ಮುಂಬೈ: ಟೆಸ್ಟ್ ಕ್ರಿಕೆಟ್ನಲ್ಲಿ ಗಮನಾರ್ಹ ಸುಧಾರಣೆ ಕಾಣುತ್ತಿರುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ರನ್ನು ನ್ಯೂಜಿಲ್ಯಾಂಡ್ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಬದಲಿಗೆ ಆಡಿಸಲು ಬಯಸುತ್ತೇನೆ ಎಂದು ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರ ಹೊರತಾಗಿ ಹೆಚ್ಚೇನು ಗೊಂದಲಗಳಿಲ್ಲ, ಆದರೆ ವೇಗದ ಬೌಲರ್ಗಳ ಆಯ್ಕೆಯಲ್ಲಿ ಟೀಮ್ ಇಂಡಿಯಾ ಕೊಂಚ ತಲೆ ನೋವು ತಂದಿದೆ. ತಂಡದಲ್ಲಿ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅಂತಹ ಹಿರಿಯ ಬೌಲರ್ಗಳ ಜೊತೆಗೆ ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಅಂತಹ ಗಮನಾರ್ಗ ಪ್ರದರ್ಶನ ತೋರಿದ ಬೌಲರ್ಗಳು ತಂಡದಲ್ಲಿದ್ದಾರೆ. ಅದರಲ್ಲೂ ಸಿರಾಜ್ ಆಸ್ಟ್ರೇಲಿಯಾದಲ್ಲಿ ನೀಡಿರುವ ಪ್ರದರ್ಶನ ಅವರನ್ನು ತಂಡದಿಂದ ಕೈಬಿಡಲು ಅಸಾಧ್ಯವೆನಿಸಿದೆ.
ನಾನೇದಾರೂ ನಾಯಕನಾದರೆ ಮೂರು ಅತ್ಯುತ್ತಮ ವೇಗಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸಹಜ ಆಯ್ಕೆಯಾದರೆ ಮತ್ತೊಬ್ಬ ವೇಗಿಯಾಗಿ ಇಶಾಂತ್ ಶರ್ಮಾ ಬದಲಿಗೆ ಮೊಹಮ್ಮದ್ ಸಿರಾಜ್ರೊಂದಿಗೆ ಹೋಗಲು ನಾನು ಬಯಸುತ್ತೇನೆ. ಇಶಾಂತ್ ಶರ್ಮಾ ಕೂಡ ಅತ್ಯುತ್ತಮ ಬೌಲರ್, ಆದರೆ ಈ ಪಂದ್ಯಕ್ಕಾಗಿ ನನ್ನ ಆಯ್ಕೆ ಸಿರಾಜ್ , ಏಕೆಂದರೆ ಅವರು ಕಳೆದ 2 ವರ್ಷಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ ಎಂದು ಹೇಳಿದ್ದಾರೆ ಎಂದು ಭಜ್ಜಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಸಿರಾಜ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಬ್ರಿಸ್ಬೇನ್ನಲ್ಲಿ ಭಾರತ ಗೆಲ್ಲಬೇಕಾದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿರಾಜ್ರಲ್ಲಿ ಫಾರ್ಮ್ ಜೊತೆಗೆ ವೇಗ ಮತ್ತು ಆತ್ಮವಿಶ್ವಾಸವಿರುವುದರಿಂದ ಅವರು ಫೈನಲ್ ಪಂದ್ಯಕ್ಕೆ ಅತ್ಯುತ್ತಮ. ಅವರ ಕಳೆದ 6 ತಿಂಗಳ ಫಾರ್ಮ್ ಗಮನಿಸಿದರೆ, ಆತ ಅವಕಾಶಕ್ಕಾಗಿ ಹಸಿವಿನಿಂದ ಕಾಯುತ್ತಿರುವ ಬೌಲರ್ ಆಗಿದ್ದಾರೆ ಎಂದು ಆಫ್ ಸ್ಪಿನ್ನರ್ ಹೇಳಿದ್ದಾರೆ.
ಇದನ್ನು ಓದಿ: ’ಪಾಕಿಸ್ತಾನ ತಂಡಕ್ಕೆ ಧೋನಿಯಂತಹ ನಾಯಕ, ಫಿನಿಷರ್ನ ಅವಶ್ಯಕತೆಯಿದೆ’