ಕರ್ನಾಟಕ

karnataka

By

Published : Jul 18, 2022, 4:42 PM IST

ETV Bharat / sports

ಏಕದಿನ ಸರಣಿ ಗೆಲುವಿಗೆ 'ಅದ್ಭುತ ರನ್​ ಚೇಸ್'​ ಎಂದ ವಿರಾಟ್​

ಇಂಗ್ಲೆಂಡ್​ ನೆಲದಲ್ಲಿ ಭಾರತ ತಂಡ ಟಿ-20 ಮತ್ತು ಏಕದಿನ ಸರಣಿ ಜಯಿಸಿದೆ. ಭಾರತದ ಗೆಲುವಿಗೆ ಆಟಗಾರರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kohli hails Team India
ಅದ್ಭುತ ರನ್​ ಚೇಸ್​ ಎಂದು ಎಂದು ಕೊಹ್ಲಿ ಶ್ಲಾಘನೆ

ಮ್ಯಾಂಚೆಸ್ಟರ್(ಇಂಗ್ಲೆಂಡ್​):ಮಾಜಿ ನಾಯಕ ವಿರಾಟ್​ ಕೊಹ್ಲಿ ಇಂಗ್ಲೆಡ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟ ಮತ್ತು ರಿಷಭ್ ಪಂತ್ ಅವರ ಅಬ್ಬರದ ಚೊಚ್ಚಲ ಶತಕದ ಬಗ್ಗೆ ಶ್ಲಾಘಿಸಿದ್ದಾರೆ. ಭಾರತ 38ರನ್​ಗೆ ಮೊದಲ ಮೂರು ವಿಕೆಟ್​ಗಳನ್ನು ಕಳೆದು ಕೊಂಡು ಸಂಕಷ್ಟದಲ್ಲಿದ್ದಾಗ ಹಾರ್ದಿಕ್​ ಮತ್ತು ಪಂತ್​ರ 133 ರನ್‌ಗಳ ಜೊತೆಯಾಟ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು.

’’ಅದ್ಭುತ ರನ್ ಚೇಸ್ ಮತ್ತು ಶ್ರೇಷ್ಠ ಸರಣಿ" ಎಂದು ಕೋಹ್ಲಿ ಟ್ವೀಟ್​ ಮಾಡಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಟೀಮ್​ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿ, ಇಂಗ್ಲೆಂಡ್​ ಪ್ರವಾಸದ ಟಿ-20 ಮತ್ತು ಏಕದಿನ ಸರಣಿಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ.

ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ತಂಡಕ್ಕೆ ಅಭಿನಂದನೆ ಸಲ್ಲಿಸಿ ಹಾರ್ದಿಕ್​ ಮತ್ತು ಪಂತ್​ರ ಜೊತೆಯಾಟ ಉತ್ತಮವಾಗಿತ್ತು ಮತ್ತು ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿದ್ದಾರೆ. ಅಲ್ಲದೇ ಇಂಗ್ಲೆಂಡ್​ ನೆಲದಲ್ಲಿ ಪ್ರಾಬಲ್ಯ ಸಾಧಿಸಿರುವುದು ತುಂಬಾ ಸಂತೋಷವಾಗಿದೆ. ಏಕದಿನ ಪಂದ್ಯ ಗೆಲುವಿನ ಉತ್ತಮ ಚೇಸ್​ ಎಂದು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ 46ನೇ ಓವರ್‌ನಲ್ಲಿ 259 ರನ್‌ಗೆ ಆಲ್​ ಔಟ್​ ಆಯಿತು. 260 ರನ್​ ಗುರಿ ಬೆನ್ನುಹತ್ತಿದ ಭಾರತ 42.1 ಓವರ್‌ಗಳಲ್ಲಿ ಪೂರೈಸಿತು. ಈ ಮೂಲಕ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಪಂತ್​ರ ಚೊಚ್ಚಲ ಶತಕ ಮತ್ತು ಹಾರ್ದಿಕ್​ ಪಾಂಡ್ಯರ ಆಟ ಮೆಚ್ಚುಗೆಗೆ ಕಾರಣವಾಯಿತು.

ಇದನ್ನೂ ಓದಿ:ಮ್ಯಾಚೆಂಸ್ಟರ್​​ನಲ್ಲಿ ರಿಷಭ್ ಶತಕ.. ಇಂಗ್ಲೆಂಡ್ ನೆಲದಲ್ಲಿ ಈ ದಾಖಲೆ ಬರೆದ ಏಷ್ಯಾದ ಏಕೈಕ ವಿಕೆಟ್ ಕೀಪರ್!


ABOUT THE AUTHOR

...view details