ಕರ್ನಾಟಕ

karnataka

By

Published : Sep 27, 2021, 4:20 PM IST

ETV Bharat / sports

ಗಂಭೀರ ಗಾಯ : ಯುಎಇಯಿಂದ ಭಾರತಕ್ಕೆ ಮರಳಿದ ಕುಲ್ದೀಪ್ ಯಾದವ್​

ಕುಲ್ದೀಪ್ ಯಾದವ್​ ಮುಂಬೈನಲ್ಲಿ ಮಂಡಿ ಸರ್ಜರಿಗೆ ಒಳಗಾಗಲಿದ್ದು, ಅವರು ಚೇತರಿಸಿಕೊಳ್ಳಲು ಮೂರರಿಂದ ನಾಲ್ಕು ತಿಂಗಳು ಸಮಯ ಬೇಕಾಗಬಹುದು. ಅಲ್ಲದೆ ಮಂಡಿ ಸಂಬಂಧಿತ ಗಾಯಗಳು ಕ್ರೀಡಾಪುಟಗಳಿಗೆ ತುಂಬಾ ಕೆಟ್ಟದಾಗಿರುತ್ತದೆ..

Kuldeep Yadav back from UAE after sustaining knee injury
ಕುಲ್ದೀಪ್ ಯಾದವ್​ ಗಾಯ

ನವದೆಹಲಿ: ಗಂಭೀರ ಮಂಡಿ ಗಾಯಕ್ಕೆ ತುತ್ತಾಗಿರುವ ಎಡಗೈ ಸ್ಪಿನ್ನರ್​ ಕುಲ್ದೀಪ್ ಯಾದವ್​ ಐಪಿಎಲ್​ ತ್ಯಜಿಸಿ ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಇವರು ಅಕ್ಟೋಬರ್​ನಿಂದ ಶುರುವಾಗಲಿರುವ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ ತಂಡದಿಂದ ಈಗಾಗಲೇ ಹೊರ ಬಿದ್ದಿರುವ ಕುಲ್ದೀಪ್ ಯಾದವ್​ ಕೋಲ್ಕತ್ತಾ ನೈಟರ್​ ರೈಡರ್ಸ್ ತಂಡದಲ್ಲಿದ್ದರು. ಇದೀಗ ಗಂಭೀರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಸ್ಪರ್ಧಾತ್ಮಕ ಕ್ರಿಕೆಟ್​ಗೆ ದೀರ್ಘಾವಧಿಯ ಪುನಶ್ಚೇತನಕ್ಕೆ ಒಳಗಾದ ನಂತರ ಮರಳಬಹುದು ಎಂದು ಬಿಸಿಸಿಐ ಮೂಲ ತಿಳಿಸಿದೆ.

"ಹೌದು, ಯುಎಇಯಲ್ಲಿ ಅಭ್ಯಾಸ ಮಾಡುವ ವೇಳೆ ಕುಲ್ದೀಪ್ ಯಾದವ್​ ಮಂಡಿ ನೋವಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ಅವರು ಐಪಿಎಲ್​ನ ಉಳಿದ ಭಾಗದಲ್ಲಿ ಆಡುವುದಕ್ಕೆ ಸಾಧ್ಯವಲ್ಲದ ಕಾರಣ ಭಾರತಕ್ಕೆ ವಾಪಸ್​ ಕಳುಹಿಸಲಾಗಿದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕುಲ್ದೀಪ್ ಯಾದವ್​ ಮುಂಬೈನಲ್ಲಿ ಮಂಡಿ ಸರ್ಜರಿಗೆ ಒಳಗಾಗಲಿದ್ದು, ಅವರು ಚೇತರಿಸಿಕೊಳ್ಳಲು ಮೂರರಿಂದ ನಾಲ್ಕು ತಿಂಗಳು ಸಮಯ ಬೇಕಾಗಬಹುದು. ಅಲ್ಲದೆ ಮಂಡಿ ಸಂಬಂಧಿತ ಗಾಯಗಳು ಕ್ರೀಡಾಪುಟಗಳಿಗೆ ತುಂಬಾ ಕೆಟ್ಟದಾಗಿರುತ್ತದೆ.

ಅವರು ಸಾಕಷ್ಟು ಕಠಿಣ ಪರಿಶ್ರಮವಹಿಸಿ ಮತ್ತೆ ತಮ್ಮ ಬಲವನ್ನು ಮರಳಿ ಪಡೆಯಬೇಕು. ಹಾಗಾಗಿ, ಅವರು ರಣಜಿ ಟ್ರೋಫಿ ಮುಗಿಯುವುದರೊಳಗೆ ಕುಲ್ದೀಪ್ ಪಂದ್ಯವನ್ನಾಡಲು ಸಿದ್ಧರಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಮುಂಬೈ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದ 'ಹರ್ಷಲ್​​ ಪಟೇಲ್​'.. ಈ ಸಾಧನೆ ಮಾಡಿದ ಆರ್​​​​ಸಿಬಿಯ 3ನೇ ಬೌಲರ್​​​​​​

ABOUT THE AUTHOR

...view details