ಕರ್ನಾಟಕ

karnataka

By

Published : Apr 24, 2021, 9:03 PM IST

ETV Bharat / sports

ವೇದಾ ಕೃಷ್ಣಮೂರ್ತಿ ತಾಯಿ ನಿಧನ: ಸಂತಾಪ ಸೂಚಿಸಿದ ಕರ್ನಾಟಕ ಕ್ರಿಕೆಟ್ ಬೋರ್ಡ್​

ವೇದಾ ಕೃಷ್ಣಮೂರ್ತಿ ಅವರ ತಾಯೀ ಚೆಲುವಾಂಬ ದೇವಿ(63) ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಆಸ್ಪತ್ರೆಯಲ್ಲಿ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಮೃತಪಟ್ಟಿದ್ದರು. ಅವರನ್ನು ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ವೇದಾ ಕೃಷ್ಣಮೂರ್ತಿ ತಾಯಿ ನಿಧನ
ವೇದಾ ಕೃಷ್ಣಮೂರ್ತಿ ತಾಯಿ ನಿಧನ

ಬೆಂಗಳೂರು:ಇಂದು ಭಾರತ ತಂಡದ ಮಹಿಳಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿಯ ಅವರ ತಾಯಿ ಕೋವಿಡ್​-19ನಿಂದ ಮೃತಪಟ್ಟಿರುವ ಹಿನ್ನೆಲೆ ಕರ್ನಾಟಕ ಕ್ರಿಕೆಟ್​ ಮಂಡಳಿ ಸಂತಾಪ ಸೂಚಿಸಿದೆ.

ವೇದಾ ಕೃಷ್ಣಮೂರ್ತಿ ಅವರ ತಾಯೀ ಚೆಲುವಾಂಬ ದೇವಿ(63) ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಆಸ್ಪತ್ರೆಯಲ್ಲಿ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಮೃತಪಟ್ಟಿದ್ದರು. ಅವರನ್ನು ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

"ದುಃಖಿತ ಕುಟುಂಬಕ್ಕೆ ತುಂಬಾಲಾಗದ ನಷ್ಟವನ್ನು ಭರಿಸಲು ಎಲ್ಲಾ ಶಕ್ತಿ ನೀಡುವಂತೆ ನಾವೆಲ್ಲರೂ ಪ್ರಾಮಾಣಿಕವಾಗಿ ಸರ್ವಶಕ್ತನಿಗೆ ಪ್ರಾರ್ಥಿಸುತ್ತೇವೆ ಎಂದು ಹಾಗೂ ಆಸ್ಪತ್ರೆಯಲ್ಲಿರುವ ವೇದಾ ಕೃಷ್ಣಮೂರ್ತಿಯ ಕುಟುಂಬದ ಇತರ ಸದಸ್ಯರು ಶೀಘ್ರವಾಗಿ ಚೇತರಿಸಿಕೊಳ್ಳಲು ಮಂಡಳಿ ಬಯಸುತ್ತದೆ" ಎಂದು ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಇದನ್ನು ಓದಿ:ಮಹಾಮಾರಿ ಕೊರೊನಾಗೆ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಬಲಿ

ABOUT THE AUTHOR

...view details