ಕರ್ನಾಟಕ

karnataka

ETV Bharat / sports

ತಮಿಳುನಾಡುಗೆ ಮುಖಭಂಗ : ಚೊಚ್ಚಲ ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿದ ಹಿಮಾಚಲಪ್ರದೇಶ

ಭಾನುವಾರ ಜೈಪುರದ ಸವಾಯ್​ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ 315 ರನ್​ಗಳ ಗುರಿಯನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 299 ರನ್​ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತಗೊಂಡಿದ್ದರಿಂದ ವಿಜೆಡಿ ನಿಯಮದನ್ವಯ ಜಯ ಸಾಧಿಸಿ ಚೊಚ್ಚಲ ಡೊಮೆಸ್ಟಿಕ್ ಪ್ರಶಸ್ತಿ ಎತ್ತಿ ಹಿಡಿಯಿತು..

By

Published : Dec 26, 2021, 6:40 PM IST

Himachal Pradesh beat Tamil Nadu to Win Maiden domestic Title
ಹಿಮಾಚಲ ಪ್ರದೇಶಕ್ಕೆ ವಿಜಯ ಹಜಾರೆ ಟ್ರೋಫಿ

ಜೈಪುರ :ದೇಶಿಯ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾದ ತಮಿಳುನಾಡು ತಂಡಕ್ಕೆ ಆಘಾತಕಾರಿ ಸೋಲುಣಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿದಿದೆ.

ಭಾನುವಾರ ಜೈಪುರದ ಸವಾಯ್​ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ 315 ರನ್​ಗಳ ಗುರಿಯನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 299 ರನ್​ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತಗೊಂಡಿದ್ದರಿಂದ ವಿಜೆಡಿ ನಿಯಮದನ್ವಯ ಜಯ ಸಾಧಿಸಿ ಚೊಚ್ಚಲ ಡೊಮೆಸ್ಟಿಕ್ ಪ್ರಶಸ್ತಿ ಎತ್ತಿ ಹಿಡಿಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ ಆರಂಭಿಕ ಆಘಾತ ಅನುಭಿಸಿದರೂ ದಿನೇಶ್ ಕಾರ್ತಿಕ್​ ಅವರ ಶತಕ ಮತ್ತು ಬಾಬಾ ಇಂದ್ರಜಿತ್​ ಅವರ ಅರ್ಧಶತಕ ಹಾಗೂ ಶಾರುಖ್ ಖಾನ್​ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 314 ರನ್​ಗಳ ಸವಾಲಿನ ಮೊತ್ತ ಪೇರಿಸಿತ್ತು.

ಕಾರ್ತಿಕ್​ 103 ಎಸೆತಗಳಲ್ಲಿ 8 ಬೌಂಡರಿ 7 ಸಿಕ್ಸರ್​ ಸಹಿತ 116, ಇಂದ್ರಜಿತ್​ 71 ಎಸೆತಗಳಲ್ಲಿ 8 ಬೌಂಡರಿ ಮತ್ತು 1ಸಿಕ್ಸರ್ ನೆರವಿನಿಂದ 80, ಶಾರುಖ್ ಖಾನ್​ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ಗಳ ನೆರವಿನಿಂದ 42 ರನ್​ಗಳಿಸಿದ್ದರು.

ಹಿಮಾಚಲ ಪ್ರದೇಶದ ಪರ ನಾಯಕ ರಿಷಿ ಧವನ್​ 62ಕ್ಕೆ 3, ಪಂಕಜ್​ ಜೈಸ್ವಾಲ್ 59ಕ್ಕೆ 4 ವಿಕೆಟ್​ ಪಡೆದು ಮಿಂಚಿದ್ದರು. 315 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್​ಗಳಲ್ಲಿ 299 ರನ್​ಗಳಿಸಿ ವಿಜೆಡಿ ನಿಯಮಧನ್ವಯ 11 ರನ್​ಗಳ ಜಯ ಸಾಧಿಸಿತು.

ಆರಂಭಿಕ ಬ್ಯಾಟರ್​ ಶುಭ್ಮನ್ ಅರೋರಾ 131 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 136 ರನ್​, ಅಮಿತ್​ ಕುಮಾರ್​ 79 ಎಸೆತಗಳಲ್ಲಿ 6 ಬೌಂಡರಿ ಸಹಿತ 74 ಹಾಗೂ ಕೊನೆಯಲ್ಲಿ ನಾಯಕ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್​ಗಳ ಸಹಿತ 42 ರನ್​ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಅಂತರಿಕ್ಷಯಾನ ಮಾಡಿದ ಯುವರಾಜ್ ಸಿಂಗ್ ಮೊದಲ ಶತಕದ ಬ್ಯಾಟ್​!

ABOUT THE AUTHOR

...view details