ಕರ್ನಾಟಕ

karnataka

By

Published : Dec 13, 2020, 9:22 AM IST

ETV Bharat / sports

ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಮೂರನೇ ವೇಗಿಯಾಗಿ ಇವರು ಕಣಕ್ಕಿಳಿದರೆ ಉತ್ತಮ : ಆಕಾಶ್ ಚೋಪ್ರಾ

ಮೂರನೇ ವೇಗಿಯಾಗಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ಈ ಮೂವರಲ್ಲಿ ಒಬ್ಬರು, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಉತ್ತಮ ಸಾಥ್ ನೀಡಲಿದ್ದಾರೆ. ಇದರಿಂದ ಎದುರಾಳಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನ ಸುಲಭವಾಗಿ ಕಟ್ಟಿ ಹಾಕಬಹುದು ಎಂದಿದ್ದಾರೆ..

'India's pace attack will trouble Australian top order'
ಟೀಮ್​ ಇಂಡಿಯಾ ಬೌಲರ್

ಹೈದರಾಬಾದ್ :ಟೀಂ​ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈಗಾಗಲೇ ಏಕದಿನ ಮತ್ತು ಟಿ-20 ಸರಣಿಯನ್ನು ಮುಕ್ತಾಯವಾಗಿದೆ. ಏಕದಿನ ಸರಣಿಯನ್ನ ಕಾಂಗ್ರೂ ಪಡೆ ಗೆದ್ದುಕೊಂಡರೆ, ಟಿ-20 ಸರಣಿ ಬ್ಲ್ಯೂ ಬಾಯ್ಸ್​ ಪಾಲಾಗಿದೆ. ಈಗ ಮುಂಬರುವ ಟೆಸ್ಟ್ ಸರಣಿಗೆ ಎರಡು ತಂಡಗಳು ಭರ್ಜರಿ ತಯಾರಿ ನಡೆಸಿವೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಮತ್ತು ಟಿ-20 ಸರಣಿಯಲ್ಲಿ ಟೀಂ​ ಇಂಡಿಯಾ ಬೌಲರ್​ಗಳು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಹಾಗಾಗಿ ಟೆಸ್ಟ್​ ಸರಣಿಗೆ ಭಾರತ ಬೌಲರ್​ಗಳು ಭರ್ಜರಿ ಪೂರ್ವ ತಯಾರಿ ನಡೆಸಿದ್ದಾರೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟೀಂ​ ಇಂಡಿಯಾ ಯುವ ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಭಾರತ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ನೇತೃತ್ವದ ಭಾರತದ ವೇಗದ ಬೌಲಿಂಗ್ ದಾಳಿಯು ಎದುರಾಳಿ ತಂಡದ ಬ್ಯಾಟಿಂಗ್​ ಬಲ ಕಟ್ಟಿ ಹಾಕಲಿದೆ ಎಂದು ಹೇಳಿದ್ದಾರೆ.

ಮೂರನೇ ವೇಗಿಯಾಗಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ನವದೀಪ್ ಸೈನಿ ಈ ಮೂವರಲ್ಲಿ ಒಬ್ಬರು, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಉತ್ತಮ ಸಾಥ್ ನೀಡಲಿದ್ದಾರೆ. ಇದರಿಂದ ಎದುರಾಳಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನ ಸುಲಭವಾಗಿ ಕಟ್ಟಿ ಹಾಕಬಹುದು ಎಂದಿದ್ದಾರೆ.

ವಾರ್ನರ್ ಅನುಪಸ್ಥಿತಿಯು ಆಸ್ಟ್ರೇಲಿಯಾದ ಅಗ್ರ ಕ್ರಮಾಂಕವನ್ನು ಹೆಚ್ಚು ದುರ್ಬಲಗೊಳಿಸುತ್ತದೆ ಎಂದು ಚೋಪ್ರಾ ಹೇಳಿದ್ದಾರೆ.

ABOUT THE AUTHOR

...view details