ಸೌತಾಂಪ್ಟನ್(ಇಂಗ್ಲೆಂಡ್): ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಯಂಗ್ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ವಿಷಯವನ್ನಿಟ್ಟುಕೊಂಡು ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಬಿಸಿಸಿಐ ಕಾಲೆಳೆದಿದ್ದು, ಮುಂಬರುವ ಟಿ - 20 ವಿಶ್ವಕಪ್ ಗೆಲ್ಲಲು ಭಾರತ ತನ್ನ 'ಬಿ ತಂಡ' ಕಳುಹಿಸಲಿ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಟಿ -20 ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾರಂತಹ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಮಿಂಚಿರುವ ಕೆಲ ಯಂಗ್ ಪ್ಲೇಯರ್ಸ್ ತಂಡದಿಂದ ಹೊರಗುಳಿಯಲಿದ್ದಾರೆ.
ಇದೇ ವಿಷಯವನ್ನಿಟ್ಟುಕೊಂಡು ಗ್ರೇಮ್ ಸ್ವಾನ್ ಈ ರೀತಿಯಾಗಿ ಮಾತನಾಡಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಯಂಗ್ ಇಂಡಿಯಾ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದೇ ತಂಡವನ್ನ ಆಸ್ಟ್ರೇಲಿಯಾಗೆ ಕಳುಹಿಸಿ ಭಾರತ ವಿಶ್ವಕಪ್ ಗೆಲ್ಲಬೇಕು ಎಂದಿದ್ದಾರೆ.
ಇದನ್ನೂ ಓದಿರಿ:ಭುವನೇಶ್ವರ್ ಅದ್ಭುತ ಇನ್ಸ್ವಿಂಗರ್ಗೆ ಬಟ್ಲರ್ ಕ್ಲೀನ್ ಬೌಲ್ಡ್: ವಿಡಿಯೋ ನೋಡಿ
ಮೊದಲ ಪಂದ್ಯದಲ್ಲಿ ಯಂಗ್ ಪ್ಲೇಯರ್ಸ್ ಅಬ್ಬರ: ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಯಂಗ್ ಪ್ಲೇಯರ್ಸ್ ದೀಪಕ್ ಹೂಡಾ(33), ಸೂರ್ಯಕುಮಾರ್ ಯಾದವ್(39), ಹಾರ್ದಿಕ್ ಪಾಂಡ್ಯ(51)ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಕೊಹ್ಲಿ ಹಾಗೂ ಪಂತ್ಗೋಸ್ಕರ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಹೂಡಾ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿದೆ.
ಇನ್ನೂ ಅಕ್ಷರ್ ಪಟೇಲ್ ಜಾಗಕ್ಕೆ ಜಡೇಜಾ ಬರಲಿದ್ದು,ಶ್ರೇಯಸ್ ಅಯ್ಯರ್ ಕೂಡ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ಮೊದಲ ಪಂದ್ಯದಲ್ಲೇ ಸ್ವಿಂಗ್ ಬೌಲಿಂಗ್ ಮೂಲಕ ಅರ್ಷದೀಪ್ ಸಿಂಗ್ ಗಮನ ಸೆಳೆದಿದ್ದು, ಜಸ್ಪ್ರೀತ್ ಬುಮ್ರಾಗೋಸ್ಕರ ತಮ್ಮ ಸ್ಥಾನ ತ್ಯಜಿಸಬೇಕಾಗಿದೆ.
ಟಿ-20 ವಿಶ್ವಕಪ್ಗೋಸ್ಕರ ಅನೇಕ ಆಟಗಾರರ ಪ್ರಯೋಗ ಮಾಡುತ್ತಿರುವ ಪ್ರಯೋಗ ಉತ್ತಮ. ಆದರೆ, ಈಗಿರುವ ಬಿ ತಂಡ ಉತ್ತಮವಾಗಿದ್ದು, ಬುಮ್ರಾ, ಕೊಹ್ಲಿ, ಪಂತ್ನಂತಹ ವಿಶ್ವದರ್ಜೆ ಆಟಗಾರರ ಕರೆತಂದು ಸಮತೋಲನ ಹಾಳು ಮಾಡಬೇಡಿ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ನಿನ್ನೆ ಪಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 50ರನ್ಗಳ ಗೆಲುವು ದಾಖಲು ಮಾಡಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.