್ಟು ಮಾಡಿ ತೋರಿಸುವುದು ತುಂಬಾ ಸುಲಭ, ಅದರಲ್ಲೂ ಕ್ರಿಕೆಟ್​ ಬಗ್ಗೆ ಯಾವುದೇ ಜ್ಞಾನ ಇಲ್ಲದವರು, ಯಾವುದೇ ಗಲ್ಲಿ ತಂಡವನ್ನು ಮುನ್ನಡೆಸದವರು ಭಾರತಕ್ಕೆ ನಾಯಕನನ್ನು ಬದಲಿಸಲು ಸಲಹೆ ನೀಡುತ್ತಿದ್ದಾರೆ..

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಕರಾಚಿ : ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ, ಕೊಹ್ಲಿ ಅವರ ನಾಯಕತ್ವದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಭಾರತ ವಿರಾಟ್ ನಾಯಕತ್ವದಲ್ಲಿ 2017ರ ಚಾಂಪಿಯನ್​ ಟ್ರೋಫಿ, 2021 WTCಯಲ್ಲಿ ಫೈನಲ್​ನಲ್ಲಿ ಸೋಲು ಕಂಡರೆ, 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ನಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿತ್ತು.

ಆದರೆ, ವಿರಾಟ್ ನಾಯಕತ್ವವನ್ನು ಟೀಕಿಸುವವರ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ಕಮ್ರನ್ ಅಕ್ಮಲ್. ಎಂಎಸ್​ ಧೋನಿಯ ನಂತರ ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕರಾಗಿದ್ದಾರೆ. ಅವರು 70 ಶತಕಗಳನ್ನು ಹೊಂದಿದ್ದಾರೆ. ಅವರು 2017 ಮತ್ತು 2019 ವಿಶ್ವಕಪ್​ನಲ್ಲಿ ಭಾರತವನ್ನು ನಾಕೌಟ್ ಹಂತಕ್ಕೆ​ ಕೊಂಡೊಯ್ದಿದ್ದಾರೆ. ಇಷ್ಟು ಸಾಕಲ್ಲವೇ, ಭಾರತ ಸೋಲು ಕಂಡರೆ, ಅದರಲ್ಲಿ ಅವರ ತಪ್ಪೇನಿದೆ ಎಂದಿದ್ದಾರೆ.

ಅಲ್ಲದೆ ಭಾರತ ತಂಡ ಅವರ(ಕೊಹ್ಲಿ) ನಾಯಕತ್ವದಲ್ಲಿ 5 ವರ್ಷಗಳ ಕಾಲ ನಂಬರ್ 1 ಸ್ಥಾನದಲ್ಲಿದೆ. ಅವರ ಸಾಧನೆ ಮತ್ತು ಸೇವೆಯನ್ನು ಒಮ್ಮೆ ನೋಡಿ. ಅವರ ನಾಯಕತ್ವ ಭಯಾನಕ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅವರೊಬ್ಬ ಅದ್ಭುತ ಆಟಗಾರ ಮತ್ತು ತಮ್ಮನ್ನು ತಾವೂ ರೂಪಿಸಿಕೊಂಡಿರುವ ರೀತಿ ಅಮೋಘವಾಗಿದೆ ಎಂದು ಅಕ್ಮಲ್ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರೊಬ್ಬ ಅದ್ಭುತ ನಾಯಕ, ಭಾರತ ತಂಡದ ನಾಯಕತ್ವದ ಬದಲಾವಣೆ ಮಾಡಿದರೆ ಐಸಿಸಿ ಟ್ರೋಫಿ ಗೆಲ್ಲಲಿದೆ ಎನ್ನುವುದಕ್ಕೆ ಯಾರು ಗ್ಯಾರಂಟಿ ಕೊಡಲಾರರು. ಇದು ಕೇವಲ ಅದೃಷ್ಟದ ವಿಷಯವಷ್ಟೇ.. ಬೇರೊಬ್ಬರತ್ತ ಬೊಟ್ಟು ಮಾಡಿ ತೋರಿಸುವುದು ತುಂಬಾ ಸುಲಭ, ಅದರಲ್ಲೂ ಕ್ರಿಕೆಟ್​ ಬಗ್ಗೆ ಯಾವುದೇ ಜ್ಞಾನ ಇಲ್ಲದವರು, ಯಾವುದೇ ಗಲ್ಲಿ ತಂಡವನ್ನು ಮುನ್ನಡೆಸದವರು ಭಾರತಕ್ಕೆ ನಾಯಕನನ್ನು ಬದಲಿಸಲು ಸಲಹೆ ನೀಡುತ್ತಿದ್ದಾರೆ ಎಂದು ಅಕ್ಮಲ್ ತಿಳಿಸಿದ್ದಾರೆ.

ಇದನ್ನು ಓದಿ:ಐಪಿಎಲ್​ನಲ್ಲಿ ಆಡಿರುವುದು ಸ್ಯಾಮ್​ ಕರ್ರನ್​ಗೆ ಭಾರಿ ಅನುಕೂಲವಾಗಿದೆ : ಇಂಗ್ಲೆಂಡ್ ಕೋಚ್​

ABOUT THE AUTHOR

...view details