ಕರ್ನಾಟಕ

karnataka

ಭಾರತ ಸೆಮಿಫೈನಲ್‌ ಪ್ರವೇಶಿಸಲು ನ್ಯೂಜಿಲೆಂಡ್ ವಿರುದ್ಧದ ಪಂದ್ಯ ನಿರ್ಣಾಯಕ; ಮಾಜಿ ಬಿಸಿಸಿಐ ಆಯ್ಕೆಗಾರ ಸುರೇಂದ್ರ ಭಾವೆ

By ETV Bharat Karnataka Team

Published : Oct 22, 2023, 10:17 AM IST

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್‌ನಲ್ಲಿ ಸ್ಥಾನ ಕಾಯ್ದಿರಿಸಲು ಭಾರತಕ್ಕೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ನಿರ್ಣಾಯಕವಾಗಿದೆ ಎಂದು ಮಾಜಿ ಬಿಸಿಸಿಐ ಆಯ್ಕೆಗಾರ ಸುರೇಂದ್ರ ಭಾವೆ ಅವರು ಈಟಿವಿ ಭಾರತ್‌ನ ಸಜ್ಜದ್ ಸೈಯದ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

New Zealand Vs India
New Zealand Vs India

ಪುಣೆ: ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂದ ಮೊದಲ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇಂದು ಧರ್ಮಶಾಲಾದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಪಂದ್ಯಕ್ಕೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ಟೂರ್ನಿಯಲ್ಲಿ ಜಯದ ನಾಗಾಲೋಟ ಮುಂದುವರಿಸಲು ಭಾರತ ಇಂದು ಕಿವೀಸ್ ತಂಡವನ್ನು ಮಣಿಸಬೇಕಿದೆ. ಇಂದಿನ ಪಂದ್ಯ ಎರಡೂ ತಂಡಗಳಿಗೂ ಪ್ರತಿಷ್ಠೆಯಾಗಿದೆ. ಸೆಮಿಫೈನಲ್​ ಸ್ಥಾನ ಕಾಯ್ದಿರಿಸಿಕೊಳ್ಳಲು ಈ ಮ್ಯಾಚ್​ ಮುಖ್ಯವಾಗಿದೆ ಎಂದು ಮಾಜಿ BCCI ಆಯ್ಕೆಗಾರ ಸುರೇಂದ್ರ ಭಾವೆ ತಿಳಿಸಿದ್ದಾರೆ.

"ಭಾರತಕ್ಕೆ ಮುಂದಿನ ಮೂರು ಪಂದ್ಯಗಳು ಮಹತ್ವದ್ದಾಗಿವೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಿ ಗೆಲ್ಲುವುದು ಬಹಳ ಮುಖ್ಯ. ಈ ಮೂರು ತಂಡಗಳು ಬಲಿಷ್ಠವಾಗಿವೆ. ಇಂದಿನ ಪಂದ್ಯ ಸೆಮಿ ಫೈನಲ್ ಎಂಟ್ರಿಯನ್ನು ನಿರ್ಣಾಯಕಗೊಳಿಸಲಿದೆ. ಸದ್ಯ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಉತ್ತಮವಾಗಿ ಆಡುತ್ತಿದ್ದು, ಈ ಎರಡೂ ತಂಡಗಳು ಫೈನಲ್‌ವರೆಗೆ ಹೋಗಲಿವೆ" ಎಂದು ಭಾವೆ ETV ಭಾರತ್‌ನೊಂದಿಗಿನ ವಿಶೇಷ ಚಾಟ್‌ನಲ್ಲಿ ತಿಳಿಸಿದ್ದಾರೆ.

ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ ಸೃಜನಶೀಲತೆ ತೋರಿದ್ದು, ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಅಜೇಯ ಅಭಿಯಾನ ಮುಂದುವರಿಸಿದೆ. ಸದ್ಯ ಭಾರತ ತಂಡದ ಬೌಲಿಂಗ್ ಉತ್ತಮವಾಗಿದೆ. ಬ್ಯಾಟಿಂಗ್ ಕೂಡ ಚೆನ್ನಾಗಿದೆ. ಇನ್ನು ಫೀಲ್ಡಿಂಗ್ ವಿಭಾಗದಲ್ಲಿ ಕೂಡ ಕ್ಷೇತ್ರ ರಕ್ಷಣೆ ಅದ್ಭುತವಾಗಿದ್ದು, ರನ್ ಹರಿಯುವಿಕೆಯನ್ನು ತಡೆಯುತ್ತಿದ್ದಾರೆ ಎಂದು ಟೀಂ ಇಂಡಿಯಾವನ್ನು ಶ್ಲಾಘಿಸಿದರು.

ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ಮೇಲೆ ಎದುರಾಳಿ ತಂಡಗಳ ಕಣ್ಣಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮರಳುತ್ತಾರೆ ಎಂಬ ಮಾಹಿತಿ ಇದೆ. ತಂಡವು ಸಮತೋಲನ ಕಾಯ್ದುಕೊಳ್ಳಲು ಅಶ್ವಿನ್ ಮತ್ತು ಸೂರ್ಯಕುಮಾರ್ ಸೇರಿಸಿಕೊಳ್ಳುವುದು ಉತ್ತಮ. ಅಲ್ಲದೆ ಇಶಾನ್ ಕಿಶನ್ ಕೂಡ ಒಂದು ಪಂದ್ಯದಲ್ಲಿ 47 ರನ್ ಗಳಿಸಿದ್ದಾರೆ. ಹಾಗಾಗಿ ಇಂದಿ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಬಹುದು. ಬೌಲಿಂಗ್​ಗೆ ಪೂರಕವಾಗುವ ಪಿಚ್ ಇದ್ದರೆ ಅಶ್ವಿನ್ ತಂಡ ಸೇರಬಹುದು. ಇಲ್ಲದಿದ್ದರೆ ಸೂರ್ಯಕುಮಾರ್ ಅಥವಾ ಇಶಾನ್ ಅವರಲ್ಲಿ ಒಬ್ಬರು ತಂಡದಲ್ಲಿ ಇರುತ್ತಾರೆ. ಅಲ್ಲದೆ ಧರ್ಮಶಾಲಾದಲ್ಲಿ ಉತ್ತಮ ಬೌನ್ಸ್​ಗೆ ಅವಕಾಶವಿದ್ದು, ಮೊಹಮ್ಮದ್ ಶಮಿಗೂ ತಂಡದಲ್ಲಿ ಸ್ಥಾನ ನೀಡಬಹುದು ಎಂದು ಭಾವೆ ತಿಳಿಸಿದ್ದಾರೆ.

ಧರ್ಮಶಾಲಾದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಭಾರತ, ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಕಳೆದ ವಿಶ್ವಕಪ್​ ಸೆಮಿಪೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿಗೆ ಇಂದು ಭಾರತ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.

ಇದನ್ನೂ ಓದಿ: ಧರ್ಮಶಾಲಾ ಕ್ರೀಡಾಂಗಣ: ವಿಶ್ವದ ಅತಿ ಎತ್ತರದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದ್ದೇ ಒಂದು ಅದ್ಭುತ

ABOUT THE AUTHOR

...view details