ಕರ್ನಾಟಕ

karnataka

By

Published : Aug 9, 2021, 6:59 PM IST

Updated : Aug 9, 2021, 7:34 PM IST

ETV Bharat / sports

ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಶ್ರೀಧರನ್ ಶರತ್ ನೇಮಕ

ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಶ್ರೀಧರನ್ ಶರತ್ ನೇಮಕವಾಗಿದ್ದಾರೆ. ಶರತ್​ ತಮಿಳುನಾಡು ಪರ 100 ರಣಜಿ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಸ್ಸೋಂ ತಂಡದ ಪರವೂ ಕೆಲವು ಸಮಯ ಆಡಿರುವ ಅವರು ಒಟ್ಟಾರೆ ದೇಶಿ ಕ್ರಿಕೆಟ್​ನ 15 ವರ್ಷಗಳ ವೃತ್ತಿ ಜೀವನದಲ್ಲಿ 139 ಪ್ರಥಮ ದರ್ಜೆ ಪಂದ್ಯಗಳಿಂದ 27 ಶತಕಗಳ ಸಹಿತ 51+ ಸರಾಸರಿಯಲ್ಲಿ 8700 ರನ್ ​ಗಳಿಸಿದ್ದಾರೆ.

Sridharan Sharath
ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷನಾಗಿ ಮಾಜಿ ಕ್ರಿಕೆಟಿಗ ಶ್ರೀದರನ್ ಶರತ್ ನೇಮಕ

ನವದೆಹಲಿ: ತಮಿಳುನಾಡಿನ ಮಾಜಿ ನಾಯಕ ಹಾಗೂ ದೇಶಿ ಕ್ರಿಕೆಟ್​ ದೈತ್ಯ ಶ್ರೀಧರನ್ ಶರತ್​ ಬಿಸಿಸಿಐ ಕಿರಿಯರ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಮುಂಬರುವ ಅಂಡರ್​ 19 ವಿಶ್ವಕಪ್​ಗೆ ಬಲಿಷ್ಠ ಯುವ ಕ್ರಿಕೆಟಿಗರ ತಂಡವನ್ನು ಕಟ್ಟುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಶರತ್​ ತಮಿಳುನಾಡು ಪರ 100 ರಣಜಿ ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಸ್ಸೋಂ ತಂಡದ ಪರವೂ ಕೆಲವು ಸಮಯ ಆಡಿರುವ ಅವರು ಒಟ್ಟಾರೆ ದೇಶಿ ಕ್ರಿಕೆಟ್​ನ 15 ವರ್ಷಗಳ ವೃತ್ತಿ ಜೀವನದಲ್ಲಿ 139 ಪ್ರಥಮ ದರ್ಜೆ ಪಂದ್ಯಗಳಿಂದ 27 ಶತಕಗಳ ಸಹಿತ 51+ ಸರಾಸರಿಯಲ್ಲಿ 8700 ರನ್​ ಗಳಿಸಿದ್ದಾರೆ.

ರಾಹುಲ್​ ದ್ರಾವಿಡ್​, ವಿವಿಎಸ್​ ಲಕ್ಷ್ಮಣ್​ ಮತ್ತು ಸೌರವ್ ಗಂಗೂಲಿ ಅವರ ಬಲವಾದ ಸ್ಪರ್ಧೆಯಿಂದ ಭಾರತದ ಪರ ಟೆಸ್ಟ್​ ತಂಡದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಜೂನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಶರತ್​ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇತರೆ ಸ್ಪರ್ಧಿಗಳಾದ ಕೃಷ್ಣನ್​ ಮೋಹನ್(ನಾರ್ಥ್​​ ಜೋನ್​)​, ಹರ್ವಿಂದರ್​ ಸಿಂಗ್​ ಸೋಧಿ(ಸೆಂಟ್ರಲ್​ ಜೋನ್​), ಹಿತೇಶ್​ ಮಜುಂದಾರ್(ವೆಸ್ಟ್​ ಜೋನ್​) ​ ಹಾಗೂ ರಣದೇಬ್​ ಬೋಸ್(ಈಸ್ಟ್​ ಜೋನ್​)​ ಅವರಿಗಿಂತ ಶರತ್​ ಹೆಸರು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯುಳಿದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಬ್ರಿಟಿಷ್​​ ರಾಯಭಾರಿಗೆ ಕನ್ನಡ ಕಲಿಸಿಕೊಟ್ಟ ದ್ರಾವಿಡ್​: ಇವರಿಗಿಂತ ಉತ್ತಮ ಶಿಕ್ಷಕ ಇಲ್ಲ ಎಂದ ಅಲೆಕ್ಸ್ ಎಲ್ಲಿಸ್

Last Updated : Aug 9, 2021, 7:34 PM IST

ABOUT THE AUTHOR

...view details