ಅಹ್ಮದಾಬಾದ್:ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಜ್ಜುಗೊಳ್ಳುತ್ತಿದ್ದ ಟೀಂ ಇಂಡಿಯಾ ಕ್ಯಾಂಪ್ನಲ್ಲಿ ಇದೀಗ ಕೋವಿಡ್ ಕಾಣಿಸಿಕೊಂಡಿದ್ದು, ಇದರಿಂದ ಕೆರಿಬಿಯನ್ ವಿರುದ್ಧದ ಸರಣಿ ಮೇಲೆ ಕರಿನೆರಳು ಬಿದ್ದಿದೆ.
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಲು ಗುಜರಾತ್ನ ಅಹ್ಮದಾಬಾದ್ಗೆ ಟೀಂ ಇಂಡಿಯಾ ನಿನ್ನೆ ಬಂದಿಳಿದಿದ್ದು, ಇದರ ಬೆನ್ನಲ್ಲೇ ಮಹಾಮಾರಿ ಕೊರೊನಾ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್, ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್ಗೆ ಸೋಂಕು ದೃಢಗೊಂಡಿದ್ದು, ತಂಡದ ಕೆಲ ಸಹ ಸಿಬ್ಬಂದಿಯಲ್ಲೂ ಕೋವಿಡ್ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ತಂಡದ 8 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿರಿ:U19 WC:ನಾಯಕ ಯಶ್ ಶತಕ, ರಶೀದ್ 94, ಆಸ್ಟ್ರೇಲಿಯಾಗೆ 291ರನ್ಗಳ ಗುರಿ ನೀಡಿದ ಭಾರತದ ಯಂಗ್ ಟೈಗರ್ಸ್