ಕರ್ನಾಟಕ

karnataka

By

Published : Nov 2, 2020, 7:23 PM IST

ETV Bharat / sports

ಕ್ಷಮಿಸಿ, ನೀವು ನಿರೀಕ್ಷಿಸಿದಂತೆ ಪ್ರದರ್ಶನ ನೀಡಲು ಆಗಿಲ್ಲ: ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ತಾಹಿರ್​

ಐಪಿಎಲ್​ -2020 ಪ್ಲೇ ಆಫ್ ಅರ್ಹತೆ ಪಡೆಯುವಲ್ಲಿ ಸಿಎಸ್​ಕೆ ವಿಫಲವಾದ ಬೆನ್ನಲ್ಲೇ ತಂಡದ ಆಟಗಾರ ಇಮ್ರಾನ್ ತಾಹಿರ್​ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

Imran Tahir pens emotional note for CSK fans
ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ತಾಹಿರ್​

ಅಬುಧಾಬಿ:ಐಪಿಎಲ್​ ಇತಿಹಾಸದಲ್ಲೇ ಮೊದಲ ಬಾರಿಗೆ ಚೆನ್ನೈ ಸೂಪರ್​ ಕಿಂಗ್ಸ್​(ಸಿಎಸ್​ಕೆ) ತಂಡ ಪ್ಲೇ ಆಫ್ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ಈ ನಡುವೆ ರುತುರಾಜ್ ಗಾಯಕ್ವಾಡ್​ ಅವರ ಉತ್ತಮ ಬ್ಯಾಟಿಂಗ್​ನಿಂದ ಧೋನಿ ನೇತೃತ್ವದ ಸಿಎಎಸ್​ಕೆ ಕೊನೆಯ ಮೂರು ಪಂದ್ಯಗಳನ್ನು ಗೆದ್ದಿದೆ. ಭಾನುವಾರ ಕೊನೆಯ ಪಂದ್ಯ ಗೆದ್ದ ಬಳಿಕ ಸ್ಪಿನ್ನರ್​ ಇಮ್ರಾನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದು, ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಾಹಿರ್​ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್​ ಗೇಲ್​ನಂತಹ ಆಟಗಾರನನ್ನು ಔಟ್​ ಮಾಡುವ ಮೂಲಕ ಸಿಎಸ್​ಕೆ ಗೆಲುವಿಗೆ ತಾಹಿರ್​ ನೆರವಾಗಿದ್ದರು.

ಉತ್ತಮ ಫಿನಿಶಿಂಗ್ ಮಾಡಿದ್ದೇವೆ. ಆದರೆ ಕೊನೆಯಲ್ಲಿ ಪ್ಲೇ ಆಫ್​ಗೆ ಹೋಗಲು ಸಾಧ್ಯವಾಗಿಲ್ಲ ಎಂಬ ನೋವಿದೆ. ಕ್ಷಮಿಸಿ ಅಭಿಮಾನಿಗಳೇ, ನೀವು ನಿರೀಕ್ಷಿಸಿದ ರೀತಿಯಲ್ಲಿ ನನಗೆ ಪ್ರದರ್ಶನ ನೀಡಲು ಆಗಿಲ್ಲ. ಮುಂದಿನ ವರ್ಷ ಮತ್ತೆ ಅವಕಾಶ ಕೊಟ್ಟರೆ ಉತ್ತಮ ಪ್ರದರ್ಶನ ನೀಡುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ತಾಹಿರ್​ ಟ್ವೀಟ್​ ಮಾಡಿದ್ದಾರೆ.

ಅಬುಧಾಬಿಯ ಶೈಖ್ ಜಾಯಿದ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗಾಯಕ್ವಾಡ್​ ಮತ್ತು ಫಾಫ್ ಡು ಪ್ಲೆಸಿಸ್ ಕ್ರಮವಾಗಿ 62 ಮತ್ತು 48 ರನ್ ಗಳಿಸಿದರು. ಈ ಪಂದ್ಯದ ಮೂಲಕ ಸಿಎಸ್​ಕೆ ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದಿದೆ.

ABOUT THE AUTHOR

...view details