ಕರ್ನಾಟಕ

karnataka

ಈಡನ್ ಗಾರ್ಡನ್ಸ್‌ ಟಿಕೆಟ್ ಹಗರಣ: 'ಬುಕ್ ಮೈ ಶೋ' ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಕೋಲ್ಕತ್ತಾ ಪೊಲೀಸರು

By ETV Bharat Karnataka Team

Published : Nov 3, 2023, 7:55 PM IST

Eden ticket scam: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಟಿಕೆಟ್​ಗಳು ಕಾಳದಂಧೆಯಲ್ಲಿ ಮಾರಾಟವಾಗುತ್ತದೆ ಎಂದು ಅಭಿಮಾನಿಗಳ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು 'ಬುಕ್ ಮೈ ಶೋ' ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Eden ticket scam
Eden ticket scam

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದಲ್ಲಿ ಕ್ರಿಕೆಟ್​ ಒಂದು ಧರ್ಮವಾಗಿದೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಲ್ಲದೇ ಈ ದೇಶದಲ್ಲಿ ಕ್ರಿಕೆಟ್​ ಇರುವ ಕ್ರೇಜ್​ ಬೇರಾವ ಕ್ರೀಡೆಗೂ ಇಲ್ಲ. ಈ ಅಭಿಮಾನವನ್ನೇ ಕೆಲ ಜನರು ದುರ್ಬಳಕೆ ಮಾಡಿಕೊಂಡು, ಹಣ ಮಾಡುತ್ತಿದ್ದಾರೆ. ಆನ್​ಲೈನಲ್​ನಲ್ಲಿ ಮಾರಾಟವಾದ ಟಿಕೆಟ್​ಗಳನ್ನು ದುಬಾರಿ ಹಣಕ್ಕೆ ಮಾರಾಟ ಮಾಡುವ ದಂಧೆ ಬೆಳಕಿಗೆ ಬಂದಿದೆ. ಕೋಲ್ಕತ್ತಾ ಪೊಲೀಸರು ಈ ಜಾಡಿನ ಮೂಲ ಪತ್ತೆ ಹಚ್ಚಲು ಬುಕ್ ಮೈ ಶೋ ಅಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ.

ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ಭಾರತ - ದಕ್ಷಿಣ ಆಫ್ರಿಕಾ ಪಂದ್ಯ ನಡೆಯಲಿದೆ. ಈ ಪಂದ್ಯದ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿದೆ. ಆದರೆ ಪಂದ್ಯ ಇನ್ನು ಎರಡು ದಿನ ಬಾಕಿ ಇರುವಾಗ ಟಿಕೆಟ್​ ಕಳ್ಳದಂಧೆ ಹೆಚ್ಚಾಗಿದೆ. ಇದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅನ್ನು ತಲೆನೋವಿಗೂ ಕಾರಣ ಆಗಿದೆ. ಈ ಕಳ್ಳದಂಧೆ ಬೆನ್ನಟ್ಟಿದ ಕೋಲ್ಕತ್ತಾ ಪೊಲೀಸರು ಸಿಎಬಿ ಅಧ್ಯಕ್ಷ ಸ್ನೇಹಶಿಸ್ ಗಂಗೋಪಾಧ್ಯಾಯ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಾಶಿಸ್ ಗಂಗೋಪಾಧ್ಯಾಯ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೇ ಈ ಬಗ್ಗೆ ಗಂಗೂಲಿ ಅವರಿಂದ ಲಿಖಿತ ಉತ್ತರ ಕೇಳಲಾಗಿದೆ.

ಇದರ ಜೊತೆಗೆ ಕೋಲ್ಕತ್ತಾ ಪೊಲೀಸ್ ಡಿಸಿ ದಕ್ಷಿಣ ಪ್ರಿಯಬ್ರತಾ ರಾಯ್ ಮತ್ತು ಕೋಲ್ಕತ್ತಾ ಪೊಲೀಸರ ರೌಡಿ ನಿಗ್ರಹ ದಳದ ಪತ್ತೆದಾರರು ಈಗಾಗಲೇ ಮೈದಾನ್ ಪೊಲೀಸ್ ಠಾಣೆಯಲ್ಲಿ 'ಬುಕ್ ಮೈ ಶೋ' ಅಧಿಕಾರಿಗಳನ್ನು ಕರೆಸಿ ವಿಚಾರಣೆ ಆರಂಭಿಸಿದ್ದಾರೆ. ಈ ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಲಾಲ್​ ಬಜಾರ್​ ವಿವಿಧ ಸ್ಥಳಗಳಿಂದ ಏಳು ಜನರನ್ನು ಬಂಧಿಸಿದೆ. ತನಿಖಾ ಅಧಿಕಾರಿಗಳು ಆನ್‌ಲೈನ್‌ನಲ್ಲಿ ವಿಶ್ವಕಪ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಯಾರು ಖರೀದಿಸಿದ್ದಾರೆ ಮತ್ತು ಅವರು ಆ ಟಿಕೆಟ್‌ಗಳನ್ನು ಹೇಗೆ ಬ್ಲಾಕ್ ಮಾರ್ಕೆಟ್ ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಕ್ರಿಕೆಟ್​ ಪ್ರೇಮಿಗಳು ಈಡನ್ ಗಾರ್ಡನ್ ಮೈದಾನದ ಮುಂದೆ ಈ ಬ್ಲಾಕ್ ಮಾರ್ಕೆಟ್ ದಂಧೆಯ ಕುರಿತಾಗಿ ನಿನ್ನೆ (ಗುರುವಾರ) ಮತ್ತು ಇಂದು ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಮೈದಾನದ ಸುತ್ತ ರಕ್ಷಣೆಯನ್ನೂ ನೀಡಲಾಗಿದೆ. ಮಾಹಿತಿ ಪ್ರಕಾರ 2.5 ಸಾವಿರ ಮೌಲ್ಯದ ಟಿಕೆಟ್ ಗಳನ್ನು 11ರಿಂದ 15 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ.

ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯೆಲ್,"ನಾವು ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ, ಜೊತೆಗೆ, ನಾವು ಕಾಲಕಾಲಕ್ಕೆ ನಾವು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇವೆ. ಇಷ್ಟು ಟಿಕೆಟ್‌ಗಳು ಹೇಗೆ ಹೊರ ಬಂದವು ಮತ್ತು ಯಾರು ಬ್ಲಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಕಂಡ ಹಿಡಿಯಲಾಗುತ್ತಿದೆ‘‘ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪಿಎಲ್​ನಲ್ಲಿ 30 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ ದೊರೆ!

ABOUT THE AUTHOR

...view details