ಕರ್ನಾಟಕ

karnataka

By

Published : Aug 1, 2021, 2:31 AM IST

ETV Bharat / sports

ಕಾಶ್ಮೀರ ಲೀಗ್​ನಲ್ಲಿ ಆಡದಿರುವಂತೆ ಬಿಸಿಸಿಐನಿಂದ ನನಗೆ ಬೆದರಿಕೆಯಿದೆ ಎಂದ ಗಿಬ್ಸ್: 'ಶಹಬ್ಬಾಸ್ BCCI' ಎಂದು ನೆಟ್ಟಿಗರು

ಲೀಗ್​ನಲ್ಲಿ ಆಡುವುದಕ್ಕೆ ಕೆಲವು ವಿದೇಶಿಗರಿಗೂ ಕೆಪಿಎಲ್ ಆಡಳಿತ ಮಂಡಳಿ ಕರೆ ನೀಡಿದೆ. ಆದರೆ ಅದಕ್ಕೆ ಬಿಸಿಸಿಐ ಅಡ್ಡಗಲಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಕೆಪಿಎಲ್​ನಲ್ಲಿ ಆಡದಂತೆ ನನಗೆ ಬಿಸಿಸಿಐ ಬೆದರಿಸುತ್ತಿದೆ ಎಂದು ಶನಿವಾ ಟ್ವೀಟ್​ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಬಿಸಿಸಿಐ vs ಹರ್ಷೆಲ್ಸ್ ಗಿಬ್ಸ್​
ಬಿಸಿಸಿಐ vs ಹರ್ಷೆಲ್ಸ್ ಗಿಬ್ಸ್​

ನವದೆಹಲಿ:ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್​ ಗಿಬ್ಸ್​ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ತಮ್ಮನ್ನು ಕಾಶ್ಮೀರ ಪ್ರೀಮಿಯರ್​ ಲೀಗ್​ನಲ್ಲಿ ಆಡದಂತೆ ಬೆದರಿಸುತ್ತಿದೆ ಎಂದು ಹೇಳಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆಗೀಡು ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ರಾಜಕೀಯ ವೈಶಮ್ಯ ಬಹಳ ವರ್ಷಗಳಿಂದ ಮುಂದುವರಿಯುತ್ತ ಬಂದಿದೆ. ಆದ್ದರಿಂದ ಎರಡು ದೇಶಗಳ ನಡುವೆ ಯಾವುದೇ ರೀತಿಯ ಕ್ರೀಡ ಚಟುವಟಿಕೆ ಕೂಡ ನಡೆಯುತ್ತಿಲ್ಲ. ಈಗಿರುವಾಗ ವಿವಾದಿತ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕೆಪಿಎಲ್(ಕಾಶ್ಮೀರ ಪ್ರೀಮಿಯರ್​ ಲೀಗ್) ನಡೆಸಲು ಸ್ಥಳೀಯ ರಾಜಕಾರಣಿ ಶಹರ್ಯಾರ್​ ಅಫ್ರಿದಿ ನಿರ್ಧರಿಸಿದ್ದಾರೆ. ಇದರಲ್ಲಿ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್​ಗಳಾದ ಇಮಾದ್​ ವಸೀಮ್, ಮೊಹಮ್ಮದ್ ಹಫೀಜ್, ಶಾಹಿದ್​ ಅಫ್ರಿದಿ, ಶೋಯಬ್ ಮಲಿಕ್​ ಮತ್ತು ಕಮ್ರಾನ್ ಅಕ್ಮಲ್​ ನೇತೃತ್ವದಲ್ಲಿ 6 ತಂಡಗಳನ್ನು ತಯಾರು ಮಾಡಲಾಗಿದೆ.

ಈ ಲೀಗ್​ನಲ್ಲಿ ಆಡುವುದಕ್ಕೆ ಕೆಲವು ವಿದೇಶಿಗರಿಗೂ ಕೆಪಿಎಲ್ ಆಡಳಿತ ಮಂಡಳಿ ಕರೆ ನೀಡಿದೆ. ಆದರೆ ಅದಕ್ಕೆ ಬಿಸಿಸಿಐ ಅಡ್ಡಗಲಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷೆಲ್ ಗಿಬ್ಸ್ ಕೆಪಿಎಲ್​ನಲ್ಲಿ ಆಡದಂತೆ ನನಗೆ ಬಿಸಿಸಿಐ ಬೆದರಿಸುತ್ತಿದೆ ಎಂದು ಶನಿವಾ ಟ್ವೀಟ್​ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಪಾಕಿಸ್ತಾನದೊಂದಿಗಿರುವ ರಾಜಕೀಯ ವೈಷಮ್ಯದ ಕಾರಣ ಬಿಸಿಸಿಐ ನನ್ನನ್ನು ಕಾಶ್ಮೀರ ಪ್ರೀಮಿಯರ್ ಲೀಗ್​ನಲ್ಲಿ ಆಡವುದನ್ನು ತಡೆಯಲು ಪ್ರಯತ್ನಿಸುತ್ತಿರುವು ಸಂಪೂರ್ಣ ಅನಗತ್ಯವಾಗಿದೆ. ಒಂದು ವೇಳೆ ಅಲ್ಲಿ ಆಡಿದರೆ ಭಾರತಕ್ಕೆ ಕ್ರಿಕೆಟ್ ಸಂಬಂಧಿತ ಕೆಲಸಕ್ಕೆ ಪ್ರವೇಶಿಸುವ ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದು ನನಗೆ ಬೆದರಿಕೆಯಾಕುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಗಿಬ್ಸ್​ ಶನಿವಾರ ಟ್ವೀಟ್​ ಮಾಡಿದ್ದರು.

ಗಿಬ್ಸ್​ ಟ್ವೀಟ್ ವೈರಲ್ ಆಗುತ್ತಿದ್ದಂತೆ ಕೆಲವು ಶಾಹೀದ್ ಅಫ್ರಿದಿ ಸೇರಿದಂತೆ ಕೆಲವು ಪಾಕಿಸ್ತಾನ ಕ್ರಿಕೆಟಿಗರು ಬಿಸಿಸಿಐ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಬಿಸಿಸಿಐ ಈ ನಿರ್ಧಾರವನ್ನು ಭಾರತೀಯ ಅಭಿಮಾನಿಗಳು ಶ್ವಾಗತಿಸಿದ್ದು, ಭಾರತದಲ್ಲಿ ಕ್ರಿಕೆಟ್​ ಸಂಬಂಧಿತ ಕಾರ್ಯದಲ್ಲಿ ಭಾಗವಹಿಸುವ ಆಸೆಯಿದ್ದವರು ಕೆಪಿಎಲ್​ ತ್ಯಜಿಸಲಿ, ಒಂದು ವೇಳೆ ಅಲ್ಲಿ ಭಾಗವಹಿಸಿದರೆ ಅವರ ಪಾಲಿಗೆ ಭಾರತದ ಬಾಗಿಲನ್ನು ಸಾರ್ವಕಾಲಿಕವಾಗಿ ಮುಚ್ಚಲಿ ಎಂದು ಬಿಸಿಸಿಐ ತೀರ್ಮಾನಕ್ಕೆ ಕೈ ಜೋಡಿಸಿದ್ದಾರೆ.

ಇದನ್ನು ಓದಿ:'ಮೀರಾಬಾಯಿ ಚನು' ಜೀವನಾಧಾರಿತ ಚಿತ್ರ ತೆರೆಗೆ... ನಟಿಗಾಗಿ ಹುಡುಕಾಟ, ಆರು ತಿಂಗಳಲ್ಲಿ ಚಿತ್ರೀಕರಣ

ABOUT THE AUTHOR

...view details