ಕರ್ನಾಟಕ

karnataka

By

Published : Jun 7, 2023, 9:37 AM IST

ETV Bharat / sports

ವಾರಾಣಸಿ ಗಂಗಾರತಿಯಲ್ಲಿ ಮಾಜಿ ಕ್ರಿಕೆಟ್​​ ಆಟಗಾರ ವೆಂಕಟೇಶ್ ಪ್ರಸಾದ್ ಭಾಗಿ!

ಮಂಗಳವಾರ ವಾರಾಣಸಿಯ ಗಂಗಾರತಿಯಲ್ಲಿ ಮಾಜಿ ಕ್ರಿಕೆಟ್​​ ಆಟಗಾರ ವೆಂಕಟೇಶ್ ಪ್ರಸಾದ್ ಭಾಗಿ ಆಗಿದ್ದರು.

Former cricketer Venkatesh Prasad in Varanasi Ganga Aarti
ಗಂಗಾರತಿಯಲ್ಲಿ ಮಾಜಿ ಕ್ರಿಕೆಟ್​​ ಆಟಗಾರ ವೆಂಕಟೇಶ್ ಪ್ರಸಾದ್ ಭಾಗಿ

ವಾರಾಣಸಿ ( ಉತ್ತರ ಪ್ರದೇಶ ) :ಮಂಗಳವಾರದಂದು ಭಾರತ ಕ್ರಿಕೆಟ್​​ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ( Venkatesh Prasad ) ಅವರು ವಾರಾಣಸಿಗೆ ಭೇಟಿ ಕೊಟ್ಟಿದ್ದರು. ದಶಾಶ್ವಮೇಧ ಘಾಟ್‌ನಲ್ಲಿ ವಿಶ್ವ ವಿಖ್ಯಾತ ಗಂಗಾ ಮಾತೆಯ ದೈನಂದಿನ ಆರತಿಯಲ್ಲಿ ತಮ್ಮ ಪತ್ನಿಯೊಂದಿಗೆ ಭಾಗಿ ಆದರು. ವೈದಿಕ ವಿಧಿ ವಿಧಾನಗಳ ಪ್ರಕಾರ, ಗಂಗಾಮಾತೆಯನ್ನು ಪೂಜಿಸಿದ ಅವರು ಇಲ್ಲಿ ಗಂಗಾ ಆರತಿಯನ್ನು ಕಂಡು ಬಹಳ ಹರ್ಷ ವ್ಯಕ್ತಪಡಿಸಿದರು.

ಗಂಗಾರತಿಯಲ್ಲಿ ಮಾಜಿ ಕ್ರಿಕೆಟ್​​ ಆಟಗಾರ ವೆಂಕಟೇಶ್ ಪ್ರಸಾದ್ ಭಾಗಿ

ಭಾರತ ಕ್ರಿಕೆಟ್​​ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ತಮ್ಮ ವೇಗದ ಮತ್ತು ತೀಕ್ಷ್ಣವಾದ ಬೌಲಿಂಗ್‌ಗೆ ಹೆಸರುವಾಸಿ ಆಗಿದ್ದಾರೆ. ಮಂಗಳವಾರ ವಾರಾಣಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾಜಿ ಆಟಗಾರನನ್ನು ನೋಡಲು ಅಭಿಮಾನಿಗಳು ಸಹ ಬಂದು ಸೇರಿದ್ದರು. ಆರತಿ ಸಮಯದಲ್ಲಿ, ಅವರು ತಮ್ಮ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಮತ್ತು ಕೆಲವೊಮ್ಮೆ ವಿಡಿಯೋಗಳನ್ನು ಮಾಡುತ್ತಿದ್ದರು.

ವಾರಾಣಸಿಯಲ್ಲಿ, ವೆಂಕಟೇಶ್ ಪ್ರಸಾದ್ ಅವರನ್ನು ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ, ಖಜಾಂಚಿ ಆಶಿಶ್ ತಿವಾರಿ, ಕಾರ್ಯದರ್ಶಿ ಹನುಮಾನ್ ಯಾದವ್​​ ಸ್ವಾಗತಿಸಿದರು. ಪೂಜೆ ಬಳಿಕ ಮಾಜಿ ಆಟಗಾರನಿಗೆ ಪ್ರಸಾದ ವಿತರಿಸಿದರು. ವಾರಾಣಸಿಯಲ್ಲಿ ನಡೆದ ಗಂಗಾ ಆರತಿಯಲ್ಲಿ ಭಾರತ ತಂಡದ ಮಾಜಿ ಆಟಗಾರರು ಇದ್ದಾರೆ ಎಂಬುದನ್ನು ತಿಳಿದ ಭಕ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರಲ್ಲಿ ಪೈಪೋಟಿ ಏರ್ಪಟ್ಟಿತ್ತು.

ವೆಂಕಟೇಶ್ ಪ್ರಸಾದ್ ಭಾರತ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ. ಪ್ರಸಾದ್ ತಮ್ಮ ಕಾಲದಲ್ಲಿ ಭಾರತ ತಂಡಕ್ಕಾಗಿ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದರು. ಅವರು ವೇಗದ ಮತ್ತು ತೀಕ್ಷ್ಣವಾದ ಬೌಲಿಂಗ್​ನಿಂದ ಭಾರತೀಯ ಅಭಿಮಾನಿಗಳ ಅಭಿಮಾನ ಸಂಪಾದಿಸಿದ್ದಾರೆ. ಅವರು 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. 161 ODIಗಳಲ್ಲಿ 196 ವಿಕೆಟ್​​​ಗಳನ್ನು ಪಡೆದರು. 1996ರಲ್ಲಿ ಇಂಗ್ಲೆಂಡ್ ವಿರುದ್ಧ, ವೆಂಕಟೇಶ್ ಬರ್ಮಿಂಗ್ಹ್ಯಾಮ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದರು.

ಇದನ್ನೂ ಓದಿ:ಇಂದು ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಫ್​​ 2023ರ ಫೈನಲ್​ ಪಂದ್ಯ.. ಸಚಿನ್​ ತೆಂಡೂಲ್ಕರ್​ ಹೇಳಿದ್ದೇನು?

ಪ್ರೇಮವಿವಾಹದ ವಿಚಾರವಾಗಿಯೂ ಸುದ್ದಿಯಲ್ಲಿದ್ದರು. ವೆಂಕಟೇಶ್ ಪ್ರಸಾದ್ ಅವರ ಪತ್ನಿ ಅವರಿಗಿಂತ ಸುಮಾರು 9 ವರ್ಷ ದೊಡ್ಡವರು. ವೆಂಕಟೇಶ್ 1969 ರಲ್ಲಿ ಜನಿಸಿದರೆ, ಜಯಂತಿ 1960 ರಲ್ಲಿ ಜನಿಸಿದರು. ಆರಂಭದಲ್ಲಿ ವೆಂಕಟೇಶ್ ಅವರ ಕುಟುಂಬಸ್ಥರು ಈ ಮದುವೆಗೆ ಸಿದ್ಧರಿರಲಿಲ್ಲ, ಆದರೆ ನಂತರ ಅವರು ಒಪ್ಪಿದರು. ಈ ಜೋಡಿ ಏಪ್ರಿಲ್ 22, 1996 ರಂದು ವಿವಾಹವಾದರು.

ಇದನ್ನೂ ಓದಿ:ಈ ವರ್ಷ ಏಷ್ಯಾಕಪ್​ ನಡೆಯುವುದೇ ಅನುಮಾನ.. ಅದರ ಬದಲಿ ಯೋಜನೆಗೆ ತಯಾರಾಗಿದೆ ಬಿಸಿಸಿಐ

ವಾರಾಣಸಿಯ ಗಂಗಾರತಿ ವಿಶ್ವ ವಿಖ್ಯಾತವಾಗಿದೆ. ಸಾಮಾನ್ಯ ಜನರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು, ಕ್ರಿಕೆಟ್​ ದಿಗ್ಗಜರು ಸೇರಿದಂತೆ ಗಣ್ಯರು ಸಹ ಇಲ್ಲಿಗೆ ಆಗಮಿಸಿ ಗಂಗಾರತಿಯಲ್ಲಿ ಭಾಗಿ ಆಗುತ್ತಾರೆ.

ABOUT THE AUTHOR

...view details