ಕರ್ನಾಟಕ

karnataka

ETV Bharat / sports

ಇನ್ನೂ ಏಕದಿನ ಕ್ರಿಕೆಟ್​ ಆಡದ ಮಯಾಂಕ್​ ವಿಶ್ವಕಪ್​ಗೆ ಆಯ್ಕೆ ಯಾಕೆ?: ಮಾಜಿ ಆಟಗಾರರ ಪ್ರಶ್ನೆ - undefined

ಆಲ್​ರೌಂಡರ್​ ವಿಜಯ್​ ಶಂಕರ್ ಸ್ಥಾನಕ್ಕೆ ಆರಂಭಿಕ ಆಟಗಾರ ಅಗರವಾಲ್​ ಸಮಂಜಸವೇ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಈ ಹಿಂದೆ ಧವನ್​ ಗಾಯಾಳುವಾದಾಗ ರಿಷಭ್​​​ ಪಂತ್​ ಟೀಂಗೆ ಸೇರ್ಪಡೆಯಾಗಿದ್ದರು.

ಮಯಾಂಕ್

By

Published : Jul 2, 2019, 7:50 PM IST

ಹೈದರಾಬಾದ್​:ಗಾಯದ ಹಿನ್ನೆಲೆಯಲ್ಲಿ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಆಲ್​ರೌಂಡರ್​ ವಿಜಯ್​ ಶಂಕರ್​ ಸ್ಥಾನಕ್ಕೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಮಯಾಂಕ್ ಅಗರವಾಲ್​ ಆಯ್ಕೆ ಬಗ್ಗೆ ಮಾಜಿ ಆಟಗಾರರಿಂದ ಪ್ರಶ್ನೆ ಮೂಡಿದೆ.

ಆಲ್​ರೌಂಡರ್​ ವಿಜಯ್​ ಶಂಕರ್ ಸ್ಥಾನಕ್ಕೆ ಆರಂಭಿಕ ಆಟಗಾರ ಅಗರವಾಲ್​ ಸಮಂಜಸವೇ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಈ ಹಿಂದೆ ಧವನ್​ ಗಾಯಾಳುವಾದಾಗ ರಿಷಭ್​​ ಪಂತ್​ ಟೀಂಗೆ ಸೇರ್ಪಡೆಯಾಗಿದ್ದರು. ಇವರಿಬ್ಬರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಆಟಗಾರ ಮೊಹಮದ್​ ಕೈಫ್​, ಈ ಇಬ್ಬರೂ ಆಟಗಾರರೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಹೊಸಬರು. ಪಂತ್​ ಕೆಲವೇ ಪಂದ್ಯಗಳನ್ನು ಆಡಿದ್ದರೆ, ಮಯಾಂಕ್​ ಇನ್ನೂ ಕೂಡ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಈ ಇಬ್ಬರೂ ಆಟಗಾರರು ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡವರಲ್ಲ. ಇದೀಗ ವಿಶ್ವಕಪ್​ ಟೂರ್ನಿಯಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಸಾಕಷ್ಟು ಅಭ್ಯಾಸ ನಡೆಸಿದ್ದರೂ ಕೂಡ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹಾಗೂ ಒತ್ತಡ ನಿಭಾಯಿಸುವುದು ಬಹಳ ಮುಖ್ಯ ಎಂಬುದು ಕೈಫ್​ ಮಾತಾಗಿದೆ.

ಇನ್ನು ಇಂಗ್ಲೆಂಡ್​ ವಿರುದ್ಧ 338 ರನ್​ ಟಾರ್ಗೆಟ್​ ತಲುಪುವುದು ಸುಲಭವಲ್ಲ. ಕ್ರಿಕೆಟ್​​ನಲ್ಲಿ ಯಾವುದಾದರೊಂದು ತಂಡ ಸೋಲಲೇಬೇಕು. ವಿಶ್ವಕಪ್​ನಲ್ಲಿ ಈ ಹಿಂದಿನ ಪಂದ್ಯಗಳಲ್ಲೂ ಅನೇಕ ತಂಡಗಳು ರನ್​ ಬೆನ್ನತ್ತುವಾಗ ಎಡವಿರುವುದನ್ನು ನಾವು ನೋಡಬಹುದು ಎಂದಿದ್ದಾರೆ.

For All Latest Updates

TAGGED:

ABOUT THE AUTHOR

...view details