ಚೆನ್ನೈ (ತಮಿಳುನಾಡು): ವಿಶ್ವಕಪ್ನ ಭಾರತದ ಮೊದಲ ಪಂದ್ಯದಲ್ಲಿ 6 ವಿಕೆಟ್ನ ಸ್ವಾರಸ್ಯಕರ ಗೆಲುವನ್ನು ಪಡೆದುಕೊಂಡಿತು. ಪಂದ್ಯದ ವೇಳೆ ಆಸ್ಟ್ರೇಲಿಯನ್ ಅಭಿಮಾನಿಗಳು ಭಾರತದ ಪಿಚ್ನ್ನು ಹಳಿದರು. ಅವರಿಗೆ ಬೇಕಾದ ರೀತಿಯ ಪಿಚ್ಗಳನ್ನು ಮಾಡಿ ಪಂದ್ಯಗಳನ್ನು ಆಡಿಸುತ್ತಿದ್ದಾರೆ ಎಂಬುದು ಕಾಂಗರೂ ಪಡೆಯ ಬೆಂಬಲಿಗರ ಆರೋಪವಾಗಿತ್ತು. ಆದರೆ ಆಸ್ಟ್ರೇಲಿಯಾದ ಆಟಗಾರರು ಟೀಮ್ ಇಂಡಿಯಾದ ಪ್ರದರ್ಶನಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯಾವನ್ನು ಚೆನ್ನೈನಲ್ಲಿ ಭಾರತದ ತ್ರಿವಳಿ ಸ್ಪಿನ್ ದಾಳಿ ಕಾಡಿತು. ಅದರಲ್ಲೂ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ಗೆ ಆಸಿಸ್ನ ಪ್ರಮುಖ ವಿಕೆಟ್ಗಳು ಪತನವಾದವು. ಇದರಿಂದ ಆಸ್ಟ್ರೇಲಿಯಾ 49.3 ಓವರ್ನಲ್ಲಿ 199ಕ್ಕೆ ಆಲ್ ಔಟ್ ಆಯಿತು. 200 ರನ್ನ ಗುರಿಯನ್ನು ಟೀಮ್ ಇಂಡಿಯಾ ನಿಧಾನ ಗತಿಯಲ್ಲೇ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್ ಆಧಾರದಿಂದ ಗೆದ್ದುಕೊಂಡಿತು.
"ಟೀಮ್ ಇಂಡಿಯಾದ ಎಲ್ಲಾ ಸ್ಪಿನ್ನರ್ಗಳು ನಿಜವಾಗಿಯೂ ಸೊಗಸಾಗಿ ಬೌಲಿಂಗ್ ಮಾಡಿದರು. ನಿಸ್ಸಂಶಯವಾಗಿ ಅವರಿಗೆ ಸರಿಹೊಂದುವ ವಿಕೆಟ್ ಕೂಡ ಇತ್ತು. ಅವರೆಲ್ಲರೂ ಉತ್ತಮ ಗುಣಮಟ್ಟದ ಸ್ಪಿನ್ನರ್ಗಳಾಗಿರುವುದರಿಂದ ಅವರ ಬಾಲ್ಗೆ ಬ್ಯಾಟ್ ಮಾಡುವುದು ಸವಾಲಾಗಿತ್ತು. ಅವರು ಚೆನ್ನಾಗಿ ಬೌಲಿಂಗ್ನ್ನು ನಿಭಾಯಿಸಿದರು. ನಮಗೆ ಪಂದ್ಯದನ್ನು ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ" ಎಂದು ಸ್ಟೀವ್ ಸ್ಮಿತ್ ಹೇಳಿದರು.
ಪಂದ್ಯದಲ್ಲಿ ಸ್ಮಿತ್ ಮತ್ತು ಅನುಭವಿ ವಾರ್ನರ್ ಮಾತ್ರ 40 ಗಡಿ ದಾಟಿ ಬ್ಯಾಟಿಂಗ್ ಮಾಡಿದರು. ಈ ಇಬ್ಬರು ಅರ್ಧಶತಕದ ಜೊತೆಯಾಟ ಮಾಡಿದರು. ಸ್ಮಿತ್ 46 ರನ್ ಗಳಿಸಿದರೆ, ವಾರ್ನರ್ 41 ರನ್ ಕಲೆಹಾಕಿದ್ದರು. ಇವರ ರನ್ ಸಹಾಯದಿಂದ 199 ರನ್ ಗುರಿ ನೀಡಲು ಸಾಧ್ಯವಾಯಿತು. ಇಬ್ಬರು ಅನುಭವಿಗಳು ಭಾರತೀಯ ಸ್ಪಿನ್ನರ್ಗಳನ್ನು ತಾಳ್ಮೆಯಿಂದ ಎದುರಿಸಿದರೂ, ಜಡೇಜಾ, ಕುಲ್ದೀಪ್ ಸ್ಪಿನ್ಗೆ ವಿಕೆಟ್ ಒಪ್ಪಿಸಿದರು.