ಕರ್ನಾಟಕ

karnataka

By

Published : Mar 22, 2022, 3:08 PM IST

ETV Bharat / sports

ಪಂಜಾಬ್​ ಬಿಟ್ಟು ಲಖನೌ ತಂಡ ಸೇರಿದ್ದೇಕೆ? ಕೆ.ಎಲ್.ರಾಹುಲ್ ಹೊರಹಾಕಿದ್ರು ರಹಸ್ಯ!

ಪಂಜಾಬ್ ತಂಡದ ಕ್ಯಾಪ್ಟನ್​ ಆಗಿ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕ್ರಿಕೆಟಿಗ ಕೆ.ಎಲ್.ರಾಹುಲ್ ದಿಢೀರ್ ಆಗಿ ಫ್ರಾಂಚೈಸಿಯಿಂದ ಹೊರಬಂದು ಹೊಸ ತಂಡದ ಕ್ಯಾಪ್ಟನ್​ ಆಗಿದ್ದಾರೆ. ಈ ನಿರ್ಧಾರವನ್ನು ಯಾವ ಕಾರಣಕ್ಕಾಗಿ ತೆಗೆದುಕೊಂಡರು ಅನ್ನೋದನ್ನು ಅವರೇ ತಿಳಿಸಿದ್ದಾರೆ.

Lucknow Super Giants Captain KL Rahul
Lucknow Super Giants Captain KL Rahul

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ಆರಂಭಗೊಳ್ಳಲು ಕೇವಲ ನಾಲ್ಕು ದಿನ ಬಾಕಿ ಉಳಿದಿದೆ. ಈಗಾಗಲೇ ಬಹುತೇಕ ತಂಡಗಳು ಪಂದ್ಯಗಳಿಗಾಗಿ ಕಠಿಣ ಅಭ್ಯಾಸ ಆರಂಭಿಸಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ಸೂಪರ್​ ಜೈಂಟ್ಸ್​ ಕೂಡ ಕೆ.ಎಲ್.ರಾಹುಲ್​​ ಸಾರಥ್ಯದಲ್ಲಿ ಕಸರತ್ತು ಶುರು ಮಾಡಿದೆ.

ಈ ಹಿಂದಿನ ಆವೃತ್ತಿಗಳಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಆಗಿದ್ದ ರಾಹುಲ್​, ಈ ಸಲ ದಿಢೀರ್​ ಆಗಿ ಫ್ರಾಂಚೈಸಿಯಿಂದ ಹೊರಬಂದಿದ್ದರು. ಜೊತೆಗೆ, ಲಖನೌ ತಂಡ ಸೇರಿಕೊಂಡಿದ್ದರು. ಯಾವ ಕಾರಣಕ್ಕಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಖುದ್ದಾಗಿ ರಾಹುಲ್​ ಮಾತನಾಡಿದ್ದಾರೆ.

ಪಂಜಾಬ್​ ತಂಡದಲ್ಲಿ ನಾಯಕತ್ವದ ಜೊತೆಗೆ ಉತ್ತಮ ರನ್​ಗಳಿಕೆ ಮಾಡುತ್ತಿದ್ದ ಕೆ.ಎಲ್.ರಾಹುಲ್​ ತಂಡವನ್ನು ಪ್ಲೇ ಆಫ್​​ಗೆ ಕರೆದೊಯ್ಯಲು ವಿಫಲರಾಗಿದ್ದರು. ಇದರ ಹೊರತಾಗಿಯೂ ಕೂಡ ಫ್ರಾಂಚೈಸಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿತ್ತು. ಇದಕ್ಕೆ ನಿರಾಕರಿಸಿದ್ದ ರಾಹುಲ್​, ಹೊಸ ತಂಡದಲ್ಲಿ ಮತ್ತಷ್ಟು ಅವಕಾಶ ಎದುರು ನೋಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಪಂಜಾಬ್ ತಂಡ ತೊರೆಯುವ ನಿರ್ಧಾರ ತುಂಬಾ ಕಠಿಣವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಆ ತಂಡದ ಭಾಗವಾಗಿದ್ದೆ. ಆದರೆ, ನನಗಾಗಿ ಬೇರೆ ಇನ್ನೇನೋ ಕಾದಿದೆ. ಹೊಸ ಅವಕಾಶ ಪಡೆದುಕೊಂಡು ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಮತ್ತಷ್ಟು ಏನಾದ್ರು ಮಾಡಬಹುದು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಬೇಕಾಯಿತು. ಇದೇ ಕಾರಣಕ್ಕಾಗಿ ಪಂಜಾಬ್ ತಂಡದಿಂದ ಹೊರಬಂದೆ ಎಂದರು.

ನೆಟ್​​ನಲ್ಲಿ ಅಭ್ಯಾಸದಲ್ಲಿ ಲಖನೌ ಕ್ಯಾಪ್ಟನ್ ಕೆ.ಎಲ್‌.ರಾಹುಲ್​

ಪಂಜಾಬ್​ ತಂಡದಲ್ಲಿ ಈಗಾಗಲೇ ನಾಯಕತ್ವ ಜವಾಬ್ದಾರಿ ನಿರ್ವಹಿಸಿರುವ ಕೆ.ಎಲ್.ರಾಹುಲ್​ ಇದೀಗ ಲಖನೌ ತಂಡದ ಕ್ಯಾಪ್ಟನ್​ ಆಗಲಿದ್ದು, ಉತ್ತಮ ಪ್ರದರ್ಶನ ನೀಡುವ ಇರಾದೆ ಹೊರಹಾಕಿದ್ದಾರೆ. ಪಂಜಾಬ್​ ತಂಡಕ್ಕೆ ರಾಹುಲ್ ಗುಡ್​ಬೈ ಹೇಳುತ್ತಿದ್ದಂತೆ ಮತ್ತೋರ್ವ ಕನ್ನಡಿಗ ಮಯಾಂಕ್​ ಅಗರವಾಲ್​ ತಂಡದ ನಾಯಕನಾಗಿದ್ದಾರೆ.

ಲಖನೌ ತಂಡ: ಕೆ.ಎಲ್.ರಾಹುಲ್​(ಕ್ಯಾಪ್ಟನ್​), ರವಿ ಬಿಶ್ನೋಯ್​, ಸ್ಟೋಯ್ನಿಸ್​, ದೀಪಕ್ ಹೂಡಾ, ಜೇಸನ್ ಹೋಲ್ಡರ್​, ಮನೀಶ್ ಪಾಂಡೆ, ಕ್ವಿಂಟನ್ ಡಿಕಾಕ್​, ಕೃನಾಲ್ ಪಾಂಡ್ಯ, ಆವೇಶ್ ಖಾನ್​, ಅಂಕಿತ್ ಸಿಂಗ್ ರಜಪೂತ್​, ಕೆ.ಗೌತಮ್​, ಚಮೀರಾ, ಶಹಬಾಜ್​ ನದೀಮ್​, ಮನನ್ ವೋಹ್ರಾ, ಮೊಹಿಸ್ನ್ ಖಾನ್​, ಬದೊನಿ, ಮೆಯರ್ಸ್, ಕರಣ್ ಶರ್ಮಾ, ಲಿವಿಸ್​ ಹಾಗು ಮಯಾಂಕ್ ಯಾದವ್​

ABOUT THE AUTHOR

...view details