ಕರ್ನಾಟಕ

karnataka

By

Published : Jan 13, 2023, 8:29 PM IST

ETV Bharat / sports

ಅನಾರೋಗ್ಯದ ಕಾರಣ ಬೆಂಗಳೂರಿಗೆ ಮರಳಿದ ದ್ರಾವಿಡ್​: ಮೂರನೇ ಏಕ ದಿನಕ್ಕೆ ಕೋಚ್​ ಯಾರು?

ಎರಡನೇ ಏಕದಿನ ಪಂದ್ಯದ ನಂತರ ರಾಹುಲ್​ ದ್ರಾವಿಡ್​ ಬೆಂಗಳೂರಿಗೆ ಆಗಮನ - ಅನಾರೋಗ್ಯದ ಕಾರಣ ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ದ್ರಾವಿಡ್​ ಅಲಭ್ಯ - ಮುಖ್ಯ ಕೋಚ್​ ಇಲ್ಲದೇ ಔಪಚಾರಿಕ ಪಂದ್ಯ ಆಡುತ್ತಾ ಭಾರತ.

Dravid
ರಾಹುಲ್​ ದ್ರಾವಿಡ್

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್​ ಟೀಮ್​ನ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅನಾರೋಗ್ಯದ ಕಾರಣ ಬೆಂಗಳೂರಿಗೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ದ್ರಾವಿಡ್​ ಅಲಭ್ಯರಾಗಲಿದ್ದಾರೆ. ಕೊಚ್​ ಇಲ್ಲದೇ ಮೂರನೇ ಪಂದ್ಯವನ್ನು ಭಾರತ ಆಡಬೇಕಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿರುವ ವಿವಿಎಸ್ ಲಕ್ಷ್ಮಣ್ ಮೂರನೇ ಪಂದ್ಯಕ್ಕೆ ಕೋಚ್​ ಆಗುವ ಸಾಧ್ಯತೆ ಇದೆ. ಇಂಡಿಯನ್​​ ಕ್ರಿಕೆಟ್​ನ ವಾಲ್​ ಎಂದೇ ಕರೆಸಿಕೊಳ್ಳುತ್ತದ್ದ ದ್ರಾವಿಡ್​ ಅವರ ಆರೋಗ್ಯ ಸಮಸ್ಯೆ ಏನು ಎಂಬುದು ತಿಳಿದು ಬಂದಿಲ್ಲ.

ಭಾರತದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ತಮ್ಮ 50ನೇ ಜನ್ಮ ದಿನಾಚರಣೆಯನ್ನು ಇದೇ ಬುಧವಾರ ಆಚರಿಸಿಕೊಂಡಿದ್ದರು. ಭಾರತ ವಿಕೆಟ್​ ಕಳೆದು ಕೊಂಡು ಸಂಕಷ್ಟದಲ್ಲಿದ್ದಾಗ ಅತೀ ಹೆಚ್ಚು ಪಂದ್ಯಗಳನ್ನು ಅವರೇ ನಿಂತು ಗೆಲ್ಲಿಸಿಕೊಟ್ಟಿದ್ದರಿಂದ ವಾಲ್​ ಎಂದೇ ಅವರನ್ನು ಸಂಬೋಧಿಸಲಾಗುತ್ತಿತ್ತು. ಎರಡು ಬಾರಿ ಮುನ್ನೂರು ರನ್​ಗೂ ಹೆಚ್ಚಿನ ಜೊತೆಯಾಟ ಆಡಿದ ಏಕೈಕ ಆಟಗಾರ ಎಂಬ ಖ್ಯಾತಿ ಇವರ ಹೆಸರಿನಲ್ಲಿದೆ. ಸಚಿನ್​ ತೆಡೂಲ್ಕರ್​ ಜೊತೆಗೆ 331 ರನ್​ ಮತ್ತು ಗಂಗೂಲಿ ಜೊತೆಗೆ 318 ರನ್​ಗಳ ಜೊತೆಯಾಟ ಆಡಿದ್ದರು. ಇದು ಅತೀ ಹೆಚ್ಚು ಜೊತೆಯಾಟದ ಟಾಪ್​ ನಾಲ್ಕರ ಪಟ್ಟಿಯಲ್ಲಿದೆ.

ರಾಹುಲ್​ ದ್ರಾವಿಡ್​ ಭಾರತ ತಂಡದಲ್ಲಿ 164 ಟೆಸ್ಟ್, 344 ಏಕದಿನ ಮತ್ತು ಒಂದು ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದ್ರಾವಿಡ್​ 2012 ಮಾರ್ಚ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. ಅವರು 48 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು. ನವೆಂಬರ್ 2021 ರಲ್ಲಿ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕರಾದರು.

ತವರು ನೆಲದಲ್ಲಿ ಲಂಕಾ ವಿರುದ್ಧ 10ನೇ ಸರಣಿ ಗೆದ್ದ ಭಾರತ:ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್​ದೀಪ್​ ಯಾದವ್​ ಕೈಚಳಕ ಮತ್ತು ಕೆಎಲ್ ರಾಹುಲ್ ಅರ್ಧ ಶತಕದ ನೆರವಿನಿಂದ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಮುನ್ನಡೆಯೊಂದಿಗೆ ತನ್ನ ತೆಕ್ಕೆಗೆ ತೆಗೆದು ಕೊಂಡಿತು. ಈ ಮೂಲಕ ತವರು ನೆಲದಲ್ಲಿ ಲಂಕಾ ವಿರುದ್ಧ ಹತ್ತನೇ ಸರಣಿ ವಶಪಡಿಸಿಕೊಂಡಿತು.

ಕುಲ್​ ದೀಪ್​ ಯಾದವ್​ಗೆ 200 ನೇ ವಿಕೆಟ್:ಲೆಗ್​ ಸ್ಪಿನ್ನರ್​ಕುಲ್​ದೀಪ್​ ಯಾದವ್​ ನಿನ್ನೆ ನಡೆದ ಪಂದ್ಯದಲ್ಲಿ ಮೂರು ವಿಕೆಟ್​ ಕಬಳಿಸಿದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ 200 ವಿಕೆಟ್​ ಗಳಿಸಿದ ಮೈಲಿಗಲ್ಲನ್ನು ತಲುಪಿದ್ದಾರೆ. ಕೆಎಲ್​ ರಾಹುಲ್​ ನಿನ್ನೆ ತಮ್ಮ 50ನೇ ಏಕದಿನ ಪಂದ್ಯ ಆಡಿದ್ದು, ಅರ್ಧ ಶತಕ ದಾಖಲಿಸಿದ್ದಾರೆ.

ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾದರು. ಇಬ್ಬರೂ ಟಫ್​ ಪಿಚ್​ನಲ್ಲಿ ತಾಳ್ಮೆಯಿಂದ ಬ್ಯಾಟ್​ ಬೀಸಿದರು. ಕೆಎಲ್​ ರಾಹುಲ್​ ಅಜೇಯ 64 ರನ್​ ಗಳಿಸಿದರೆ, ಹಾರ್ದಿಕ್ 36 ರನ್ ಗಳಿಸಿದರು. ಚಮಿಕಾ ಕರುಣರತ್ನೆ ಮತ್ತು ಲಹಿರು ಕುಮಾರ ತಲಾ ಎರಡು ವಿಕೆಟ್ ಪಡೆದು ಭಾರತದ ರನ್ ಚೇಸ್​ಗೆ ಕಡಿವಾಣ ಹಾಕಿದರು.

ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ್ದ ಲಂಕಾಕ್ಕೆ ಕುಲ್​ದೀಪ್​ ಯಾದವ್​ ಮತ್ತು ಸಿರಾಜ್ ಕಾಡಿದರು. ಇಬ್ಬರೂ ತಲಾ ಮೂರು ವಿಕೆಟ್​​ ಪಡೆದು ಸಿಂಹಳೀಯರನ್ನು 215ರನ್​ಗೆ ಕಟ್ಟಿಹಾಕಿದರು. ನಿನ್ನೆ ಲಂಕಾ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ನುವಾನಿಡು ಫೆರ್ನಾಂಡೋ ಅರ್ಧಶತಕ ಗಳಿಸಿ ಸಿಂಹಳೀಯರಿಗೆ ನೆರವಾದರು.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಗೆಲುವಿನ ದಡ ಸೇರಿಸಿದ ರಾಹುಲ್:​ ಏಕದಿನ ಸರಣಿ ಭಾರತದ ಕೈವಶ

ABOUT THE AUTHOR

...view details