ಕರ್ನಾಟಕ

karnataka

ಏಕದಿನ ತಂಡದಲ್ಲಿ ಶಿಖರ್ ಧವನ್​ಗೆ​ ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ: ಸಬಾ ಕರೀಮ್

By

Published : Dec 13, 2021, 9:19 PM IST

ಧವನ್​ ಕಳೆದ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ದ್ವಿತೀಯ ದರ್ಜೆಯ ಭಾರತ ತಂಡದಲ್ಲಿ ಕೊನೆಯ ಬಾರಿ ಆಡಿದ್ದರು. ನಂತರ ಐಪಿಎಲ್​ನಲ್ಲಿ 2021ರಲ್ಲಿ ಡೆಲ್ಲಿಪರ 587 ರನ್​ಗಳಿಸಿದ ಹೊರತಾಗಿಯೂ ಅವರೂ ಟಿ-20 ವಿಶ್ವಕಪ್​​ಗಾಗಿ ಘೋಷಿಸಿದ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು.

Shikhar Dhawan ODI future
ಶಿಖರ್ ಧವನ್​ ಏಕದಿನ ಕ್ರಿಕೆಟ್​

ನವದೆಹಲಿ: ಈಗಾಗಲೇ ಭಾರತ ಟೆಸ್ಟ್​ ಮತ್ತು ಟಿ-20 ತಂಡದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟರ್​ ಶಿಖರ್ ಧವನ್ ಅವ​ರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾರತ ತಂಡದ ಮಾಜಿ ಆಯ್ಕೆಗಾರ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಧವನ್​ ಕಳೆದ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ದ್ವಿತೀಯ ದರ್ಜೆಯ ಭಾರತ ತಂಡದಲ್ಲಿ ಕೊನೆಯ ಬಾರಿ ಆಡಿದ್ದರು. ನಂತರ ಐಪಿಎಲ್​ನಲ್ಲಿ 2021ರಲ್ಲಿ ಡೆಲ್ಲಿಪರ 587 ರನ್​ಗಳಿಸಿದ ಹೊರತಾಗಿಯೂ ಅವರು ಟಿ-20 ವಿಶ್ವಕಪ್​​ಗಾಗಿ ಘೋಷಿಸಿದ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು.

ನಂತರ ಭಾರತೀಯರ ಆಯ್ಕೆಗಾರರು ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಸರಣಿಗೂ ಧವನ್​ರನ್ನು ಕಡೆಗಣಿಸಿದ್ದರು. ರೋಹಿತ್ ಮತ್ತು ರಾಹುಲ್ ಜೊತೆಗೆ ಇಶಾನ್ ಕಿಶನ್​ರನ್ನು ಮೀಸಲು ಆರಂಭಿಕನಾಗಿ ಆಯ್ಕೆಮಾಡಿದ್ದರು. ಹಾಗಾಗಿ ಕರೀಮ್ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಧವನ್ ಅವ​ರನ್ನು ಆಯ್ಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

" ಒಂದು ವೇಳೆ ಶಿಖರ್‌ ಧವನ್‌ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರೂ ಅವರೂ ಆಡುವ ಹನ್ನೊಂದರ ಬಳಗದ ಭಾಗವಾಗಲಿದ್ದಾರೆಯೇ? ರೋಹಿತ್‌ ಮತ್ತು ಕೆಎಲ್‌ ರಾಹುಲ್‌ ಈಗಾಗಲೇ ಟೆಸ್ಟ್‌ ಮತ್ತು ಟಿ-20 ಕ್ರಿಕೆರಟ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಅವರೇ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ.

ಅವರನ್ನು ತಂಡದಲ್ಲಿ ಆಯ್ಕೆ ಮಾಡಿ, ಅವರನ್ನು ಪಂದ್ಯದಲ್ಲಿ ಆಡಿಸದಿದ್ದರೆ ಅವರನ್ನು ಆಯ್ಕೆ ಮಾಡುವ ಅಗತ್ಯವಿದೆಯೇ, ಆದ್ದರಿಂದ ಧವನ್‌ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರ ಅಗತ್ಯವೂ ಇಲ್ಲ," ಎಂದು ಖೇಲ್‌ನೀತಿ ಯೂಟ್ಯೂಬ್‌ ಪಾಡ್‌ ಕಾಸ್ಟ್‌ನಲ್ಲಿ ಸಬಾ ಕರೀಮ್‌ ಹೇಳಿದ್ದಾರೆ.

ಎಡ-ಬಲ ಸಂಯೋಜನೆ ಅಗತ್ಯವಾದರೆ ಮಾತ್ರ ಅವಕಾಶ

ಭಾರತ ತಂಡದಲ್ಲಿ ಬಹಳ ಸಮಯದಿಂದ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಎಡ - ಬಲ ಸಂಯೋಜನೆಯಲ್ಲಿ ಆರಂಭಿಕರಾಗಿ ಭಾರಿ ಯಶಸ್ಸು ಕಂಡಿದ್ದಾರೆ. ಈ ಕಾರಣದಿಂದ ಮಾತ್ರ ಶಿಖರ್‌ ಧವನ್ ಭಾರತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಬಲ್ಲರು. ಇಲ್ಲವಾದರೆ ಭಾರತದ ಈ ತಂಡಕ್ಕೆ ಅವರ ಕಮ್‌ಬ್ಯಾಕ್‌ ಅಸಾಧ್ಯ ಎಂದು ಕರೀಮ್‌ ಹೇಳಿದ್ದಾರೆ.

ಶಿಖರ್ ಧವನ್​ ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಸಾಧ್ಯತೆ ಕಡಿಮೆ. ಆದರೆ, ಅವರೊಬ್ಬ ಅನುಭವಿ ಆಟಗಾರ ಎಂಬ ಕಾರಣಕ್ಕೆ ಮಾತ್ರ ಅವರಿಗೆ ಇನ್ನೂ ಹೆಚ್ಚು ಅವಕಾಶಗಳನ್ನು ನೀಡಬೇಕೆಂದು ನಾನು ಭಾವಿಸುತ್ತೇನೆ. ಆದರೆ ಆಯ್ಕೆಗಾರರು ಮತ್ತು ಟೀಮ್​ ಮ್ಯಾನೇಜ್​ಮೆಂಟ್​ ಯಾವ ರೀತಿ ಆಲೋಚಿಸಲಿದೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತ ತಂಡಕ್ಕೆ ಹೇಳಿ ಮಾಡಿಸಿದ ಪ್ಲೇಯರ್.. ಹಾರ್ದಿಕ್ ಪಾಂಡ್ಯಗೆ ಭೀತಿ ತಂದ 'ಆಲ್​ರೌಂಡರ್'ನ ಆಟ

ABOUT THE AUTHOR

...view details