ಕರ್ನಾಟಕ

karnataka

By

Published : Mar 16, 2022, 3:59 PM IST

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್​ ಬಸ್ ಕಿಟಕಿ ಗಾಜು ಪುಡಿಗಟ್ಟಿದ MNS​ ಕಾರ್ಯಕರ್ತರು

ಪಂಚತಾರಾ ಹೋಟೆಲ್​ ಮುಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬಸ್ ​ಅನ್ನು ಪಾರ್ಕ್ ಮಾಡಲಾಗಿತ್ತು. ಮಂಗಳವಾರ ಮಧ್ಯರಾತ್ರಿ ಅಲ್ಲಿಗೆ ಬಂದಿರುವ ಎಂಎನ್​ಎಸ್​ನ ಸಾರಿಗೆ ವಿಭಾಗದ ಕಾರ್ಯಕರ್ತರು ತಮ್ಮ ಬೇಡಿಕೆಯುಳ್ಳ ಪೋಸ್ಟರ್​ಗಳನ್ನು ಬಸ್​ ಮುಂದೆ ಅಂಟಿಸಿ ಘೋಷಣೆ ಕೂಗುತ್ತಾ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

MNS activists attack Delhi Capital IPL team bus
MNS activists attack Delhi Capital IPL team bus

ಮುಂಬೈ:ರಾಜ್​ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಕಾರ್ಯಕರ್ತರು ಐಪಿಎಲ್​ಗಾಗಿ ಮುಂಬೈಗೆ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐಷಾರಾಮಿ ಬಸ್ಸಿನ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ.

ಪಂಚತಾರಾ ಹೋಟೆಲ್​ ಮುಂದೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಬಸ್ ​ಅನ್ನು ಪಾರ್ಕ್ ಮಾಡಲಾಗಿತ್ತು. ಮಂಗಳವಾರ ಮಧ್ಯರಾತ್ರಿ ಅಲ್ಲಿಗೆ ಬಂದಂತಹ ಎಂಎನ್​ಎಸ್​ನ ಸಾರಿಗೆ ವಿಭಾಗದ ಕಾರ್ಯಕರ್ತರು ತಮ್ಮ ಬೇಡಿಕೆಯುಳ್ಳ ಪೋಸ್ಟರ್​ಗಳನ್ನು ಬಸ್​ ಮುಂದೆ ಅಂಟಿಸಿ ಘೋಷಣೆ ಕೂಗುತ್ತಾ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಎಂಎನ್ಎಸ್​ ಕಾರ್ಯಕರ್ತ ಸಂಜಯ್ ನಾಯಕ್​ ಮಾತನಾಡಿ, ಹೊರ ರಾಜ್ಯಗಳ ಬಸ್​ಗಳನ್ನು ಬಾಡಿಗೆಗೆ ಪಡೆಯುವುದರಿಂದ ಸ್ಥಳೀಯರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆಯ ಹೊರತಾಗಿಯೂ ಅವರು ಕೆಲವು ಬಸ್​​ಗಳು ಮತ್ತು ಕೆಲವು ಚಿಕ್ಕ ವಾಹನಗಳನ್ನು ಡೆಲ್ಲಿ ಮತ್ತು ಬೇರೆ ಭಾಗಗಳಿಂದ ಇಲ್ಲಿಗೆ ಕರೆತಂದಿದ್ದಾರೆ. ಅದರಿಂದ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ತಿಳಿಯುತ್ತಿದಂತೆ ಹೆಚ್ಚಿನ ಬಸ್‌ಗಳಿಗೆ ಹಾನಿಯಾಗುವುದನ್ನು ತಡೆಯಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ನಾಲ್ವರ ಬಂಧನ: ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಬಸ್​ಗೆ ಹಾನಿ ಮಾಡಿರುವ ಆರೋಪದ ಮೇಲೆ ಎಂಎನ್‌ಎಸ್ ಸಾರಿಗೆ ವಿಭಾಗದ ಉಪಾಧ್ಯಕ್ಷ ಪ್ರಶಾಂತ್ ಗಾಂಧಿ ಸೇರಿದಂತೆ ನಾಲ್ವರು ಕಾರ್ಯಕರ್ತರನ್ನು ಕೊಲಾಬ ಠಾಣೆಯ ಪೊಲೀಸ್​ ಬಂಧಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಮತೆ 5-6 ಮಂದಿ ಅನಾಮಿಕ ವ್ಯಕ್ತಿಗಳ ಮೇಲೂ ಐಪಿಸಿ ಸೆಕ್ಷನ್ 143, 147, 159, 427 ಅಡಿ ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸ್​ ತಿಳಿಸಿದ್ದಾರೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ತಂಡಕ್ಕೆ 2 ಬಾರಿಯ ಐಪಿಎಲ್ ಚಾಂಪಿಯನ್​ ಎಂಟ್ರಿ

For All Latest Updates

ABOUT THE AUTHOR

...view details