ಕರ್ನಾಟಕ

karnataka

'ಪಾಕ್ ವಿರುದ್ಧ ಆ​ ಪಂದ್ಯದಲ್ಲಿ ಧೋನಿ ನನಗೆ ಚೆಂಡು ನೀಡಿದಾಗ ನಡುಕ ಶುರುವಾಗಿತ್ತು! ಆದರೆ...'

ಭಾರತ ಮೊದಲು ಬ್ಯಾಟಿಂಗ್ ಮಾಡಿ 261 ರನ್​ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 142 ರನ್​ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಧೋನಿ ಭಜ್ಜಿಗೆ ಬೌಲಿಂಗ್ ಮಾಡುವಂತೆ ಚೆಂಡು ನೀಡಿದರು. ಪಂದ್ಯ ನಿರ್ಣಾಯಕ ಸ್ಥಿತಿಯಲ್ಲಿದ್ದರಿಂದ ತಮಗೆ 2ನೇ ಸ್ಪೆಲ್​ ಬೌಲಿಂಗ್ ಮಾಡುವುದಕ್ಕೆ ನಡುಕ ಉಂಟಾಗಿತ್ತು ಎಂದು ಹರ್ಭಜನ್​ ಹೇಳಿಕೊಂಡಿದ್ದಾರೆ.

By

Published : Apr 7, 2022, 7:58 PM IST

Published : Apr 7, 2022, 7:58 PM IST

2011 ವಿಶ್ವಕಪ್​ ಸೆಮಿಫೈನಲ್​

ಮುಂಬೈ:ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳೆಂದರೆ ವಿಶ್ವ ಕ್ರಿಕೆಟ್​ಗೆ ರಸದೌತಣವಾಗಿರುತ್ತದೆ. ಎರಡೂ ರಾಷ್ಟ್ರಗಳಲ್ಲದೆ, ಇಡೀ ವಿಶ್ವ ಕ್ರಿಕೆಟ್​ ಈ ಪಂದ್ಯವನ್ನು ನೋಡುವುದಕ್ಕೆ ಎದುರು ನೋಡುತ್ತಿರುತ್ತದೆ. ಆ ಪಂದ್ಯದ ಫಲಿತಾಂಶವನ್ನು ಕೂಡ ಉಭಯ ದೇಶದ ಅಭಿಮಾನಿಗಳು ತುಂಬಾ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ.

ಪ್ರಸ್ತುತ ಎರಡೂ ದೇಶಗಳ ನಡುವೆ ಸಂಬಂಧ ಹದಗೆಟ್ಟ ಕಾರಣ ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಯುತ್ತಿಲ್ಲ. ಕೇವಲ ಐಸಿಸಿ ಟೂರ್ನಮೆಂಟ್​ನಲ್ಲಿ ಮಾತ್ರ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ವಿಶ್ವಕಪ್​ ಟೂರ್ನಿಯಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. 13 ಮುಖಾಮುಖಿಯಲ್ಲಿ ಭಾರತ 12-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. 1992 ರ ವಿಶ್ವಚಾಂಪಿಯನ್​ ಪಾಕಿಸ್ತಾನ 2022ರ ಟಿ20 ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಮೊದಲ ಜಯ ಸಾಧಿಸಿತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಿಶ್ವಕಪ್​ ಪಂದ್ಯಗಳು ತನ್ನದೇ ಆದ ಚಾರ್ಮ್​ ಹೊಂದಿವೆ. ಅದರಲ್ಲಿ 2011ರ ವಿಶ್ವಕಪ್ ಸೆಮಿಫೈನಲ್ ಕೂಡ ಒಂದು. ಉಪಾಂತ್ಯದ ಪಂದ್ಯದಲ್ಲಿ ಮೊಹಾಲಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಬಗ್ಗೆ ಪ್ಯಾಡಿ ಅಪ್ಟನ್​ ಅವರ 'ಲೆಸೆನ್ಸ್​ ಫ್ರಮ್ ದಿ ವರ್ಲ್ಡ್​ ಬೆಸ್ಟ್​' ಪೋಡ್​ಕಾಸ್ಟ್​​ನಲ್ಲಿ ಭಾರತದ ಲೆಜೆಂಡರಿ ಸ್ಪಿನ್ನರ್ ಕೆಲವು ಸ್ವಾರಸ್ಯಕರ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಮೊದಲು ಬ್ಯಾಟಿಂಗ್ ಮಾಡಿ 261 ರನ್​ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 142 ರನ್​ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಧೋನಿ ಭಜ್ಜಿಗೆ ಬೌಲಿಂಗ್ ಮಾಡುವಂತೆ ಚೆಂಡು ನೀಡಿದರು. ಪಂದ್ಯ ನಿರ್ಣಾಯಕ ಸ್ಥಿತಿಯಲ್ಲಿದ್ದರಿಂದ ತಮಗೆ 2ನೇ ಸ್ಪೆಲ್​ ಬೌಲಿಂಗ್ ಮಾಡುವುದಕ್ಕೆ ನಡುಕ ಉಂಟಾಗಿತ್ತು ಎಂದು ಹರ್ಭಜನ್​ ಹೇಳಿಕೊಂಡಿದ್ದಾರೆ.

"ಮೊಹಾಲಿಯಲ್ಲಿ ಭಾರತ vs ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ನಾನು ಆಡುತ್ತಿದ್ದಾಗ, ಧೋನಿ ನನಗೆ 2ನೇ ಸ್ಪೆಲ್ ಬೌಲಿಂಗ್ ಮಾಡುವುದಕ್ಕೆ ಹೇಳಿದರು. ಆಗ ನಿಜವಾಗಲು ನಡುಗಲು ಆರಂಭಿಸಿದ್ದೆ. ಏಕೆಂದರೆ ಆ ಹಂತದಲ್ಲಿ ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಡ್ರಿಂಕ್ಸ್ ಬ್ರೇಕ್​ ನಂತರ ನನಗೆ ಚೆಂಡನ್ನು ನೀಡಲಾಗಿತ್ತು. ಆ ಸಮಯದಲ್ಲಿ ನಾನು ನನ್ನ ಭಯವನ್ನು ಜನರ ಮುಂದೆ ತೋರುವ ಹಾಗಿರಲಿಲ್ಲ.

ಅಂತಹ ಸಂದರ್ಭದಲ್ಲಿ ನೀವು ತಾಳ್ಮೆ ಕಂಡುಕೊಂಡು, ಇಂತಹದ್ದನ್ನು ಸಾಕಷ್ಟು ಬಾರಿ ನಿಭಾಯಿಸಿದ್ದೀರಾ ಎಂದು ಆಲೋಚಿಸಬೇಕು. ಏಕೆಂದರೆ ಇಂತಹ ಕ್ಷಣವನ್ನು ಪಡೆಯಲು ನೀವು ತುಂಬಾ ಕಠಿಣ ಪರಿಶ್ರಮ ಪಟ್ಟಿರಬೇಕು. ಭಾವನೆಗಳನ್ನು ಬದಿಗೊತ್ತಿ ದೀರ್ಘ ಉಸಿರು ತೆಗೆದುಕೊಂಡು, ನಿಮ್ಮ ಅತ್ಯುತ್ತಮವಾದದ್ದನ್ನು ಹೊರ ತರಬೇಕು. ಹಾಗೆಯೇ ನಾನು ಮಾಡಿದೆ. ಮೊದಲ ಎಸೆತದಲ್ಲೇ ವಿಕೆಟ್​ ಸಿಕ್ಕಿತು. ಇದು ನನ್ನಲ್ಲಿ ಆತ್ಮವಿಶ್ವಾಸ ಮರಳುವಂತೆ ಮಾಡಿತು. ಆ ವಿಕೆಟ್​ ಪಡೆದ ನಂತರ ನಾನು ಶಾಂತವಾಗಿದ್ದೆ ಮತ್ತು ಮನಸ್ಸು ಭಾವನೆಗಳಿಂದ ತುಂಬಿತ್ತು. ಆ ವಿಕೆಟ್ ನನಗೆ ನೆಮ್ಮದಿಯ ಉಸಿರಾಟವನ್ನು ನೀಡಿತ್ತು ಎಂದು ಟರ್ಬನೇಟರ್​ ವಿವರಿಸಿದ್ದಾರೆ.

ಚೊಚ್ಚಲ ಟಿ20 ವಿಶ್ವಕಪ್​​ ಫೈನಲ್​ನಲ್ಲೂ ಧೋನಿ ಕೊನೆ ಓವರ್​ ಎಸೆಯಲು ಹರ್ಭಜನ್​ ಸಿಂಗ್​ಗೆ ಹೇಳಿದ್ದರು. ಆದರೆ ಆ ಓವರ್​ ಎಸೆಯುವುದಕ್ಕೆ ಲೆಜೆಂಡರಿ ಸ್ಪಿನ್ನರ್​ ಸಿದ್ಧರಾಗಿರಲಿಲ್ಲ ಮತ್ತು ಆತ್ಮವಿಶ್ವಾಸದ ಕೊರತೆ ಅನುಭವಿಸಿದ್ದರು. ಕೊನೆಗೆ ಧೋನಿ ಜೋಗಿಂದರ್ ಶರ್ಮಾಗೆ ಚೆಂಡು ನೀಡಿದರು. ನಂತರ ನಡೆದದ್ದು ಇತಿಹಾಸ. ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಭಾರತ ಒಬ್ಬ ಅದ್ಭುತ ನಾಯಕನನ್ನು ಪಡೆದುಕೊಂಡಿತು!.

ಇದನ್ನೂ ಓದಿ:ಯುವ ಆಟಗಾರನಾದರೂ ಪಂತ್​ರಿಂದ ಇದೊಂದು ಕಲೆ ಕಲಿಯಲು ಬಯಸುವೆ: ವಾರ್ನರ್​

ABOUT THE AUTHOR

...view details