ಕರ್ನಾಟಕ

karnataka

ETV Bharat / sports

Nasser Hussain: ಭಾರತ ಟೆಸ್ಟ್‌ ತಂಡಕ್ಕೆ ಇಂಥ ಆಟಗಾರರು ಬೇಕೆಂದ ನಾಸೆರ್​ ಹುಸೇನ್! ಯಾರು ಗೊತ್ತೇ?​

Nasser Hussain on Indian cricket team: ಐಸಿಸಿ ರಿವ್ಯೂನಲ್ಲಿ ಇಂಗ್ಲೆಂಡ್​ತಂಡದ ಮಾಜಿ ನಾಯಕ ನಾಸೆರ್ ಹುಸೇನ್ ಅವರು ಭಾರತ ಕ್ರಿಕೆಟ್‌ ತಂಡದ ಬಗ್ಗೆ ಮಾತನಾಡಿದರು.

By

Published : Aug 9, 2023, 5:33 PM IST

Updated : Aug 9, 2023, 5:46 PM IST

Nasser Hussain
Nasser Hussain

ನವದೆಹಲಿ:ವಿದೇಶಿ ಪಿಚ್​​​ನಲ್ಲಿ ಭಾರತ ತಂಡ ಟೆಸ್ಟ್​ ಪಂದ್ಯ ಗೆಲ್ಲಲು ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅವರಂತಹ ಆಲ್‌ರೌಂಡರ್​ಗಳು ಬೇಕು. ಆರು, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿ 10 ರಿಂದ 15 ಓವರ್ ಬೌಲಿಂಗ್​ ಮಾಡುವ ಆಟಗಾರನ ಅವಶ್ಯಕತೆ ತಂಡಕ್ಕಿದೆ. ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್​ ಪ್ರವೇಶಿಸಿತ್ತು. ಆದರೆ ವಿದೇಶಿ ಪಿಚ್‌ನಲ್ಲಿ ಭಾರತಕ್ಕೆ ಸಾಧನೆ ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್‌ ತಂಡದ ಮಾಜಿ ನಾಯಕ ನಾಸೆರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ 1-0 ರಿಂದ ಟೆಸ್ಟ್‌ ಸರಣಿ ಗೆದ್ದುಕೊಂಡಿತ್ತು. ಇದಕ್ಕೂ ಮುನ್ನ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ಸೋಲುಂಡಿತ್ತು. ಅದಕ್ಕೂ ಮುನ್ನ ಬಾಂಗ್ಲಾದೇಶದಲ್ಲಿ ನಡೆದ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿತ್ತು. ಹೀಗಾಗಿ ರೋಹಿತ್​ ಬಳಗ ವಿದೇಶದಲ್ಲಿ ಮಿಂಚಬೇಕಾದಲ್ಲಿ ಇಂಗ್ಲೆಂಡ್​, ಆಸ್ಟ್ರೇಲಿಯಾ ತಂಡದಲ್ಲಿರುವ ಆಲ್​ರೌಂಡರ್​ಗಳ ರೀತಿಯ ಪ್ರತಿಭೆಗಳು ಬೇಕು ಎಂದು ಐಸಿಸಿ ರಿವ್ಯೂನಲ್ಲಿ ಹುಸೇನ್ ಹೇಳಿದರು.

"ಭಾರತ ತವರು ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ದೇಶೀಯ ಮೈದಾನಕ್ಕೆ ಸಮತೋಲಿತ ತಂಡ ಬೇಕು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಅನುಭವಿ ವಿಶ್ವದರ್ಜೆಯ ಆಟಗಾರರು ತಂಡದಲ್ಲಿದ್ದಾರೆ. ಯುವ ಆಟಗಾರರು ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶುಭಮನ್ ಗಿಲ್ ಮುಂದಿನ ಸ್ಟಾರ್​ ಆಟಗಾರ" ಎಂದು ಅವರು ಭವಿಷ್ಯ ನುಡಿದರು.

"ಜಸ್ಪ್ರೀತ್ ಬುಮ್ರಾ ಚೇತರಿಸಿಕೊಂಡು ತಂಡ ಸೇರಿದರೆ, ಯುವ ವೇಗಿಗಳೊಂದಿಗೆ ಭಾರತದ ಬೌಲಿಂಗ್​ ವಿಭಾಗವೂ ಬಲಿಷ್ಠವಾಗಲಿದೆ. ಸ್ಪಿನ್​ ವಿಭಾಗದಲ್ಲಿ ಅಕ್ಷರ್​ ಪಟೇಲ್​, ರವಿಚಂದ್ರನ್​ ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಉತ್ತಮ ಆಲ್​ರೌಂಡರ್​ಗಳಾಗಿದ್ದಾರೆ. ಹೀಗಾಗಿ 7ನೇ ಸ್ಥಾನದವರೆಗೂ ಬ್ಯಾಟಿಂಗ್​ ಸಾಮರ್ಥ್ಯ ಇರಲಿದೆ" ಎಂದಿದ್ದಾರೆ.

ಆದರೆ, ವಿದೇಶಿ ಪಂದ್ಯಕ್ಕೆ ಭಾರತದ ಈ ಕಾಂಬಿನೇಷನ್​ ವರ್ಕ್​ ಆಗುತ್ತಿಲ್ಲ ಎಂಬುದು ನಾಸೆರ್ ವಾದ. "ಆ್ಯಶಸ್​ ಸರಣಿಯ ವೇಳೆ ರಿಕ್ಕಿ ಪಾಂಟಿಂಗ್​ ಜೊತೆಗಿದ್ದಾಗ ರಿಷಬ್​ ಪಂತ್​ ಅವರ ಚೇತರಿಕೆಯ ಬಗ್ಗೆ ಸಂದೇಶಗಳು ಸಿಗುತ್ತಿದ್ದವು. ಆತ ಚೇತರಿಸಿಕೊಂಡು ತಂಡ ಸೇರಿದರೆ ಭಾರತ ವಿದೇಶದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ಆಗಲಿದೆ. ಪಂತ್‌ರೊಂದಿಗೆ ಹಾರ್ದಿಕ್​ ಪಾಂಡ್ಯ ಸಹ ಟೆಸ್ಟ್​ಗೆ ಆಡಬೇಕಿದೆ. ಅವರ ಬೌಲಿಂಗ್​ ಸಾಮರ್ಥ್ಯವನ್ನು ಟೆಸ್ಟ್​ ಕ್ರಿಕೆಟ್​ಗೂ ವಿಸ್ತರಿಸುವ ಅಗತ್ಯವಿದೆ. ಹಾರ್ದಿಕ್ ತಮ್ಮ ಕೋಟಾದ ಸಂಪೂರ್ಣ ಬೌಲಿಂಗ್​ ಮಾಡುವಷ್ಟು ಚೇತರಿಸಿಕೊಂಡರೆ ಉತ್ತಮ" ಎಂದು ಹೇಳಿದರು.

"ಭಾರತ ತಂಡಕ್ಕೆ ಈ ಸಮಯದಲ್ಲಿ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​, ಆಸ್ಟ್ರೇಲಿಯಾದ ಕ್ಯಾಮೆರಾನ್​ ಗ್ರೀನ್​, ಮಿಚೆಲ್​ ಮಾರ್ಷ್​ ರೀತಿಯ ಆಟಗಾರರು ಬೇಕು. 6, 7ನೇ ವಿಕೆಟ್​ನಲ್ಲಿ ಬ್ಯಾಟಿಂಗ್​ ಮಾಡಿ 10 ರಿಂದ 15 ಓವರ್​ ಮಾಡುವ ಕ್ಷಮತೆ ಬೇಕು. ಉತ್ತಮ ಸೀಮ್​ ಬೌಲಿಂಗ್​ ಜೊತೆಗೆ ವಿದೇಶಿ ಪಿಚ್​​ನಲ್ಲಿ ಬ್ಯಾಟಿಂಗ್​ ಮಾಡುವ ಕೌಶಲ ಹೊಂದಿರುವ ಆಟಗಾರರ ಅಗತ್ಯವಿದೆ. ತಂಡ ಈ ರೀತಿ ಕಂಡುಬಂದಲ್ಲಿ ಮಾತ್ರ ಅಸಾಧಾರಣವಾಗಲಿದೆ" ಎಂದರು.

"ಈಗ ಭಾರತಕ್ಕೆ ಉತ್ತಮ ಯುವ ಪ್ರತಿಭೆಗಳು ಬರುತ್ತಿದ್ದಾರೆ. ನಾನು ದಿನೇಶ್​ ಕಾರ್ತಿಕ್​ ಮತ್ತು ರಿಕ್ಕಿ ಪಾಂಟಿಂಗ್​ ಜೊತೆಗೆ ಮಾತನಾಡಿದ್ದೇನೆ. ಅವರು ಯಶಸ್ವಿ ಜೈಸ್ವಾಲ್​ ಅವರಂತಹ ಯುವ ಪ್ರತಿಭೆಗಳು ತಂಡದಲ್ಲಿರುವುದನ್ನು ಹೇಳಿದ್ದಾರೆ. ಸಚಿನ್​ ನೋಡಿ ವಿರಾಟ್​, ಸುನಿಲ್ ಗವಾಸ್ಕರ್‌​ ನೋಡಿ ಸಚಿನ್​ ತಂಡದಲ್ಲಿ ಮಿಂಚಿದ್ದಾರೆ. ಈಗ ಮುಂದೆ ಬರುವ ಆಟಗಾರರು ವಿರಾಟ್​, ರೋಹಿತ್​ ಅವರನ್ನು ನೋಡಿ ಬೆಳೆಯಬಹುದು" ಎನ್ನುವುದು ಹುಸೇನ್ ಸಲಹೆ.

ಇದನ್ನೂ ಓದಿ:Hardik Pandya: ನೆಟ್ಟಿಗರಿಂದ ಹಾರ್ದಿಕ್​ಗೆ ಛೀಮಾರಿ.. ಧೋನಿ, ವಿರಾಟ್, ಸಂಜು ನಡೆ ನೆನೆದ ಜಾಲತಾಣದ ಮಂದಿ​

Last Updated : Aug 9, 2023, 5:46 PM IST

ABOUT THE AUTHOR

...view details