ಕರ್ನಾಟಕ

karnataka

ಐಪಿಎಲ್​ನಲ್ಲಿ ಫಾರ್ಮ್​ಗೆ ಬಾರದ ಆರ್​ಸಿಬಿ: ಬೌಲರ್​ಗಳಿಗೆ ಧೈರ್ಯ ಸಾಲದು ಎಂದ ಕ್ಯಾಪ್ಟನ್​ ಕೊಹ್ಲಿ

By

Published : Apr 6, 2019, 12:12 PM IST

ಐಪಿಎಲ್​ನಲ್ಲಿ ಆರ್​ಸಿಬಿ ಸೋಲಿಗೆ ಬೌಲರ್​ಗಳು ಕಾರಣ ಎಂಬರ್ಥದಲ್ಲಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮಾತನಾಡಿದ್ದಾರೆ

ಬೌಲರ್​ಗಳಿಗೆ ಧೈರ್ಯ ಸಾಲದು ಎಂದ ಕೊಹ್ಲಿ

ನವದೆಹಲಿ: ಈ ಬಾರಿಯ ಐಪಿಎಲ್​ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋಲುಂಡಿರುವ ಆರ್​ಸಿಬಿ, ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ನಿನ್ನೆ ಪಂದ್ಯದ ಸೋಲಿಗೆ ಬೌಲರ್​ಗಳು ಕಾರಣ ಎಂಬರ್ಥದಲ್ಲಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಈ ಪಂದ್ಯವನ್ನು ಸೋಲ್ತೀವಿ ಅಂದುಕೊಂಡೇ ಇರಲಿಲ್ಲ. ಕೊನೆಯ ನಾಲ್ಕು ಓವರ್​ಗಳಲ್ಲಿನ ಬೌಲಿಂಗ್​ ಅಂತೂ ಒಪ್ಪಲಾಗದು. ಐಪಿಎಲ್​ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೇ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್​ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಈ ರೀತಿಯಾಗಿ ನಾವು ಬೌಲಿಂಗ್ ಮಾಡಿದರೆ ಒತ್ತಡ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಆಗಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ನ ಆಂಡ್ರೆ​ ರಸೆಲ್​ ಕೇವಲ 13 ಬಾಲ್​ಗಳಲ್ಲಿ 48 ರನ್​ ಬಾರಿಸಿದ್ದರು. ಆರ್​ಸಿಬಿ ಬೌಲರ್​ಗಳ ಬಗ್ಗೆ ಅಭಿಮಾನಿಗಳೂ ಟೀಕೆ ವ್ಯಕ್ತಪಡಿಸಿದ್ದಾರೆ.

TAGGED:

ABOUT THE AUTHOR

...view details