ಅಹಮದಾಬಾದ್:ಫೀಲ್ಡಿಂಗ್ನಲ್ಲಿ ತಪ್ಪುಗಳಾಗದಿದ್ದರೆ ನಾವು ಡೆಲ್ಲಿ ವಿರುದ್ಧ ಇನ್ನೂ ಅದ್ಭುತ ಗೆಲುವು ಸಾಧಿಸಬಹುದಾಗಿತ್ತು ಎಂದು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಹಂತದಲ್ಲಿ ಪಂದ್ಯ ನಮ್ಮಿಂದ ಕೈಜಾರಿತೆಂದು ಅನ್ನಿಸಿತು. ಆದರೆ ಅಂತಿಮವಾಗಿ ಸಿರಾಜ್ ತೋರಿದ ಬೌಲಿಂಗ್ ದಾಳಿ, ಅವರು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂಬ ಆತ್ಮವಿಶ್ವಾಸ ಮೂಡಿಸಿತು. ಫೀಲ್ಡಿಂಗ್ ಚೆನ್ನಾಗಿ ಮಾಡಿದ್ದರೆ ಪಂದ್ಯವು ಇಷ್ಟೊಂದು ಒತ್ತಡ ಬೀರುತ್ತಿರಲಿಲ್ಲ. ವಿಕೆಟ್ ಕಳೆದುಕೊಂಡರೂ ಕೊನೆಯ ಓವರ್ಗಳಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ತೋರಿದರು. ಬಳಿಕ ಹೆಟ್ಮೇರ್ ಅಬ್ಬರಿಸಿದರೂ ಕೂಡ ನಾವು ಪಂದ್ಯದ ಮೇಲೆ ನಿಯಂತ್ರಣ ಹೊಂದಿದ್ದೆವು ಎಂದು ತಿಳಿಸಿದರು.