ಕರ್ನಾಟಕ

karnataka

By

Published : Nov 30, 2021, 1:12 PM IST

ETV Bharat / sports

ಕಳಪೆ ಫಾರ್ಮ್‌; ಟೀಂ ಇಂಡಿಯಾ ಉಪ ನಾಯಕನ ಪರ ಕೋಚ್‌ ದ್ರಾವಿಡ್‌ ಬ್ಯಾಟಿಂಗ್‌

Ajinkya's form: ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಉಪ ನಾಯಕ ರಹಾನೆ ಮೊದಲ ಇನ್ನಿಂಗ್ಸ್‌ನಲ್ಲಿ 35 ರನ್‌ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 4 ರನ್‌ಗಳಿಸಿದ್ದರು. ರಹಾನೆಗೆ ರನ್‌ಗಳಿಸುವ ಉತ್ಸಾಹ ಇದೆ ಎಂದು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Not worried about Ajinkya's form but you would like him to score more runs: Dravid
ಕಳಪೆ ಫಾರ್ಮ್‌; ಟೀಂ ಇಂಡಿಯಾ ಉಪ ನಾಯಕನ ಪರ ಕೋಚ್‌ ದ್ರಾವಿಡ್‌ ಬ್ಯಾಟಿಂಗ್‌

ಕಾನ್ಪುರ್‌: ಅಜಿಂಕ್ಯ ರಹಾನೆ ಎಲ್ಲರಿಗಿಂತಲೂ ಹೆಚ್ಚು ರನ್‌ಗಳಿಸಲು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾ ಉಪ ನಾಯಕ ತಮ್ಮ ಫಾರ್ಮ್‌ಗೆ ಮರಳಲು ಇದು ಕೇವಲ ಒಂದು ಪಂದ್ಯದ ವಿಷಯವಾಗಿದೆ ಎಂದು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಕಾನ್ಪುರದಲ್ಲಿ ನಿನ್ನೆ ಮುಕ್ತಾಯವಾದ ಮೊದಲ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರಹಾನೆ ಮೊದಲ ಇನ್ನಿಂಗ್ಸ್‌ನಲ್ಲಿ 38 ರನ್‌ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳಿಸಿದ್ದರು. ಕಳೆದ ಒಟ್ಟು 12 ಪಂದ್ಯಗಳಿಂದ 20 ರನ್‌ಗಿಂತಲೂ ಕಡಿಮೆ ಸರಾಸರಿ ಇದೆ.

ರಹಾನೆ ಅವರ ಕಳಪೆ ಫಾರ್ಮ್‌ ಅವರ ಕಳವಳಕ್ಕೆ ಕಾರಣವಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೋಚ್‌ ದ್ರಾವಿಡ್‌, ನೀವು ರಹಾನೆ ಹೆಚ್ಚಿನ ರನ್‌ ಗಳಿಸುವುದನ್ನು ಬಯಸುತ್ತೀರಿ, ಅವರೂ ಹೆಚ್ಚಿನ ರನ್‌ ಗಳಿಸಲು ಬಯಸುತ್ತಾರೆ. ನೀವು ಅದರ ಬಗ್ಗೆ ಚಿಂತಿಸಬೇಡಿ ಎಂದಿದ್ದಾರೆ.

ಅವರು ಗುಣಮಟ್ಟದ ಆಟಗಾರ. ಈ ಹಿಂದೆ ಅವರು ಟೀಂ ಇಂಡಿಯಾಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಗುಣಮಟ್ಟದ ಬ್ಯಾಟಿಂಗ್‌ ಹಾಗೂ ಅನುಭವವನ್ನು ಹೊಂದಿರುವ ಆಟಗಾರರಲ್ಲಿ ಅವರೂ ಒಬ್ಬರು. ಉತ್ತಮ ರನ್‌ಗಳಿಸುವ ಬಗ್ಗೆ ಅವರಿಗೆ ತಿಳಿದಿದೆ. ಅದು ನಮಗೂ ಗೊತ್ತಿದೆ ಎಂದು 'ದಿ ಗ್ರೇಟ್‌ ವಾಲ್‌' ಹೇಳಿದ್ದಾರೆ.

ಆದರೂ ಮುಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್‌ ಆಗಿರುವುದರಿಂದ ಯಾರನ್ನು ಕೈಬಿಡಬೇಕು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ವಿರಾಟ್‌ ತಂಡಕ್ಕೆ ಸೇರಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಾದಾರ್ಪಣೆಯ ಪಂದ್ಯದಲ್ಲೇ ಶ್ರೇಯಸ್‌ ಅಯ್ಯರ್‌ ಪಂದ್ಯಶ್ರೇಷ್ಠ ಆಟವಾಡಿದ್ದರೂ ರಹಾನೆಗೆ ಅವಕಾಶ ಕಲ್ಪಿಸುವ ಸಲುವಾಗಿ ಅಯ್ಯರ್‌ ಅವರನ್ನು ಕೈಬಿಡಲಾಗುತ್ತದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಮೊದಲ ಟೆಸ್ಟ್‌ನಲ್ಲಿ ಅಯ್ಯರ್ 105 ಹಾಗೂ 65 ರನ್‌ಗಳಿಸಿದ್ದರು. ಪಾದಾರ್ಪಣೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶಕತ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಅಂತಿಮ 11ರ ಬಳಗದಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಭಾರತದ ಗೆಲುವಿಗೆ ಮಂದಬೆಳಕು ಅಡ್ಡಿ: ರೋಚಕ ಡ್ರಾನಲ್ಲಿ ಮೊದಲ ಟೆಸ್ಟ್ ಅಂತ್ಯ

ABOUT THE AUTHOR

...view details