ಮುಂಬೈ:ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 2022ರ ಆವೃತ್ತಿಯಲ್ಲಿ ಹೊಸ ನಾಯಕ ರವೀಂದ್ರ ಜಡೇಜಾ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿದ್ದರಿಂದ ಈ ನಿರ್ಣಯ ಸರಿಯಾಗಿದೆ ಎಂದು ಭಾವಿಸಲಾಗಿತ್ತಾದರೂ, ವೀರೇಂದ್ರ ಸೆಹ್ವಾಗ್ ಮಾತ್ರ ಜಡೇಜಾ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದು ಮ್ಯಾನೇಜ್ಮೆಂಟ್ ಮಾಡಿದ ಮೊದಲ ತಪ್ಪು ಎಂದು ಭಾವಿಸಿದ್ದಾರೆ.
ಪ್ರತಿ ಆವೃತ್ತಿಯ ಕೊನೆಯಲ್ಲಿ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಇದು ಧೋನಿ ಅವರ ಕೊನೆ ಐಪಿಎಲ್ ಆಗಿರಬಹುದು ಎಂದು ಚರ್ಚೆ ಮಾಡುತ್ತಿರುತ್ತಾರೆ. ಆದರೆ, 40 ವರ್ಷದ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೂ ಹಳದಿ ಜರ್ಸಿಯಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ. ಧೋನಿ ನಂತರ ಜಡೇಜಾರನ್ನು ನಾಯಕನಾಗಿ ನೇಮಿಸಿದ ಫ್ರಾಂಚೈಸಿ ನಿರ್ಧಾರ ಶ್ಲಾಘನೆಗೆ ಒಳಗಾಗಿತ್ತು.
2022ರ ಮಧ್ಯದಲ್ಲಿ ಧೋನಿ ಮತ್ತೆ ನಾಯಕನಾಗಿ ಮರು ನೇಮಕವಾಗಿದ್ದಾರೆ. ಜಡೇಜಾ ಸತತ ಸೋಲುಗಳಿಂದ ಬಳಲಿ ತಂಡ ಪ್ಲೇ ಆಫ್ ರೇಸ್ನಿಂದ ಹೊರ ಬೀಳುವ ಹಂತಕ್ಕೆ ತಲುಪಿದ ಬೆನ್ನಲ್ಲೇ , ಜಡೇಜಾ ನಾಯಕತ್ವದ ಒತ್ತಡ ತಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಾಯಕತ್ವ ತ್ಯಜಿಸಿದರು. ಈ ಕುರಿತು ಮಾತನಾಡಿರುವ ಸೆಹ್ವಾಗ್, ಧೋನಿ ಮೊದಲಿನಿಂದಲೂ ನಾಯಕನಾಗಿದ್ದರೆ ಸಿಎಸ್ಕೆಗೆ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.