ಕರ್ನಾಟಕ

karnataka

By

Published : Sep 20, 2021, 3:51 PM IST

ETV Bharat / sports

CSK ಅಭಿಮಾನಿಗಳಿಗೆ ಗುಡ್​ ನ್ಯೂಸ್​: ರಾಯುಡುಗೆ ಮೂಳೆ ಮುರಿದಿಲ್ಲ ಎನ್ನುವುದು ಎಕ್ಸ್​ ರೇಯಿಂದ ಸ್ಪಷ್ಟ

ಮಿಲ್ನೆ ಎಸೆದ 2ನೇ ಓವರ್​ನ ಕೊನೆಯ ಎಸೆತ ರಾಯುಡು ಮೊಣಕೈಗೆ ಬಲವಾಗಿ ಬಡಿದಿತ್ತು. ನಂತರ ನೋವಿನ ಕಾರಣ ಬ್ಯಾಟಿಂಗ್ ಮುಂದುವರಿಸಲಾಗದೆ ಅವರು ಪೆವಿಲಿಯನ್​ಗೆ ಮರಳಿದ್ದರು.

Ambati Rayudu
ಅಂಬಾಟಿ ರಾಯುಡು

ದುಬೈ: ಭಾನುವಾರ ನಡೆದ 2ನೇ ಹಂತದ ಐಪಿಎಲ್​ನ ಮೊದಲ ಪಂದ್ಯದಲ್ಲಿ ಚೆಂಡು ತಗುಲಿ ಗಾಯಗೊಂಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅಂಬಾಟಿ ರಾಯುಡು ಯಾವುದೇ ಮೂಳೆ ಮುರಿತಕ್ಕೆ ಒಳಗಾಗಿಲ್ಲ. ಮುಂದಿನ ಪಂದ್ಯದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮಿಲ್ನೆ ಎಸೆದ 2ನೇ ಓವರ್​ನ ಕೊನೆಯ ಎಸೆತ ರಾಯುಡುಗೆ ಮೊಣಕೈಗೆ ಬಲವಾಗಿ ಬಡಿದಿತ್ತು. ನಂತರ ನೋವಿನ ಕಾರಣ ಬ್ಯಾಟಿಂಗ್ ಮುಂದುವರಿಸಲಾಗದೆ ಪೆವಿಲಿಯನ್​ಗೆ ಮರಳಿದ್ದರು.

ರಾಯುಡು ಗಾಯಗೊಂಡ ಸಂದರ್ಭ ತುಂಬಾ ಕೆಟ್ಟದಾಗಿತ್ತು, ಅವರು ಸ್ವಲ್ಪ ಹಿಡಿತ ಕಳೆದುಕೊಂಡಿದ್ದರಿಂದ ಆ ಘಟನೆ ಸಂಭವಿಸಿತು. ನಾವು ಕೂಡ ಮೂಳೆ ಮುರಿದಿರಬಹುದು ಎಂದು ಭಯಪಟ್ಟಿದ್ದೆವು. ಆದರೆ ನಮಗೆ ಒಳ್ಳೆಯ ಸುದ್ದಿ ಬಂದಿದೆ. ಅವರ ಎಕ್ಸ್​-ರೇ ಯಾವುದೇ ಮುರಿತವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಕೋಚ್​ ಸ್ಟೀಫನ್ ಫ್ಲೆಮಿಂಗ್ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೌಲಿಂಗ್​ ವೇಳೆ ಸೆಳೆತಕ್ಕೆ ಒಳಗಾಗಿದ್ದ ದೀಪಕ್ ಚಹರ್​ಗೂ ಕೂಡ ಯಾವುದೇ ಗಂಭೀರ ಸಮಸ್ಯೆಯಾಗಿಲ್ಲ. ಅವರು ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 156 ರನ್ ​ಗಳಿಸಿತ್ತು. ಕೇವಲ 24 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಿಎಸ್​ಕೆ ರುತುರಾಜ್​ ಗಾಯಕ್ವಾಡ್​(88) ರನ್​ಗಳ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಆದರೆ ಮುಂಬೈ ಕೇವಲ 136 ರನ್​ ಗಳಿಸಲಷ್ಟೇ ಶಕ್ತವಾಗಿ 20 ರನ್​ಗಳ ಸೋಲು ಕಂಡಿತು.

ಇದನ್ನು ಓದಿ:IPL 2021: ಇಂದು ರಾಯಲ್​ ಚಾಲೆಂಜರ್ಸ್​ ಹಾಗೂ ನೈಟ್​ ರೈಡರ್ಸ್ ಮುಖಾಮುಖಿ​

ABOUT THE AUTHOR

...view details