ಕರ್ನಾಟಕ

karnataka

ವಿಶ್ವಕಪ್​ನಿಂದ ವಿಜಯ್​ ಶಂಕರ್​ ಔಟ್​: ಮತ್ತೊಬ್ಬ ಕನ್ನಡಿಗನಿಗೆ ಸಿಕ್ತು ಚಾನ್ಸ್!

By

Published : Jul 1, 2019, 2:24 PM IST

ಕಾಲ್ಬೆರಳು ಗಾಯಕ್ಕೆ ತುತ್ತಾಗಿದ್ದ ವಿಜಯ್​ ಶಂಕರ್​ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ವಿಶ್ವಕಪ್​ನಿಂದ ವಿಜಯ್​ ಶಂಕರ್​ ಔಟ್​:

ನವದೆಹಲಿ: ಕಾಲ್ಬೆರಳು ಗಾಯಕ್ಕೆ ತುತ್ತಾಗಿದ್ದ ಟೀಂ ಇಂಡಿಯಾ ಆಟಗಾರ ವಿಜಯ್​ ಶಂಕರ್ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಅಭ್ಯಾಸದ ವೇಳೆ ಬುಮ್ರಾ ಬೌಲಿಂಗ್​ನಲ್ಲಿ ಗಾಯಗೊಂಡಿದ್ದ ವಿಜಯ್​ ಶಂಕರ್​ ನೋವಿನಿಂದ ಬಳಲುತ್ತಿದ್ದರು. ಸದ್ಯ ಚೇತರಿಕೆ ಕಾಣದ ವಿಜಯ್​ ಶಂಕರ್​ಗೆ ವೈದ್ಯರು 3 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಆಲ್​ರೌಂಡರ್​​​ ​ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಜಯ್​ ಶಂಕರ್​ ಬದಲಿಗೆ ಕನ್ನಡಿಗ ಮಯಾಂಕ್​ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ.

ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಆರಂಭಿಕ ಆಟಗಾರ ಶಿಖರ್​ ಧವನ್ ಕೂಡ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.

ABOUT THE AUTHOR

...view details